Asianet Suvarna News Asianet Suvarna News

ತುಮಕೂರು: ಕಾಲಕ್ಕೆ ತಕ್ಕಂತೆ ಹೊಸತನ ಬೆಳೆಸಿಕೊಳ್ಳಲು ಯದುವೀರ್ ಕರೆ

ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ವಡೆಯರ್‌ ತುಮಕೂರು ವಿಶ್ವವಿದ್ಯಾಲಯದಲ್ಲಿ ‘ಯುವ ಸಬಲೀಕರಣ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳಿಗೆ ಯದುವೀರ್ ನೀಡಿದ ಸಲಹೆಗಳೇನು, ಮಾತುಗಳೇನು ಅನ್ನೋದು ತಿಳಿಯಲು ಈ ಸುದ್ದಿ ಓದಿ.

Yaduveer Wadiyar speaks in Tumakur university
Author
Bangalore, First Published Oct 20, 2019, 1:38 PM IST

ತುಮಕೂರು(ಅ.20): ಇಂದಿನ ಯುವಕರು ಜಾಗತಿಕ ನಾಗರಿಕರಾಗಿ ಬೆಳೆಯುವುದು ಅನಿವಾರ್ಯವಾಗಿದೆ. ಬದಲಾಗಿರುವ ಕಾಲಕ್ಕೆ ತಕ್ಕಂತೆ ಹೊಸತನ ಮತ್ತು ಉದ್ಯಮಶೀಲತೆಯನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ವಡೆಯರ್‌ ತಿಳಿಸಿದ್ದಾರೆ.

ತುಮಕೂರು ವಿಶ್ವವಿದ್ಯಾನಿಲಯವು ಶನಿವಾರ ಏರ್ಪಡಿಸಿದ್ದ ‘ಯುವ ಸಬಲೀಕರಣ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತವು ತನ್ನಲ್ಲಿರುವ ಯುವಶಕ್ತಿಯ ಸದುಪಯೋಗಪಡಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.

ಶಿವಮೊಗ್ಗ : ಪ್ರಜ್ಞೆ ತಪ್ಪಿಸಿ ಬಾಲಕಿ ಅಪಹರಣ, ಪೋಸ್ಕೋ ಪ್ರಕರಣ

ಭಾರತದ ವಿಶ್ವದಲ್ಲೇ ಅತ್ಯಂತ ಹೆಚ್ಚು ಯುವಕರನ್ನು ಹೊಂದಿರುವ ದೇಶ. ಅಭಿವೃದ್ಧಿ ಕೆಲಸಗಳಲ್ಲಿ ಪಾಲ್ಗೊಳ್ಳುವ ಅವಕಾಶ ಯುವಕರಷ್ಟುಬೇರೆಯಾರಿಗೂ ಇಲ್ಲ. ಇದನ್ನು ಬಳಸಿಕೊಂಡರೆ ಭಾರತ ವಿಶ್ವಮಟ್ಟದಲ್ಲಿ ಇನ್ನಷ್ಟುಪ್ರಭಾವಶಾಲಿಯಾಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದರು.

ಕರ್ನಾಟಕದಲ್ಲಿ ಶೇ.40 ಭೌಗೋಳಿಕ ಪ್ರದೇಶಗಳು:

ಭೌಗೋಳಿಕ ಸೂಚಿಗಳ ದಾಖಲೀಕರಣದಲ್ಲಿ ಮೈಸೂರು ಅರಮನೆಗೆ ವಿಶೇಷ ಆಸಕ್ತಿ ಇದೆ ಎಂದ ಅವರು ಭೌಗೋಳಿಕ ಸೂಚಿ ಗುರುತನ್ನು ಪಡೆದಿರುವ ಸುಮಾರು 250 ವಸ್ತುಗಳು ಭಾರತದಲ್ಲೂ, ಶೇ.40ರಷ್ಟುವಸ್ತುಗಳು ಕರ್ನಾಟಕದಲ್ಲೂ ಇವೆ. ಅವುಗಳ ಸರಂರಕ್ಷಣೆ ಮತ್ತು ಪ್ರವರ್ಧನೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪರಿಸರ ಸಂರಕ್ಷಣೆ ಇಂದಿನ ಬಹುದೊಡ್ಡ ಅನಿವಾರ್ಯತೆ. ಅದು ನಮ್ಮ ಮನೆಗಳಿಂದಲೇ ಆರಂಭವಾಗವೇಕು. ತಾನು ಪ್ಲಾಸ್ಟಿಕ್‌ ವಸ್ತುಗಳಿಗೆ ಪರ್ಯಾಯ ಸಾಮಗ್ರಿಗಳನ್ನು ಬಳಸುತ್ತೇನೆ ಎಂಬ ಅಭಿಯಾನ ಕುಟುಂಬ ಮಟ್ಟದಿಂದ ಆರಂಭವಾದರೆ ಪ್ಲಾಸ್ಟಿಕ್‌ ಸಮಸ್ಯೆ ತಾನಾಗಿಯೇ ಬಗೆಹರಿಯುತ್ತದೆ ಎಂದಿದ್ದಾರೆ.

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

ಆರ್ಥಿಕ ಹಿಂಜರಿತದ ಬಗ್ಗೆ ದೇಶಾದ್ಯಂತ ಚರ್ಚೆ ಆಗುತ್ತಿದೆ. ಆದರೆ ಅದೊಂದು ಜಾಗತಿಕ ವಿದ್ಯಮಾನ. ಸ್ಥೂಲಮಟ್ಟದಲ್ಲಿ ಅದರ ಪರಿಣಾಮ ಉಂಟಾಗಿದ್ದರೂ ತಳಮಟ್ಟದಲ್ಲಿ ಅಂತಹ ಋುಣಾತ್ಮಕ ಬದಲಾವಣೆಯೇನೂ ಆಗಿಲ್ಲ. ಇದನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಬಲ್ಲದು ಎಂದು ವಿದ್ಯಾರ್ಥಿಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪೊ›.ವೈ.ಎಸ್‌. ಸಿದ್ದೇಗೌಡ ಮಾತನಾಡಿ ಭೌಗೋಳಿಕ ಸೂಚಿಗಳ ದಾಖಲೀಕರಣದ ಅಭಿಯಾನಕ್ಕೆ ಸಂಬಂಧಿಸಿದಂತೆ ತುಮಕೂರು ವಿಶ್ವವಿದ್ಯಾನಿಲಯವು ಮೈಸೂರು ರಾಜಮನೆತನದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಿದೆ ಎಂದಿದ್ದಾರೆ.

ಹಠಾತ್ ಮಳೆಗೆ 10 ಎಕರೆಗೂ ಹೆಚ್ಚು ಭತ್ತ ಬೆಳೆ ನಾಶ, ರೈತರಿಗೆ ಹತಾಶೆ

ಮೈಸೂರು ಸಂಸ್ಥಾನದೊಂದಿಗೆ ತುಮಕೂರು ವಿಶ್ವವಿದ್ಯಾನಿಲಯ ಹಾಗೂ ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ. ಯದುವೀರ ಒಡೆಯರ್‌ ಅವರು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿರುವುದು ಒಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು. ಕುಲಸಚಿವ ಪೊ›.ಕೆ.ಎನ್‌. ಗಂಗಾನಾಯಕ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios