ಮಗಳ ಬಳಿ ಫೋನ್ ಕಿತ್ತುಕೊಂಡ ತಾಯಿ ಕೊಲ್ಲಲು ಪದೇ ಪದೇ ಸಂಚು ಮಾಡಿದ 13 ವರ್ಷದ ಮೊಬೈಲ್ ವ್ಯಸನಿ!

Published : Jun 19, 2023, 10:22 PM ISTUpdated : Jun 19, 2023, 11:13 PM IST
ಮಗಳ ಬಳಿ ಫೋನ್ ಕಿತ್ತುಕೊಂಡ ತಾಯಿ ಕೊಲ್ಲಲು ಪದೇ ಪದೇ ಸಂಚು ಮಾಡಿದ 13 ವರ್ಷದ ಮೊಬೈಲ್ ವ್ಯಸನಿ!

ಸಾರಾಂಶ

ಗುಜರಾತ್‌ನ ಪಶ್ಚಿಮ ಅಹಮದಾಬಾದ್‌ನಲ್ಲಿ ನೆಲೆಸಿರುವ 45 ವರ್ಷದ ಮಹಿಳೆಯೊಬ್ಬರು  ತಮ್ಮ ಮನೆಯಲ್ಲಿ ಸಕ್ಕರೆ ಪಾತ್ರೆಯಲ್ಲಿ ಕೀಟನಾಶಕ ಪುಡಿ ಮತ್ತು ಬಾತ್‌ರೂಮಿನಲ್ಲಿ ಫೀನೈಲ್‌ನಂತಹ ದ್ರವವನ್ನು ಆಗಾಗ್ಗೆ ಕಂಡು ಆಘಾತಕ್ಕೊಳಗಾಗಿದ್ದಾರೆ.

ಅಹಮದಾಬಾದ್ (ಜೂನ್ 19, 2023): ಇತ್ತೀಚೆಗೆ ಪುಟ್ಟ ಮಕ್ಕಳಲ್ಲಿ ಮೊಬೈಲ್‌ ವ್ಯಸನ ಹೆಚ್ಚಾಗ್ತಾನೇ ಇದೆ. ಈ ಹವ್ಯಾಸ ಒಮ್ಮೊಮ್ಮೆ ಪ್ರಾಣವನ್ನೇ ಕಳೆದುಕೊಳ್ಳುವ ಅಥವಾ ಪ್ರಾಣವನ್ನೇ ತೆಗೆಯಬಹುದು. ನಾವು ಹೇಳಲು ಹೊರಟಿರುವ ಈ ಕತೆಯಲ್ಲಿ ಮಗಳು ಅಮ್ಮನ ಪ್ರಾಣವನ್ನೇ ಮುಗಿಸಲು ಸಂಚು ರೂಪಿಸಿರುವ ಆಘಾತಕಾರಿ ಪ್ರಕರಣ ವರದಿಯಾಗಿದೆ. 

ಗುಜರಾತ್‌ನ ಪಶ್ಚಿಮ ಅಹಮದಾಬಾದ್‌ನಲ್ಲಿ ನೆಲೆಸಿರುವ 45 ವರ್ಷದ ಮಹಿಳೆಯೊಬ್ಬರು  ತಮ್ಮ ಮನೆಯಲ್ಲಿ ಸಕ್ಕರೆ ಪಾತ್ರೆಯಲ್ಲಿ ಕೀಟನಾಶಕ ಪುಡಿ ಮತ್ತು ಬಾತ್‌ರೂಮಿನಲ್ಲಿ ಫೀನೈಲ್‌ನಂತಹ ದ್ರವವನ್ನು ಆಗಾಗ್ಗೆ ಕಂಡು ಆಘಾತಕ್ಕೊಳಗಾಗಿದ್ದಾರೆ. ಇನ್ನು, ಸೂಕ್ಷ್ಮವಾಗಿ ಗಮನಿಸಿದಾಗ  ತನ್ನ 13 ವರ್ಷದ ಮಗಳು ತನ್ನನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾಳೆ ಎಂಬುದು ತಾಯಿಯ ಅರಿವಿಗೆ ಬಂದಿದೆ. ಇಂತಹ ಘಟನೆಗಳು ಮುಂದುವರಿದಾಗ, ಪರಿಹಾರವನ್ನು ಕೋರಿ ಸಹಾಯವಾಣಿಗೆ ಕರೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಇದನ್ನು ಓದಿ: ಫೋನ್‌ ನೋಡ್ಬೇಡ ಅಂದಿದ್ದೇ ತಪ್ಪಾಯ್ತಾ? ಅಮ್ಮ ಬೈದ್ರು ಅಂತ ನೇಣು ಹಾಕಿಕೊಂಡು ಸತ್ತ 13 ವರ್ಷದ ಬಾಲಕಿ

