Asianet Suvarna News Asianet Suvarna News

ಮುಂದುವರೆದ ವರ್ಗಾವಣೆ ಪರ್ವ: ಶಾಲಿನಿ‌ ರಜನೀಶ್ ಸೇರಿ 11 IAS ಆಫೀಸರ್ಸ್ ಎತ್ತಂಗಡಿ

ಎಚ್.ಡಿ. ಕುಮಾರಸ್ವಾಮಿ ಅವರ ಅಧಿಕಾರವಧಿಯಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಇಂದು 11 ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ವರ್ಗಾವಣೆಯಾದ ಅಧಿಕಾರಿಗಳ ವಿವರ ಹೀಗಿದೆ.

Karnataka Government transfers 11 IAS officers
Author
Bengaluru, First Published Nov 30, 2018, 5:28 PM IST

ಬೆಂಗಳೂರು, [ನ.30]: ರಾಜ್ಯ ಮೈತ್ರಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಇಂದು [ಶುಕ್ರವಾರ] 11 ಐಎಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದಿಂದ 5 ಐಎಎಸ್‌ ಅಧಿಕಾರಿಗಳ ವರ್ಗ

ಸರ್ಕಾರದ ಕಾರ್ಯದರ್ಶಿ ಕುಮ್ಟಾ ಪ್ರಕಾಶ್ ಅವರು, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನರಾಜ್ ಸೇರಿದಂತೆ ಒಟ್ಟು 11 ಮಂದಿ ಐಎಎಸ್​​ ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿದೆ. 

 ವರ್ಗಾವಣೆಯಾದ ಅಧಿಕಾರಿಗಳ ವಿವರ ಹೀಗಿದೆ.
ಶಾಲಿನಿ‌ ರಜನೀಶ್-ಪ್ರಧಾನ ಕಾರ್ಯದರ್ಶಿ, ಯೋಜನಾ ಇಲಾಖೆ
ಮಂಜುಳ-ಪ್ರಧಾನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ
ಕುಮಾರ್ ನಾಯಕ್-ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ
ಉಮಾ ಶಂಕರ್-ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಶಿಕ್ಷಣ
ಪೊನ್ನುರಾಜ್-ಎಂಡಿ, ಕೆಪಿಸಿಎಲ್
ಶಿವಯೋಗಿ-ಎಂಡಿ, ಕೆಎಸ್​​ಆರ್​ಟಿಸಿ
ಎನ್.ವಿ‌.ಪ್ರಸಾದ್-ಎಂಡಿ, ಬಿಎಂಟಿಸಿ
ಡಿ.ರಂದೀಪ್-ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ
ಗೋಪಾಲಕೃಷ್ಣ- ಎಂಡಿ, ಚಾಮುಂಡೇಶ್ವರಿ ಪವರ್ ಕಾರ್ಪೋರೇಷನ್
ವಸಂತ ಕುಮಾರ್-ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ
ಜಾಫರ್-ಸಾರ್ವಜನಿಕ ಶಿಕ್ಷಣ ಇಲಾಖೆ, ಪಿಯು ಬೋರ್ಡ್ ನಿರ್ದೇಶಕ

Follow Us:
Download App:
  • android
  • ios