Asianet Suvarna News Asianet Suvarna News

ಕೀವಿಸ್ ಭಾರತಕ್ಕೆ ಸುಲಭದ ತುತ್ತಲ್ಲ: ಯಾವ್ಯಾವ ಬೌಲರ್ ಭಾರತಕ್ಕೆ ಕಂಟಕರಾಗಿದ್ದಾರೆ ಗೊತ್ತಾ..?

ನಂಬರ್​​​ 1 ತಂಡಕ್ಕೆ ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಬಿಗ್​​ ಚಾಲೆಂಜ್​ ಎದುರಾಗುತ್ತಿದೆ. ನ್ಯೂಜಿಲೆಂಡ್'​​​​ನಿಂದ ಬಂದಿರುವ ಸುನಾಮಿ ಕೊಹ್ಲಿ ಹುಡುಗರನ್ನು ಕೊಚ್ಚಿಕೊಂಡು ಹೋಗಲು ಎದುರು ನೋಡುತ್ತಿದೆ. ಆ ಸುನಾಮಿಯನ್ನ ತಡೆಯಲು ಈಗ ಕೊಹ್ಲಿ ಹುಡುಗರು ದೊಡ್ಡ ತಪಸ್ಸೇ ನಡೆಸಬೇಕಾಗಿದೆ. ಅಷ್ಟಕ್ಕೂ ಟೀಂ ಇಂಡಿಯಾದ ನಾಶಕ್ಕೆ ಕಾದು ಕುಳಿತಿರುವ ಆ ಸುನಾಮಿ ಯಾವುದು..? ಇಲ್ಲಿದೆ ವಿವರ.

 

new zealand may become dangerous for team india

ದೂರದ ನ್ಯೂಜಿಲೆಂಡ್'​​ನಿಂದ ಸುನಾಮಿಯೊಂದು ಬಂದಿದೆ. ಈಗಾಗಲೇ ಭಾರತಕ್ಕೆ ಆಗಮಿಸಿರುವ ಆ ಕಂಟಕ ಪ್ರಾಯ ಸುನಾಮಿ ಭಾನುವಾರ ಟೀಂ ಇಂಡಿಯಾವನ್ನ ಅಪ್ಪಳಿಸಲಿದೆ. ಕೊಂಚ ಆಯತಪ್ಪಿದ್ರೂ ಕೊಹ್ಲಿ ಹುಡುಗರು ಸುನಾಮಿಯ ಹೊಡೆತಕ್ಕೆ ಕೊಚ್ಚಿ ಹೋಗಲಿದ್ದಾರೆ. ಅಯ್ಯೋ ಯಾವುದಪ್ಪ ಆ ಸುನಾಮಿ ಅಂತ ಯೋಚನೆ ಮಾಡ್ತಿದ್ದೀರಾ. ಅದು ಬೇಱರು ಅಲ್ಲ ನ್ಯೂಜಿಲೆಂಡ್​​​​'ನ ಎಡಗೈ ವೇಗಿ, ಸದ್ಯ ವಿಶ್ವ ಕ್ರಿಕೆಟ್'​ನ ಮೋಸ್ಟ್​​​ ಡೇಂಜರಸ್​​​ ಬೌಲರ್​​​ ಟ್ರೆಂಟ್​​​ ಬೋಲ್ಟ್​​​.

ಕೊಹ್ಲಿ ಹುಡುಗರ ಮೇಲೆ ಬೋಲ್ಟ್​​​​ ಸವಾರಿ ಗ್ಯಾರಂಟಿ

ಎಂಥಂಥ ಮಾರಕ ಬೌಲರ್​​ಗಳನ್ನೇ ನುಂಗಿ ನೀರು ಕುಡಿದಿರುವ ಕೊಹ್ಲಿ ಹುಡುಗರಿಗೆ ಟ್ರೆಂಟ್​​​ ಬೋಲ್ಟ್​​​ ಯಾವ ಲೆಕ್ಕ. ಇದೇ ಭಾನುವಾರದಿಂದ ನಡೆಯೋ ಏಕದಿನ ಸರಣಿಯಲ್ಲಿ ಗ್ಯಾರೆಂಟಿ ಬೋಲ್ಟ್​​​​ನ ನೆಟ್​​ ಮತ್ತು ಬೋಲ್ಟ್​​ಗಳು ಲೂಸ್​​ ಆಗಲಿವೆ ಅಂತ ನೀವೇನಾದ್ರೂ ಅಂದುಕೊಂಡರೆ ಅದು ತಪ್ಪಾಗುತ್ತದೆ. ಕಾರಣ ಟೀಂ ಇಂಡಿಯಾ ಎಡಗೈ ವೇಗಿಗಳಂದ್ರೆ ಗಢಗಢ ಅಂತ ನಡಗುತ್ತಾರೆ.

