ತುನಿಶಾ ಶರ್ಮಾ ಜತೆ ಬ್ರೇಕಪ್‌ ಆಗಲು ಶ್ರದ್ಧಾ ವಾಕರ್‌ ಹತ್ಯೆ ಕಾರಣ..!

By BK AshwinFirst Published Dec 27, 2022, 12:07 PM IST
Highlights

ಶ್ರದ್ಧಾ ಹತ್ಯೆಯ ಸುದ್ದಿ ಕೇಳಿ ವಿಚ​ಲಿ​ತ​ನಾ​ಗಿದ್ದೆ. ನಾವಿ​ಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿ​ರು​ವು​ದ​ರಿಂದ ಹಾಗೂ ನಮ್ಮಿ​ಬ್ಬರ ನಡು​ವಿನ ವಯ​ಸ್ಸಿನ ಅಂತ​ರ​ದಿಂದಾಗಿ ಈ ಸಂಬಂಧ ಮುಂದು​ವ​ರೆ​ಸು​ವುದು ಅಸಾಧ್ಯ ಎಂದು ಹೇಳಿದ್ದೆ ಎಂದು ಶಿಜಾನ್‌ ಖಾನ್‌ ಹೇಳಿದ್ದಾರೆ. 

ಶೂಟಿಂಗ್‌ ಸೆಟ್‌​ನ​ಲ್ಲೇ (Shooting Set) ಆತ್ಮ​ಹ​ತ್ಯೆಗೆ (Suicide) ಶರ​ಣಾದ ಯುವ​ನಟಿ ತುನಿಶಾ ಶರ್ಮಾ (Tunisha Sharma) (20) ಆತ್ಮಹತ್ಯೆ ಪ್ರಕರಣದ ಆರೋಪಿ ನಟ ಶಿಜಾನ್‌ ಖಾನ್‌ (Sheezan Khan) ಮೇಲೆ ದಿಲ್ಲಿಯ ಶ್ರದ್ಧಾ ವಾಕರ್‌ ಹತ್ಯೆ ಪ್ರಕರಣ (Shraddha Walker Murder Case) ಪರಿಣಾಮ ಬೀರಿದೆ ಎಂಬ ಸಂಗತಿ ಪೊಲೀಸ್‌ ವಿಚಾರಣೆಯಿಂದ (Police Inquiry) ಬಯಲಾಗಿದೆ. ತುನಿಶಾ ಶರ್ಮಾಳ ಪ್ರಿಯಕರ ಶಿಜಾನ್‌ ಖಾನ್‌ ನಮ್ಮ ಬ್ರೇಕಪ್‌ಗೆ (Break Up) ಶ್ರದ್ಧಾ ಹತ್ಯೆ ಪ್ರಕರಣ ಕಾರಣ ಎಂದು ಹೇಳಿದ್ದಾರೆ. ‘ಶ್ರದ್ಧಾ ಹತ್ಯೆಯ ಸುದ್ದಿ ಕೇಳಿ ವಿಚ​ಲಿ​ತ​ನಾ​ಗಿದ್ದೆ. ನಾವಿ​ಬ್ಬರು ಬೇರೆ ಬೇರೆ ಧರ್ಮಕ್ಕೆ ಸೇರಿ​ರು​ವು​ದ​ರಿಂದ ಹಾಗೂ ನಮ್ಮಿ​ಬ್ಬರ ನಡು​ವಿನ ವಯ​ಸ್ಸಿನ ಅಂತ​ರ​ದಿಂದಾಗಿ ಈ ಸಂಬಂಧ ಮುಂದು​ವ​ರೆ​ಸು​ವುದು ಅಸಾಧ್ಯ ಎಂದು ಹೇಳಿದ್ದೆ. ಹೀಗಾಗಿ ಇಬ್ಬರೂ ಬೇರ್ಪ​ಡು​ವುದು ಒಳ್ಳೆ​ಯದು ಎಂದು ಹೇಳಿ​ದ್ದೆ.15 ದಿನಗಳ ಹಿಂದೆ ನಾವು ಬೇರೆ ಬೇರೆಯಾಗುವುದಕ್ಕೆ ಇದೇ ಕಾರಣ’ ಎಂದು ವಿಚಾರಣೆ ವೇಳೆ ಶಿಜಾನ್‌ ಖಾನ್‌ ಹೇಳಿದ್ದಾರೆ ಎಂದು ವರದಿಯಾಗಿದೆ.

