Asianet Suvarna News Asianet Suvarna News

ಸುಳ್ವಾಡಿ ವಿಷ ದುರಂತ ಮಾಸುವ ಚಿತ್ರದುರ್ಗದಲ್ಲಿ ಮತ್ತೊಂದು ದುರಂತ!

ಸುಳ್ವಾಡಿ ವಿಷ ಪ್ರಸಾದ ದುರಮತ ಮಾಸುವ ಮುನ್ನವೇ ಚಿತ್ರದುರ್ಗದಲ್ಲಿ ವಿಷವೂಟ ಸೇವಿಸಿ ನಾಲ್ವರು ಸಾವನ್ನಪ್ಪಿದ್ದಾರೆ.

four died having poison food in chitradurga
Author
Chitradurga, First Published Dec 21, 2018, 8:46 AM IST

ಚಿತ್ರದುರ್ಗ[ಡಿ.21]: ಸುಳ್ವಾಡಿ ವಿಷ ಪ್ರಸಾದ ದುರಂತ ಮಾಸುವ ಮುನ್ನವೇ ಚಿತ್ರದುರ್ಗದಲ್ಲಿ ವಿಷ ಆಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರೆ.

ಚಿತ್ರದುರ್ಗದ ಹಿರಿಯೂರು ತಾಲೂಕಿನ ಹುಲಿತೊಟ್ಲು ಗ್ರಾಮದಲ್ಲಿ ಘಟನೆ ನಡೆದಿದ್ದು,ಮೃತರನ್ನು ಚಿತ್ತಪ್ಪ[80], ಶಶಿಧರ್[40], ಭಾಗ್ಯಮ್ಮ[35], ಹೇಮಲತಾ[35] ಎಂದು ಗುರುತಿಸಲಾಗಿದೆ. ಈ ಆಹಾರ ಸೇವಿಸಿದ ಇನ್ನೂ ನಾಲ್ವರನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.

ನಿನ್ನೆ ರಾತ್ರಿ ಜೋಳದ ಮುದ್ದಿ, ಕಾಳು ಸಾರು ಊಟ ಮಾಡಿದ್ದ ಚಿತ್ತಪ್ಪ ಕುಟುಂಬದ ಒಟ್ಟು 8 ಮಂದಿಗೆ ವಾಂತಿ ಭೇದಿಯಾಗಿದೆ. ಕೂಡಲೇ ಇವರೆಲ್ಲರನ್ನೂ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ನಾಕಲ್ವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಇನ್ನೂ ನಾಲ್ವರಿಗೆ ಚಿಕಿತ್ಸೆ ಮುಂದುವರೆದಿದೆ.

Follow Us:
Download App:
  • android
  • ios