Asianet Suvarna News Asianet Suvarna News

ಮಂಡ್ಯ ಬಸ್ ದುರಂತ ನಡೆದಲ್ಲಿ ಹೆಚ್ಚಾಗ್ತಿವೆ ಅಪಘಾತಗಳ ಸಂಖ್ಯೆ!

ಮಂಡ್ಯ ಬಸ್ ದುರಂತ ಸಂಭವಿಸಿದ ಸ್ಥಳದ ಆಸುಪಾಸಿನಲ್ಲಿ ನಡೆಯುತ್ತಿರುವ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಒಂದು ವಾರದಲ್ಲಿ ನಾಲೆಗಳ ಬಳಿ ನಡೆದ ಅಪಘಾತಗಳ ಸಂಖ್ಯೆ 3 ಹಾಗೂ ಸತ್ತವರ ಸಂಖ್ಯೆ 33ಕ್ಕೇರಿದೆ.

Number of accidents are increasing in mandya
Author
Mandya, First Published Dec 3, 2018, 11:24 AM IST

ಮಂಡ್ಯ[ಡಿ.03]: ಮಂಡ್ಯದಲ್ಲಿ 30 ಮಂದಿಯನ್ನು ಬಲಿ ಪಡೆದಿದ್ದ ಬಸ್ ದುರಂತ ನಡೆದ ನಲೆ ಬಳಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗಲಾರಂಭಿಸಿದೆ. ದುರಂತ ಸಂಭವಿಸಿದ ಒಂದೇ ವಾರದೊಳಗೆ ಸತ್ತವರ ಸಂಖ್ಯೆ 33ಕ್ಕೇರಿದೆ.

ಇದನ್ನೂ ಓದಿ: ಮಂಡ್ಯ ಬಸ್​ ದುರಂತ: ಸಾವು ಗೆದ್ದು ಬಂದ ಬಾಲಕ ಬಿಚ್ಚಿಟ್ಟ ಭಯಾನಕ ಸತ್ಯ

ನ. 24 ರಂದು ಕನಗನಮರಡಿ ಗ್ರಾಮದ ವಿಸಿ ನಾಲೆಗೆ ಬಸ್ ಉರುಳಿ 30 ಜನ ಜಲಸಮಾಧಿಯಾಗಿದ್ದರು. ಈ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಆದರೀಗ ಈ ಘೋರ ಘಟನೆಯ ಬೆನ್ನಲ್ಲೇ ಮತ್ತೆರಡು ಅಪಘಾತಗಳು ಸಂಭವಿಸಿ ಮೃತರ ಸಂಖ್ಯೆ 33ಕ್ಕೇರಿದೆ. ಶನಿವಾರದಂದು ಮದ್ದೂರಿನ ನಾಲೆಯೊಂದಕ್ಕೆ ಕಾರು ಉರುಳಿತ್ತು. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯವಾಗಿರಲಿಲ್ಲ.

ಇದನ್ನೂ ಓದಿ: ಮತ್ತೊಂದು ದುರಂತ: ಮಂಡ್ಯಕ್ಕೆ ಎದುರಾಗಿದ್ಯಾ ನಾಲೆ ಗಂಡಾಂತರ?

ಆದರೆ ಇಂದು ಸೋಮವಾರ ನಾಲೆಗೆ ಮೊಪೆಡ್ ಬೈಕ್ ಉರುಳಿ ಬಿದ್ದಿದ್ದು, ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದ ವಿಸಿ ನಾಲೆಯಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ‌‌ ಒಂದೇ ಕುಟುಂಬದ ಅಜ್ಜಿ, ‌ಮಗಳು ಹಾಗೂ ಮೊಮ್ಮಗಳು ವಿಧಿವಶರಾಗಿದ್ದಾರೆ. ಮೃತರನ್ನು ಲೋಕಸರ ಗ್ರಾಮದ ನಾಗಮ್ಮ(55) ಅಂಬಿಕ(35) ಮಾನ್ಯತ(3) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮಹದೇಶ್ವರ ದೇವಾಲಯದಿಂದ ಲೋಕಸರ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. 

ಇದನ್ನೂ ಓದಿ: ಸಾವಿನ ಶನಿವಾರ: ನಾಲೆ ಬಳಿ ಹೆಣಗಳ ರಾಶಿ!

ರಸ್ತೆ ಕ್ರಾಸ್ ಮಾಡುವ ವೇಳೆ‌ ಬೈಕ್ ನಿಯಂತ್ರಣ ತಪ್ಪಿ ನಾಲೆಗೆ ಉರುಳಿತ್ತು. ಈ ವೇಳೆ ನಾಲೆಯಲ್ಲಿ ನೀರು ತುಂಬಿದ್ದರಿಂದ ಹೊರಬರಲಾಗದೇ ಮೂವರ ದುರ್ಮರಣಕ್ಕೀಡಾಗಿದ್ದಾರೆ. ಸದ್ಯ ಮೃತದೇಹಗಳನ್ನು‌‌ ಮಂಡ್ಯ‌ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಂಡ್ಯ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Follow Us:
Download App:
  • android
  • ios