ಶ್ರದ್ಧಾ ವಾಕರ್‌ ಹಾಗೂ ಅಫ್ತಾಬ್‌ ಪೂನಾವಾಲಾ ಲಿವ್ ಇನ್‌ ರಿಲೇಶನ್‌ಶಿಪ್‌ನಲ್ಲಿ ಇದ್ದರು. ಶ್ರದ್ಧಾಳನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು ತುಂಡು ಮಾಡಿ ಬಿಸಾಡಿದ್ದ ಪೂನಾವಾಲಾನ ಕ್ರೌರ್ಯ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದರು. ಲವ್‌ ಜಿಹಾದ್‌ ಸಂಚಿನ ಭಾಗವಾಗಿಯೇ ಈ ಕೊಲೆ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯೂ ಆಗಿತ್ತು. ಇನ್ನು, ನಟಿ ತುನಿಶಾ ಶರ್ಮಾ ಡಿಸೆಂಬರ್ 24 ರಂದು ವಸಾಯ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಳು.

ಇದನ್ನು ಓದಿ: ಪಬ್ಲಿಕ್‌ ಟಾಯ್ಲೆಟ್‌ನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಕಿರುತೆರೆ ನಟ; ಪೋಷಕರಿಂದಲೂ ದೂರ ದೂರ

ಬಂಧನವಾದ ಮೊದಲ ದಿನವೇ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಮಾಧ್ಯಮ ಪ್ರಸಾರವನ್ನು ನೋಡಿದ ನಂತರ ತುನಿಶಾ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿದ್ದೇನೆ ಎಂದು ಆರೋಪಿ ಶಿಜಾನ್‌ ಖಾನ್‌ ಹೇಳಿದ್ದಾನೆಂದು ತಿಳಿದುಬಂದಿದೆ. ಅಲ್ಲದೆ, ಆಕೆ ಸಾಯುವ ಕೆಲ ದಿನಗಳ ಮೊದಲೇ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದೂ ನಟ ಹೇಳಿದ್ದಾರೆ. ತುನಿಶಾ ಸಾಯುವ ಕೆಲವು ದಿನಗಳ ಮೊದಲು ಇತ್ತೀಚೆಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಆದರೆ ಆ ಸಮಯದಲ್ಲಿ ನಾನು ಅವಳನ್ನು ಉಳಿಸಿದೆ ಮತ್ತು ಅವಳ ಬಗ್ಗೆ ವಿಶೇಷ ಕಾಳಜಿ ವಹಿಸುವಂತೆ ತುನಿಶಾಳ ತಾಯಿಗೆ ಹೇಳಿದೆ" ಎಂದೂ ಶಿಜಾನ್ ಖಾನ್‌ ಹೇಳಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ANI ವರದಿ ಮಾಡಿದೆ.

ಭಾನುವಾರ, ಮಹಾರಾಷ್ಟ್ರದ ವಸಾಯ್‌ ನ್ಯಾಯಾಲಯವು ತುನಿಶಾ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ನಟ ಶಿಜಾನ್‌ ಖಾನ್ ಅವರನ್ನು 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಆತನನ್ನು ಬಂಧಿಸಿದ ನಂತರ ವಲೀವ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: Tunisha Sharma Death Case; ಇದು ಲವ್ ಜಿಹಾದ್ ವಿಷಯ: BJP ನಾಯಕರ ಗಂಭೀರ ಆರೋಪ

ಈ ಮಧ್ಯೆ, ಡಿಸೆಂಬರ್ 24 ರಂದು ತನ್ನ ಟಿವಿ ಧಾರಾವಾಹಿಯ ಸೆಟ್‌ನಲ್ಲಿ ತುನೀಶಾ ಶವವಾಗಿ ಪತ್ತೆಯಾಗಿದ್ದಳು. ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ ನೋಟ್‌ ಪತ್ತೆಯಾಗಿಲ್ಲ ಎಂದು  ವಾಲೀವ್ ಪೊಲೀಸರು ಹೇಳಿದ್ದಾರೆ. ತುನಿಶಾ ಅವರು ಒತ್ತಡದಲ್ಲಿದ್ದರು ಎಂದು ವರದಿಯಾಗಿದೆ ಮತ್ತು ಇದು ಆಕೆಯ ಆತ್ಮಹತ್ಯೆಗೆ ಕಾರಣವಾಯಿತು ಎಂದು ಶಂಕಿಸಲಾಗಿದೆ ಎಂದೂ ಮುಂಬೈ ಪೊಲೀಸರು ತಿಳಿಸಿದ್ದಾರೆ.

