Asianet Suvarna News Asianet Suvarna News

ಶಿರಸಿ ಮಾರ್ಗದಲ್ಲಿ ಭಾರಿ ವಾಹನ ನಿಷೇಧ

 ಬೇಡ್ತಿ ಸೇತುವೆ ಪ್ರಸ್ತುತ ವರ್ಷದ ಭಾರಿ ಮಳೆಯಿಂದ ಶಿಥಿಲಗೊಂಡಿದ್ದು, ಸುರಕ್ಷತಾ ಕ್ರಮವಾಗಿ 10 ಟನ್‌ಗೂ ಮೀರಿದ ಭಾರಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

Ban On Heavy vehicle On Bedti Bridge
Author
Bengaluru, First Published Oct 23, 2019, 2:33 PM IST

ಕಾರವಾರ[ಅ.23]:  ಶಿರಸಿ-ಯಲ್ಲಾಪುರ ಮಾರ್ಗ ಮಧ್ಯದ ಬೇಡ್ತಿ ಸೇತುವೆ ಪ್ರಸ್ತುತ ವರ್ಷದ ಭಾರಿ ಮಳೆಯಿಂದ ಶಿಥಿಲಗೊಂಡಿದ್ದು, ಸುರಕ್ಷತಾ ಕ್ರಮವಾಗಿ 10 ಟನ್‌ಗೂ ಮೀರಿದ ಭಾರಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್‌ ಕೆ. ಆದೇಶ ಹೊರಡಿಸಿದ್ದಾರೆ.

ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿ-93ರ ಕಿ.ಮೀ. 111.85ರಲ್ಲಿ ಬೇಡ್ತಿ ಸೇತುವೆ ಮೇಲೆ ನೀರು ಹರಿದು ಸೇತುವೆಯ ಹ್ಯಾಂಡರೇಲ್‌ ಹಾಳಾಗಿದ್ದು, ಸಾಮಾನ್ಯ ಪರಿಶೀಲನೆಯಿಂದ 10 ಟನ್‌ಗೂ ಮೀರಿದ ಭಾರಿ ವಾಹನ ಸಂಚಾರದಿಂದ ಸೇತುವೆಗೆ ಹಾನಿಯಾಗಬಹುದೆಂಬ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಿರಸಿ-ಯಲ್ಲಾಪುರ ಮಾರ್ಗ ಮಧ್ಯದ ಸಂಪರ್ಕ ಕೊಂಡಿಯಾಗಿರುವ ಸೇತುವೆಗೆ ಹಾನಿಯಾದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಈ ಕಾರಣದಿಂದ 10 ಟನ್‌ಗಳಿಗೂ ಅಧಿಕ ಭಾರ ಮೀರಿದ ಲಾರಿಗಳು ಮುಂಡಗೋಡ ಮಾರ್ಗವಾಗಿ ಯಲ್ಲಾಪುರ ಹಾಗೂ ಯಲ್ಲಾಪುರದಿಂದ ಮುಂದೆ ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ ಕಡೆ ಸಾಗುವ ವಾಹನಗಳು ಕುಮಟಾ-ತಡಸ ರಾಜ್ಯ ಹೆದ್ದಾರಿ ಮೂಲಕ ಸಂಚರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Follow Us:
Download App:
  • android
  • ios