ಎಡಗೈ ವೇಗಿಗಳಿಗೆ ವಿಶ್ವಶ್ರೇಷ್ಠ  ಬ್ಯಾಟ್ಸ್​​ಮನ್​ಗಳು ಗಢಗಢ

ಟ್ರೆಂಟ್​​​​ ಬೋಲ್ಟ್​​ ಅನ್ನೋ ಎಡಗೈ ವೇಗಿ ಅಬ್ಬರಿಸಲಿದ್ದಾನೆ ಅನ್ನೋದಕ್ಕೂ ಕಾರಣವಿದೆ. ಅದೇನಂದ್ರೆ ಕ್ರಿಕೆಟ್​​ ಹಿಸ್ಟರಿಯಲ್ಲಿ ಎಡಗೈ ಬೌಲರ್​​​ಗಳೆದುರು ಎಂದೂ ನಮ್ಮವರ ಆಟ ನಡೆದೇ ಇಲ್ಲ. ಅದಕ್ಕೆ ರೀಸೆಂಟ್​​ ಎಕ್ಸಾಂಪಲ್​ ಅಂದ್ರೆ ಈ ಬಾರಿ ಚಾಂಪಿಯನ್ಸ್​​​ ಟ್ರೋಫಿ ಮಿಸ್​​​​ ಆಗಲು ಕಾರಣ ಪಾಕ್'​ನ ಎಡಗೈ ವೇಗಿ ಮೊಹಮ್ಮದ್​​ ಆಮೀರ್​​. ಅಂದು ಆಮೀರ್​​ನ ಆರ್ಭಟಕ್ಕೆ ಕೊಹ್ಲಿ ಹುಡುಗರು ಧೂಳೀಪಟವಾಗಿದ್ರು.

ಅಮೀರ್​​ ಮಾತ್ರ ಟೀಂ ಇಂಡಿಯವನ್ನ ಕಾಡಿಲ್ಲ: ಇಂಡಿಯನ್​​ ಕ್ರಿಕೆಟ್​​ ಹಿಸ್ಟರಿಯಲ್ಲಿದ್ದಾರೆ ಮಾರಕ ಎಡಗೈ ಬೌಲರ್ಸ್​​

ಕೇವಲ ಪಾಕ್​​​ ಬೌಲರ್​​ ಮಾತ್ರ ಇದುವರೆಗೂ ಟೀಂ ಇಂಡಿಯಾವನ್ನ ಕಾಡಿಲ್ಲ. ಅರಿಯಾಗಿ ನಮ್ಮ ಇಂಡಿಯನ್​ ಕ್ರಿಕೆಟ್​​ ಹಿಸ್ಟರಿಯನ್ನ ತೆಗೆದುಬಿಟ್ರೆ ನಿಮ್ಮನ್ನ ಬೆಚ್ಚಿ ಬೀಳಿಸೋ ಸಂಗತಿಗಳು ಎದುರಾಗ್ತಾವೆ. ಅದೇನಂದ್ರೆ ಬ್ಲೂ ಬಾಯ್ಸ್​​​ ಇದುವರೆಗೂ ಯಾವುದೇ ಎಡಗೈ ವೇಗಿಗಳೆದುರು ಅಬ್ಬರಿಸಿಯೇ ಇಲ್ಲ. ಬದಲಾಗಿ ಟೀಂ ಇಂಡಿಯಾವನ್ನೆ ಲೆಫ್ಟಿಗಳು ಹೆಚ್ಚು ಕಾಡಿಬಿಟ್ಟಿದ್ದಾರೆ.

ಅಕ್ರಂ ದಾಳಿಗೆ ಧೂಳಿಪಟವಾಗ್ತಿದ್ದ ಟೀಂ ಇಂಡಿಯಾ

ಈಗ ಹೇಗೆ ಮೊಹಮ್ಮದ್​​ ಆಮೀರ್​​​ ಕೊಹ್ಲಿ ಹುಡುಗರನ್ನ ಕಾಡ್ತಿದ್ದಾರೋ ಹಾಗೇ 90ರ ದಶಕದಲ್ಲಿ ಮತ್ತೊಬ್ಬ ಪಾಕ್​ ಎಡಗೈ ವೇಗಿ ವಾಸಿಂ ಅಕ್ರಂ ಗೋಳು ಹೊಯ್ದುಕೊಂಡಿದ್ದಾರೆ. ಅಕ್ರಂರ ಭಯಂಕರ ಯಾರ್ಕರ್​​ಗಳಿಗೆ ಅಂದಿನ ಬ್ಲೂಬಾಯ್ಸ್​​​ ನಲುಗಿ ಹೋಗಿದ್ರು.

