Budget 2021: ಬಜೆಟ್‌ನಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?

Published : Feb 02, 2021, 08:20 AM ISTUpdated : Feb 02, 2021, 02:00 PM IST
Budget 2021: ಬಜೆಟ್‌ನಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?

ಸಾರಾಂಶ

ನಿರ್ಮಲಾ ಬಜೆಟ್: ಬಜೆಟ್‌ನಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?| ಕೊರೋನಾ ಕಾಲದಲ್ಲಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ| ಕುಸಿದ ಆರ್ಥಿಕತೆಗೆ ನಿರ್ಮಲಾ ಮದ್ದು

ನಗೆಬೀರಿದವರು

1. ಆಸ್ಪತ್ರೆಗಳು: ಆರೋಗ್ಯ ಕ್ಷೇತ್ರದ ಅನುದಾನ ಶೇ.137ರಷ್ಟುಏರಿಕೆಯಾಗಿದೆ. ಇದರ ಬೆನ್ನಲ್ಲೇ ವಿವಿಧ ಆಸ್ಪತ್ರೆಗಳ ಷೇರು ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.

2. ರಿಯಲ್‌ ಎಸ್ಟೇಟ್‌: ಮೂಲಸೌಕರ್ಯ ಯೋಜನೆಗಳ ಅನುದಾನ ಬೇಡಿಕೆ ಈಡೇರಿಸಲು ಹೊಸ ಅಭಿವೃದ್ಧಿ ಹಣಕಾಸು ಸಂಸ್ಥೆಯ ಪ್ರಸ್ತಾಪ ಬಜೆಟ್‌ನಲ್ಲಿದೆ. ಇದರಿಂದ ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ಅನುಕೂಲವಾಗಲಿದೆ.

3. ಲೋಹ ತಯಾರಕರು: 11 ಸಾವಿರ ಕಿ.ಮೀ. ಉದ್ದದ ಹೆದ್ದಾರಿ, ಮೆಟ್ರೋ ರೈಲು ಯೋಜನೆ, ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಪ್ರಸ್ತಾಪವಿದೆ. ಇದರಿಂದಾಗಿ ಉಕ್ಕು, ಅಲ್ಯುಮಿನಿಯಂ ಕಂಪನಿಗಳಿಗೆ ಒಳ್ಳೆಯ ಬಿಸಿನೆಸ್‌ ಸಿಗಲಿದೆ.

4. ಸರ್ಕಾರಿ ಬ್ಯಾಂಕುಗಳು: 20 ಸಾವಿರ ಕೋಟಿ ರು. ಮರು ಬಂಡವಾಳದ ಜತೆಗೆ ವಸೂಲಾಗದ ಸಾಲ ನಿರ್ವಹಣೆಗೆ ಪ್ರತ್ಯೇಕ ಕಂಪನಿ ಸ್ಥಾಪಿಸುವ ಪ್ರಸ್ತಾಪ ಇದೆ. ಇದರಿಂದ ಬ್ಯಾಂಕ್‌ಗಳಿಗೆ ದೊಡ್ಡ ಸಮಸ್ಯೆ ನಿವಾರಣೆಯಾಗಿದೆ.

5. ಜವಳಿ: ಮುಂದಿನ 3 ವರ್ಷಗಳಲ್ಲಿ 7 ಮೆಗಾ ಜವಳಿ ಪಾರ್ಕ್ಗಳನ್ನು ಸ್ಥಾಪಿಸಲಾಗುವುದು ಎಂದು ನಿರ್ಮಲಾ ತಿಳಿಸಿದ್ದಾರೆ. ಇದರಿಂದಾಗಿ ಜವಳಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳು ನಗೆ ಬೀರಿವೆ.

ಬೇಸರಗೊಂಡವರು

1. ಬಾಂಡ್‌ಗಳು: ಸರ್ಕಾರ ಮುಂದಿನ ಹಣಕಾಸು ವರ್ಷದಲ್ಲಿ 12 ಲಕ್ಷ ಕೋಟಿ ರು. ಸಾಲ ಮಾಡುವ ಗುರಿ ಹೊಂದಿದೆ. 2 ತಿಂಗಳಲ್ಲಿ 80 ಸಾವಿರ ಕೋಟಿ ರು. ಸಾಲ ಸಂಗ್ರಹಿಸುವುದಾಗಿ ತಿಳಿಸಿದೆ. ಭಾರತದ ಬಾಂಡ್‌ಗಳ ಮೇಲೆ ಇದು ಪರಿಣಾಮ ಬೀರಲಿದೆ.

2. ಆಮದುದಾರರು: ಸೌರಶಕ್ತಿ, ಮೊಬೈಲ್‌ ಫೋನ್‌, ಆಟೋಮೊಬೈಲ್‌ ಬಿಡಿಭಾಗಗಳಿಗೆ ಸಂಬಂಧಿಸಿದ ಆಮದು ಸುಂಕವನ್ನು ಸರ್ಕಾರ ಹೆಚ್ಚಳ ಮಾಡಿದೆ. ಸ್ಥಳೀಯ ಉತ್ಪಾದನೆಗೆ ಒತ್ತು ನೀಡಿದೆ. ಇದರಿಂದ ಆಮದುದಾರರಿಗೆ ಸಂಕಷ್ಟಎದುರಾಗಲಿದೆ.

3. ರೈತರು: ಕೃಷಿ ಮಸೂದೆ ವಾಪಸಾತಿಗೆ ರೈತರು 2 ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅವರ ಕಳವಳ ಹೋಗಲಾಡಿಸುವ ಯಾವುದೇ ಅಂಶ ಬಜೆಟ್‌ನಲ್ಲಿ ಇಲ್ಲ.

4. ಐಟಿ ಕಂಪನಿಗಳು: ಬಜೆಟ್‌ನಲ್ಲಿ ಐಟಿ ಕಂಪನಿಗಳ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲದಿರುವುದು ಆ ಸಂಸ್ಥೆಗಳ ಬೇಸರಕ್ಕೆ ಕಾರಣವಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!