Asianet Suvarna News Asianet Suvarna News

ಮಂಡ್ಯ ಬಸ್ ದುರಂತ: ರಾಷ್ಟ್ರಪತಿ, ಪ್ರಧಾನಿ ಮೋದಿ, ರಾಹುಲ್ ಗಾಂಧಿ ಸಂತಾಪ

ಮಂಡ್ಯದಲ್ಲಿ ನಡೆದ ಘನಘೋರ ಬಸ್ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಾಹುಲ್ ಗಾಂಧಿ ಸೇರಿದಂತೆ ಹಲವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. 

PM Narendra Modi and Rahul Gandhi expresses condolence to Mandya Bus accident
Author
Bengaluru, First Published Nov 24, 2018, 3:42 PM IST

ಬೆಂಗಳೂರು, [ನ.24] ಇಂದು [ಶನಿವಾರ] ಮಂಡ್ಯದಲ್ಲಿ ಘನಘೋರ ಬಸ್ ದುರಂತದಲ್ಲಿ ಇಡೀ ಬಸ್ ಜಲಸಮಾಧಿಯಾಗಿದೆ. ವಿಸಿ ನಾಲೆಗೆ ಬಸ್ ಉರುಳಿ ಬಿದ್ದಿದ್ದು, 25ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 

ಸಾವಿನ ಶನಿವಾರ: ನಾಲೆ ಬಳಿ ಹೆಣಗಳ ರಾಶಿ!

 ಈಗಾಗಲೇ 25 ಮೃತದೇಹಗಳನ್ನ ಹೊರತೆಗೆಲಾಗಿದ್ದು, ಇನ್ನು ಕೆಲವರು ನೀರಿಗೆ ಕೊಚ್ಚಿ ಹೋಗಿದ್ದು ಕಾರ್ಯಚರಣೆ ಮುಂದುರೆದಿದೆ. ಇನ್ನು ಈ ದುರ್ಘಟನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ ಸೇರಿದಂತೆ ಹಲವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಮಂಡ್ಯ ಬಸ್​ ದುರಂತ: ಸಾವು ಗೆದ್ದು ಬಂದ ಬಾಲಕ ಬಿಚ್ಚಿಟ್ಟ ಭಯಾನಕ ಸತ್ಯ

Follow Us:
Download App:
  • android
  • ios