ಶಿಜಾನ್‌ ಖಾನ್‌ಗೆ ಅಕ್ರಮ ಸಂಬಂಧವಿತ್ತು: ನಟಿ ತಾಯಿ ಆರೋಪ
ಇನ್ನೊಂದೆಡೆ, ಶೂಟಿಂಗ್‌ ಸೆಟ್‌​ನ​ಲ್ಲೇ ಆತ್ಮ​ಹ​ತ್ಯೆಗೆ ಶರ​ಣಾದ ಯುವ​ನಟಿ ತುನಿಶಾ ಶರ್ಮಾಳ (20) ಪ್ರಿಯ​ಕ​ರ ಶಿಜಾನ್‌ ಖಾನ್‌ಗೆ ಅಕ್ರಮ ಸಂಬಂಧ​ವಿತ್ತು ಎಂದು ತುನಿ​ಶಾ ತಾಯಿ ಸೋಮ​ವಾ​ರ ಗಂಭೀರ ಆರೋಪ ಮಾಡಿ​ದ್ದಾ​ರೆ. ‘ಶಿಜಾನ್‌ ಮತ್ತು ತುನಿ​ಶಾ​ ಪರ​ಸ್ಪರ ಪ್ರೀತಿ​ಸು​ತ್ತಿ​ದ್ದರು. ತುನಿ​ಶಾ​ಳನ್ನು ಮದು​ವೆ​ಯಾ​ಗು​ವು​ದಾಗಿ ಆತ ಹೇಳಿದ್ದ. ಆದರೆ ಆತ ತುನಿಶಾ ಜತೆ ಸಂಬಂಧ​ದ​ಲ್ಲಿ​ರು​ವಾ​ಗಲೇ ಬೇರೆ ಮಹಿ​ಳೆ​ಯೊಂದಿಗೆ ಅಕ್ರಮ ಸಂಬಂಧ​ವನ್ನು ಹೊಂದಿದ್ದ. ತನ್ನ ಮಗ​ಳನ್ನು 3-4 ತಿಂಗಳು ಬಳ​ಸಿ​ಕೊಂಡಿದ್ದ’ ಎಂದು ತುನಿಶಾ ತಾಯಿ​ ಆರೋ​ಪಿ​ಸಿ​ದ್ದಾ​ರೆ. ಅಲ್ಲದೆ, ಶಿಜಾ​ನ್‌ಗೆ ಶಿಕ್ಷೆ​ಯಾ​ಗ​ಬೇಕು. ಆತ​ನನ್ನು ಸುಮ್ಮನೆ ಬಿಡ​ಬಾ​ರದು. ನಾನು ನನ್ನ ಮಗು​ವನ್ನು ಕಳೆ​ದು​ಕೊಂಡಿ​ದ್ದೇ​ನೆ’ ಎಂದು ಆಕೆ ದುಃಖ ವ್ಯಕ್ತ​ಪ​ಡಿ​ಸಿ​ದ್ದಾ​ಳೆ. ಈ ಹಿನ್ನೆ​ಲೆ​ಯಲ್ಲಿ ಪೊಲೀ​ಸರು ತುನಿಶಾ ಹಾಗೂ ಖಾನ್‌ ವಾಟ್ಸಾಪ್‌ ಮೆಸೇ​ಜು​ಗಳು ಹಾಗೂ ಕಾಲ್‌ ​ರೆ​ಕಾ​ರ್ಡ್‌​ಗ​ಳ​ನ್ನು ಪರಿ​ಶೀ​ಲಿ​ಸು​ತ್ತಿ​ದ್ದಾ​ರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ: ಸಹನಟ ಶೀಜಾನ್ ಮೊಹಮ್ಮದ್ ಖಾನ್ ಬಂಧನ

click me!