Asianet Suvarna News Asianet Suvarna News

ಒಂದುವೇಳೆ ಮಳೆಯಿಂದ ಇಂದು ಪಂದ್ಯ ರದ್ದಾದರೆ ಏನಾಗಲಿದೆ..?

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ವ್ಯವಸ್ಥೆಯಿದ್ದ ಮಳೆ ನಿಂತ ಕೆಲ ಸಮಯದಲ್ಲೇ ಪಂದ್ಯ ನಡೆಸಲು ಅವಕಾಶವಿದೆ.

What Happens If match stop due to rain

ಬೆಂಗಳೂರು(ಮೇ.19): ಮಳೆಯಿಂದಾಗಿ ಮೂರು ಗಂಟೆಗೂ ಹೆಚ್ಚುಕಾಲ ಸ್ಥಗಿತಗೊಂಡಿದ್ದ ಎಲಿಮನೇಟರ್ ಪಂದ್ಯ ಕಡೇ ಕ್ಷಣದಲ್ಲಿ ಆರಂಭವಾಗಿ ಫಲಿತಾಂಶ ನೀಡಿತ್ತು.

ಇಂದಿನ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್'ರೈಡರ್ಸ್ ನಡುವಿನ ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಇಂದಿನ ಪಂದ್ಯಕ್ಕೂ ಯಾವುದೇ ಮೀಸಲು ದಿನ ಇಲ್ಲದಿರುವುದರಿಂದ ಕೆಕೆಆರ್ ತಂಡ ಆತಂಕಕ್ಕೆ ಒಳಗಾಗಿದೆ.

ಒಂದುವೇಳೆ ಇಂದಿನ ಪಂದ್ಯ ಮಳೆಯಿಂದ ರದ್ದಾದರೆ, ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡ ಅನಾಯಾಸವಾಗಿ ಫೈನಲ್ ತಲುಪಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಬ್ ಏರ್ ವ್ಯವಸ್ಥೆಯಿದ್ದ ಮಳೆ ನಿಂತ ಕೆಲ ಸಮಯದಲ್ಲೇ ಪಂದ್ಯ ನಡೆಸಲು ಅವಕಾಶವಿದೆ. ಆದರೆ ನಿರಂತರ ಮಳೆ ಸುರಿದರೆ, ಪಂದ್ಯ ನಡೆಸುವ ಸಾಧ್ಯತೆ ಕಡಿಮೆಯಿರುತ್ತದೆ.

Follow Us:
Download App:
  • android
  • ios