"ನಮ್ಮ ಮಾತುಕತೆಯಲ್ಲಿ ಹದಿಹರೆಯದ ಹುಡುಗಿಯು ಪೋಷಕರಿಗೆ ಹಾನಿ ಮಾಡಲು ಬಯಸಿದ್ದಾಳೆಂದು ತಿಳಿದುಬಂದಿದೆ. ಅವರು ಕೀಟನಾಶಕಗಳನ್ನು ಬೆರೆಸಿದ ಸಕ್ಕರೆಯನ್ನು ಸೇವಿಸಲು ಅಥವಾ ನೆಲದ ಮೇಲೆ ಜಾರಿ ಬಿದ್ದು ತಲೆಗೆ ಗಾಯ ಮಾಡಿಕೊಳ್ಳಲು ಬಯಸಿದ್ದರು. ಕೆಲವು ದಿನಗಳ ಹಿಂದೆ ತಾಯಿ ಮಗಳ ಬಳಿ ಇದ್ದ ಫೋನ್ ಅನ್ನು ಕಸಿದುಕೊಂಡಿದ್ದಾರೆ ಹಾಗೂ  ಅದನ್ನು ಹಿಂತಿರುಗಿಸಲು ನಿರಾಕರಿಸಿದರು ಎಂದೂ ನಮಗೆ ತಿಳಿದುಬಂತು. ಅಂದಿನಿಂದ, ಮಗಳು ಈ ರೀತಿ ಹಿಂಸಾಚಾರ ಪ್ರವೃತ್ತಿ ಹೊಂದುತ್ತಿದ್ದಾಳೆ" ಎಂದು ಅಭಯಂ 181 ಮಹಿಳಾ ಸಹಾಯವಾಣಿಯ ಸಲಹೆಗಾರರೊಬ್ಬರು ಹೇಳಿದರು.

"ಹುಡುಗಿ ಇಡೀ ರಾತ್ರಿ ಫೋನ್‌ನಲ್ಲಿ ಕಳೆಯುತ್ತಿದ್ದಳು, ಆನ್‌ಲೈನ್ ಸ್ನೇಹಿತರೊಂದಿಗೆ ಚಾಟ್ ಮಾಡುತ್ತಿದ್ದಳು ಅಥವಾ ರೀಲ್ಸ್‌ ಹಾಗೂ ಪೋಸ್ಟ್‌ಗಳನ್ನು ವೀಕ್ಷಿಸುತ್ತಾ ಸಾಮಾಜಿಕ ಮಾಧ್ಯಮದಲ್ಲಿ ಸಮಯ ಕಳೆಯುತ್ತಿದ್ದಳು ಎಂದು ಪೋಷಕರು ನಮಗೆ ತಿಳಿಸಿದ್ದಾರೆ. ಇದು ಅವಳ ಅಧ್ಯಯನ ಮತ್ತು ಸಾಮಾಜಿಕ ಜೀವನವನ್ನು ಬಹಳವಾಗಿ ಅಡ್ಡಿಪಡಿಸಿತ್ತು’’ ಎಂದೂ ಸಲಹೆಗಾರರು ಹೇಳಿದ್ದಾರೆ.

ಇದನ್ನೂ ಓದಿ: ಮಹಿಳೆಗೆ ಚಿಕಿತ್ಸೆ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ನಕಲಿ ವೈದ್ಯ: ಕಾಮುಕನನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದ ಪತಿ

ಇನ್ನು, ಈ ರೀತಿಯ ಪ್ರತಿಕ್ರಿಯೆಯನ್ನು ನಿರೀಕ್ಷಿಸದ ಪೋಷಕರು ಕಂಗಾಲಾಗಿದ್ದರು. ಮದುವೆಯಾಗಿ 13 ವರ್ಷಗಳಾದ ಬಳಿಕ ಹುಟ್ಟಿದ ಹೆಣ್ಣುಮಗುವನ್ನು ಮುದ್ದಾಗಿ ಬೆಳೆಸಿದ್ದರ ಪರಿಣಾಮ ಈ ರೀತಿಯಾಗಿರಬಹುದು ಎಂದು ಹೇಳಲಾಗಿದೆ. 

ಆದರೆ ಈ ರಿತಿ ಪ್ರಕರಣಗಳು ಸಹಾಯವಾಣಿ ಬಳಿ ಬರುತ್ತಲೇ ಇರುತ್ತವೆ ಎಂದು ಅಭಯಂ ಸಹಾಯವಾಣಿಯ ಸಂಯೋಜಕ ಫಲ್ಗುಣಿ ಪಟೇಲ್ ಹೇಳಿದ್ದಾರೆ. "2020 ಅಥವಾ ಕೋವಿಡ್ ಸಾಂಕ್ರಾಮಿಕದ ಮೊದಲು, ನಾವು ದಿನಕ್ಕೆ ಇಂತಹ ಕೇವಲ 3-4 ಕರೆಗಳನ್ನು ಪಡೆಯುತ್ತಿದ್ದೆವು. ಕಳೆದ 2 ವರ್ಷಗಳಲ್ಲಿ ಇದು ದಿನಕ್ಕೆ ಸುಮಾರು 12-15 ಕರೆಗಳೊಂದಿಗೆ 3 ಪಟ್ಟು ಹೆಚ್ಚಾಗಿದೆ. ವಾರ್ಷಿಕವಾಗಿ ಸುಮಾರು 5,400 ಕರೆಗಳು ಬಂದಿದೆ ಎಂದೂ ತಿಳಿಸಿದ್ದಾರೆ.

