ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿಕರ ಪರದಾಟ: ಸಾಮಾಜಿಕ ಅಂತರಕ್ಕೆ ಕ್ಯಾರೆ ಎನ್ನದ ಜನ..!
ಬಸ್ಗಾಗಿ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿಯೇ ಕಾದು ಕುಳಿತ ಜನ| ಇಡೀ ರಾತ್ರಿ ಮೆಜೆಸ್ಟಿಕ್ನಲ್ಲಿಯೇ ಕಾಲ ಕಳೆದ ವಲಸೆ ಕಾರ್ಮಿಕರು| ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಸಾವಿರಾರು ಜನರು| ಸಾಮಾಜಿಕ ಅಂತರ ಪಾಲನೆ ಮಾಡದ ಜನರು|
ಬೆಂಗಳೂರು(ಮೇ.03): ಸ್ವಂತ ಊರುಗಳಿಗೆ ತೆರಳಲು ವಲಸೆ ಕಾರ್ಮಿಕರು ನಿನ್ನೆ(ಶನಿವಾರ) ರಾತ್ರಿಯಿಂದಲೇ ಬಸ್ಗಾಗಿ ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿಯೇ ಕಾದು ಕುಳಿತಿದ್ದಾರೆ. ನಿನ್ನೆ ಸಂಜೆ 6 ಗಂಟೆ ನಂತರ ಬಸ್ ಸಂಚಾರ ಸ್ಥಗಿತಗಗೊಂಡಿತ್ತು. ಹೀಗಾಗಿ ಬಸ್ ಸಿಗದವರು ಇಡೀ ರಾತ್ರಿ ಮೆಜೆಸ್ಟಿಕ್ನಲ್ಲಿಯೇ ಕಾಲ ಕಳೆದಿದ್ದಾರೆ.
ಕಾರ್ಮಿಕರ ನೆಪದಲ್ಲಿ ಊರು ಸೇರಲು ಐಟಿ-ಬಿಟಿ ನೌಕರರ ಪ್ಲಾನ್..!
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಾವಿರಾರು ಜನರು ಜಮಾಯಿಸಿದ್ದಾರೆ.ಆದರೆ ಇವರು ಯಾರು ಸಾಮಾಜಿಕ ಅಂತರ ಪಾಲನೆ ಮಾಡಿಲ್ಲ, ಜೊತೆಗೆ ಮಾಸ್ಕ್ ಕೂಡ ಧರಿಸಿಲ್ಲ. ರಾತ್ರಿಯಿಡೀ ಊಟ ಇಲ್ಲ, ನಿದ್ದೆ ಇಲ್ಲದೆ ಕಾರ್ಮಿಕರು ವನವಾಸ ಅನುಭವಿಸಿದ್ದಾರೆ.