ಚಮಿಂದಾ ವಾಸ್​​​​ ಸ್ವಿಂಗ್​ಗೆ ಬೆದರಿದ್ದ ಭಾರತ

ಅಕ್ರಂ ನಂತರ, ಭಾರತದ ಕ್ರಿಕೆಟ್​​​ ಅನ್ನ ಅಕ್ಷರಶಹ ಕಾಡಿದ್ದು ಅಂದ್ರೆ ಅದು ಶ್ರೀಲಂಕಾದ ಎಡಗೈ ವೇಗಿ ಚಮಿಂಡಾ ವಾಸ್​​, 2000ರಲ್ಲಿ ಕೊಕೊ ಕೋಲಾ ಟೂರ್ನಿಯ ಫೈನಲ್​ನಲ್ಲಿ ವಾಸ್​​​ ಮಾಡಿದ ಮೋಡಿ ಇಂದಿಗೂ ಮರೆಯಲು ಸಾಧ್ಯವೇ ಇಲ್ಲ. ಅಂದು ಟೀಂ ಇಂಡಿಯಾವನ್ನ ಹಣ್ಣುಗಾಯಿ ನೀರ್​ಗಾಯಿ ಮಾಡಿಬಿಟ್ಟಿದ್ರು.

ಮಿಚೆಲ್​​ ಜಾನ್ಸನ್​​ ಅಂದ್ರೆ ಈಗಲೂ ಟೀಂ ಇಂಡಿಯಾಗೆ ದಿಗಿಲು

ಕಾಂಗರೂ ನಾಡಿನ ಮಿಚೆಲ್​ ಜಾನ್ಸನ್​​ ಟೀಂ ಇಂಡಿಯಾವನ್ನ ಹೇಗೆಲ್ಲಾ ಗೋಳು ಹೊಯ್ದುಕೊಂಡಿದ್ದಾರೆ ಗೊತ್ತಾ. ಯಾವಾಗಲೇ ಟೀಂ ಇಂಡಿಯಾ ಆಸ್ಟ್ರೇಲಿಯಾಗೆ ಹೋಗಲಿ. ಅಥವಾ ಆಸ್ಟ್ರೇಲಿಯಾ ಭಾರತಕ್ಕೆ ಬರಲಿ, ಹೆಚ್ಚು ಕಾಡುತ್ತಿದ್ದಿದ್ದು ಎಡಗೈ ವೇಗಿ ಮಿಚೆಲ್​ ಜಾನ್ಸನ್​​.

ಕ್ರಿಕೆಟ್​​​ ಶಿಶು ಬಾಂಗ್ಲಾದ ವೇಗಿಗೂ ತಲೆಬಾಗಿತ್ತು ಭಾರತ

ನಿಮಗೆ ನೆನಪಿರಬಹುದು, ಸರಿಯಾಗಿ 2 ವರ್ಷಗಳ ಹಿಂದೆ ಅಂದ್ರೆ 2015ರಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶಕ್ಕೆ ತೆರಳಿತ್ತು. ಆಗ ಬಾಂಗ್ಲಾದ ಮುಸ್ತಾಫಿಜುರ್​​​ ರೆಹಮಾನ್​ ಎಲ್ಲರನ್ನ ದಂಗು ಬಡಿಸಿದ್ರು. ಟೀಂ ಇಂಡಿಯಾವನ್ನ ರೆಹಮಾನ್​ ಧ್ವಂಸಗೊಳಿಸಿದ್ರು. ಧೋನಿ ಬಾಯ್ಸ್​​ ಸರಣಿ ಸೋತು ಭಾರಿ ಮುಖಭಂಗ ಅನುಭವಿಸಿದ್ರು.

ಇದೇ ಕಾರಣಕ್ಕೆ ನಾವು ಮೊದಲೇ ಹೇಳಿದ್ದು ಕೊಹ್ಲಿ ಹುಡುಗರು ಕೊಂಚ ಯಾಮಾರಿದ್ರೂ ನ್ಯೂಜಿಲೆಂಡ್​​​ ವಿರುದ್ಧದ ಸರಣಿ ಕೈ ತಪ್ಪಲಿದೆ ಅಂತ.

Follow Us:
Download App:
  • android
  • ios