ಇದನ್ನೂ ಓದಿ: "ಜೈ ಶ್ರೀ ರಾಮ್" ಘೋಷಣೆ ಕೂಗಲು ಒತ್ತಾಯಿಸಿ ಮುಸ್ಲಿಂ ವ್ಯಕ್ತಿ ಥಳಿಸಿ ಮರಕ್ಕೆ ಕಟ್ಟಿ ಹಾಕಿದ ಪಾಪಿಗಳು: ಓವೈಸಿ ಆಕ್ರೋಶ

ಹೆಚ್ಚು ಆತಂಕಕಾರಿ ಪ್ರವೃತ್ತಿಯು ಮಕ್ಕಳು ಮತ್ತು ಹದಿಹರೆಯದವರನ್ನು ಒಳಗೊಂಡಿರುವ ಒಟ್ಟು ಕರೆಗಳಲ್ಲಿ, ಸುಮಾರು 20% ಕರೆಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ಸಂಬಂಧಿಸಿವೆ ಎಂದು ಅವರು ಹೇಳಿದರು. ಒಟ್ಟಾರೆ ಪ್ರಮಾಣದ ಕರೆಗಳಲ್ಲಿ, 2019 ರವರೆಗೆ ಕೇವಲ 1-1.5% ರಷ್ಟು ಬರುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ, ಅಂತಹ ಕರೆಗಳು ಒಟ್ಟು ಪ್ರಮಾಣ ಸುಮಾರು 3% ರಷ್ಟಿದೆ, ಇದು ಗಮನಾರ್ಹವಾದ ಏರಿಕೆ ಎದೂ ಹೇಳಿದ್ದಾರೆ.

ಹದಿಹರೆಯದವರು ಕೋವಿಡ್‌ ಸಾಂಕ್ರಾಮಿಕ ಅವಧಿಯಲ್ಲಿ ತಮ್ಮ ಅಧ್ಯಯನಕ್ಕಾಗಿ ಫೋನ್ ಬಳಸುತ್ತಿದ್ದರಿಂದ ಈ ಏರಿಕೆಗೆ ಹೊಂದಿಕೆಯಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ಮೊದಲು, ಮಕ್ಕಳು ಆಗಾಗ್ಗೆ ತಮ್ಮ ಪೋಷಕರಿಂದ ಫೋನ್ ಕರೆಗಳನ್ನು ಮಾಡುತ್ತಿದ್ದರಾದರೂ, ತಮ್ಮ ಪೋಷಕರ ಕೋಪಕ್ಕೆ ಹೆದರಿ ಸಾಮಾಜಿಕ ಮಾಧ್ಯಮ ಅಥವಾ ಇತರ ಜಾಲತಾಣಗಳ ಬಳಕೆ ಹೆಚ್ಚಾಗಿರಲಿಲ್ಲ. ಆದರೀಗ, ಆನ್‌ಲೈನ್ ಗೇಮ್ಸ್ ಮತ್ತು ಸಾಮಾಜಿಕ ಮಾಧ್ಯಮಗಳು ಹದಿಹರೆಯದವರ 2 ಪ್ರಮುಖ ಚಟುವಟಿಕೆಗಳಾಗಿವೆ ಎಂದು ಸಲಹೆಗಾರರು ಹೇಳಿದ್ದಾರೆ.

ಇದನ್ನೂ ಓದಿ: ಕುಡಿದು ಟೈಟಾಗಿದ್ದ ಮಹಿಳೆಯನ್ನು ಫ್ಲ್ಯಾಟ್‌ಗೆ ಹೊತ್ತೊಯ್ದು ಅತ್ಯಾಚಾರವೆಸಗಿದ ಭಾರತೀಯ ಮೂಲದ ವಿದ್ಯಾರ್ಥಿ

ಈ ಹಿನ್ನೆಲ್ ತಮ್ಮ ಫೋನ್‌ಗಳನ್ನು ಕಸಿದುಕೊಂಡಾಗ ಇತರರಿಗೆ ಹಾನಿಯುಂಟುಮಾಡುವುದು ತೀವ್ರತರ ಪ್ರತಿಕ್ರಿಯೆಯಾಗಿದೆ. ಹಾಗೂ, ಸ್ವಯಂ-ಹಾನಿ ಪ್ರವೃತ್ತಿಯನ್ನು ಪ್ರದರ್ಶಿಸುವ ಪ್ರಕರಣಗಳನ್ನು ನಾವು ಸಾಮಾನ್ಯವಾಗಿ ಕಂಡುಕೊಂಡಿದ್ದೇವೆ ಎಂದು ಸೈಕಿಯಾಟ್ರಿಸ್ಟ್‌ ಒಬ್ಬರು ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್
ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು