Asianet Suvarna News Asianet Suvarna News

ಡಿಕೆಶಿ ಸಂಕಷ್ಟ ಪರಿಹಾರಕ್ಕೆ ಕೊಲ್ಲೂರಿನಲ್ಲಿ ವಿಶೇಷ ಪ್ರಾರ್ಥನೆ

ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರ ಸಂಕಷ್ಟ ನಿವಾರಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಸಂಕಷ್ಟದಿಂದ ಪಾರಾಗುವಂತೆ ಅವರ ಆಪ್ತರೊಬ್ಬರು ಸೋಮವಾರ ತಮ್ಮ ವೈಯಕ್ತಿಕ ಶತಚಂಡಿಕಾಯಾಗದ ಸಂದರ್ಭದಲ್ಲಿ ಪ್ರಾರ್ಥಿಸಿದ್ದಾರೆ.

special pooja at kollur temple for dk shivakumar
Author
Bangalore, First Published Oct 22, 2019, 8:33 AM IST

ಉಡುಪಿ(ಅ.22): ಪ್ರಸ್ತುತ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರು ಸಂಕಷ್ಟದಿಂದ ಪಾರಾಗುವಂತೆ ಅವರ ಆಪ್ತರೊಬ್ಬರು ಸೋಮವಾರ ತಮ್ಮ ವೈಯಕ್ತಿಕ ಶತಚಂಡಿಕಾಯಾಗದ ಸಂದರ್ಭದಲ್ಲಿ ಪ್ರಾರ್ಥಿಸಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರ ಧಾರ್ಮಿಕ ಮಾರ್ಗದರ್ಶಕರೆನ್ನಲಾದ, ಬೆಂಗಳೂರಿನ ವಾಸ್ತುತಜ್ಞ - ಜ್ಯೋತಿಷಿ ಆರಾಧ್ಯ ಎಂಬವರು ಪ್ರತಿ ತಿಂಗಳು ಕುಂದಾಪುರದಕೊಲ್ಲೂರಿನಲ್ಲಿ ಚಂಡಿಕಾಯಾಗ ನಡೆಸುತ್ತಾರೆ.

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

ಅಂತೆಯೇ ಸೋಮವಾರ ಶತಚಂಡಿಕಾಯಾಗ ನಡೆಸಿದ್ದು, ಈ ಸಂದರ್ಭದಲ್ಲಿ ತಮ್ಮ ಕುಟುಂಬಸ್ಥರ ಹೆಸರುಗಳ ಜೊತೆ ಡಿ.ಕೆ.ಶಿವಕುಮಾರ್‌ ಅವರ ಹೆಸರನ್ನೂ ಹೇಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಹಿರಿಯ ಅರ್ಚಕ ನರಸಿಂಹ ಅಡಿಗ ನೇತೃತ್ವದಲ್ಲಿ ಬಿ.ಎಂ. ಮಂಜುನಾಥ ಅಡಿಗ ಅವರು ಈ ಯಾಗವನ್ನು ನಡೆಸಿದ್ದಾರೆ.

'ಓಟ್ ಬೇಕಾ, ರಸ್ತೆ ಸರಿ ಮಾಡಿ ಬನ್ನಿ', ಕೆಲ್ಸ ಮಾಡ್ಸೋಕೆ ಬ್ಯಾನರ್ ಹಾಕಿದ್ರು ಜನ..!

Follow Us:
Download App:
  • android
  • ios