ದೆಹಲಿ ಗಲಭೆ; ಜನತೆಯಲ್ಲಿ ಸೆಹ್ವಾಗ್, ಯುವರಾಜ್ ಮನವಿ!

By Chethan KumarFirst Published Feb 26, 2020, 8:32 PM IST
Highlights

ಪೌರತ್ವ ಕಾಯ್ದೆ ಪರ ವಿರೋಧ ಹೋರಾಟ ಹಿಂಸಾರೂಪಕ್ಕೆ ತಿರುಗಿ 20 ಮಂದಿ ಸಾವೀಗೀಡಾಗಿದ್ದಾರೆ. ಉಗ್ರ ಸ್ವರೂಪ ಪಡೆದುಕೊಂಡಿರುವ ಹೋರಾಟ ರಾಷ್ಟ್ರ ರಾಜಧಾನಿಯನ್ನೇ ಸ್ಥಬ್ತವಾಗಿಸಿದೆ. ಇದೀಗ ದೆಹಲಿ ಗಲಬೆ ಕುರಿತು ಟೀಂ ಇಂಡಿಯಾ ಕ್ರಿಕೆಟಿಗರು ಪ್ರತಿಕ್ರಿಯಿಸಿದ್ದಾರೆ.
 

ದೆಹಲಿ(ಫೆ.26): ರಾಷ್ಟ್ರ ರಾಜಧಾನಿ ದೆಹಲಿ ಹೊತ್ತಿ ಉರಿಯುತ್ತಿದೆ. ಪೌರತ್ವ ಪರ ವಿರೋಧ ಹೋರಾಟದ ಹಿಂಸೆಯಲ್ಲಿ 20 ಮಂದಿ ಸಾವೀಗೀಡಾಗಿದ್ದಾರೆ. ಸೂಕ್ತ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಪೊಲೀಸರಿಗೆ ಸೂಚಿಸಿದೆ. ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ. ಇದೀಗ ದೆಹಲಿ ಗಲಭೆ ಕುರಿತು ಮಾಜಿ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್ ಹಾಗೂ ಯುವರಾಜ್ ಸಿಂಗ್ ಮನವಿ ಮಾಡಿದ್ದಾರೆ. 

ದೆಹಲಿ ಗಲಭೆ ಕುರಿತು ಪ್ರತಿಕ್ರಿಯಿಸಿರುವ ಯುವರಾಜ್ ಸಿಂಗ್, ದೆಹಲಿ ಪರಿಸ್ಥಿತಿ ಬೆಚ್ಚಿ ಬೀಳಿಸುವಂತಿದೆ. ಈ ಸಂದರ್ಭದಲ್ಲಿ ಎಲ್ಲರು ಶಾಂತಿಯಿಂದಿರಿ ಎಂದು ಮನವಿ ಮಾಡುತ್ತೇನೆ. ಅಧಿಕಾರಿಗಳು ಪೊಲೀಸಲು ಪರಿಸ್ಥಿತಿಯನ್ನು ಹತೋಟಿ ತರಲಿದ್ದಾರೆ. ನಾವೆಲ್ಲ ಮನುಷ್ಯರು. ನಮಗೆ ಪ್ರೀತಿ, ವಿಶ್ವಾಸ, ಗೌರವ ಮುಖ್ಯ ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.

 

What’s going on in Delhi is heart breaking, requesting everyone to please maintain peace and harmony. Hoping the authorities will take corrective measures to curb the situations. End of the day we are all humans, we need to love and respect each other 🙏

— yuvraj singh (@YUVSTRONG12)

ದೆಹಲಿಯಲ್ಲಿ ನಡೆಯುತ್ತಿುವ ಗಲಭೆ ದುರದೃಷ್ಟಕರ. ನಾನು ಎಲ್ಲರಲ್ಲಿ ಮನವಿ ಮಾಡುತ್ತೇನೆ. ಎಲ್ಲರೂ ಶಾಂತಿ ಹಾಗೂ ಸಹನೆಯಿಂದಿರಿ. ರಾಷ್ಟ್ರ ರಾಜಧಾನಿಯಲ್ಲಿ ಯಾರೇ ಗಾಯಗೊಂಡರೂ, ಯಾರೇ ಸಾವನ್ನಪ್ಪಿದರೂ ಅದು ಅತೀ ದೊಡ್ಡ ನಷ್ಟ. ಹೀಗಾಗಿ ಎಲ್ಲರೂ ಶಾಂತಿ ಕಾಪಾಡಿ ಎಂದು ವಿರೇಂದ್ರ ಸೆಹ್ವಾಗ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

 

What is happening in Delhi is unfortunate. My request to all of you is to keep calm and peace in Delhi. Any injury or harm to anyone is a blot on the capital of this great country. I wish peace and sanity to one and all.

— Virender Sehwag (@virendersehwag)

ಹರ್ಭಜನ್ ಸಿಂಗ್ ಕೂಡ ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ. 
 

click me!
Last Updated Feb 26, 2020, 8:33 PM IST
click me!