ಕೆಜಿಎಫ್ ನಂತರ 5 ಭಾಷೆಗಳಲ್ಲಿ ಅವನೇ ಶ್ರೀಮನ್ನಾರಾಯಣ
ನಟ ರಕ್ಷಿತ್ ಶೆಟ್ಟಿಬರೋಬ್ಬರಿ ಎರಡು ವರ್ಷಗಳ ನಂತರ ತೆರೆ ಮೇಲೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲಿದ್ದಾರೆ. ಹೌದು, ‘ಕಿರಿಕ್ ಪಾರ್ಟಿ’ ಚಿತ್ರದ ನಂತರ ರಕ್ಷಿತ್ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಆದರೆ, ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.
ಬೆಂಗಳೂರು (ಏ. 10): ನಟ ರಕ್ಷಿತ್ ಶೆಟ್ಟಿಬರೋಬ್ಬರಿ ಎರಡು ವರ್ಷಗಳ ನಂತರ ತೆರೆ ಮೇಲೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಲಿದ್ದಾರೆ. ಹೌದು, ‘ಕಿರಿಕ್ ಪಾರ್ಟಿ’ ಚಿತ್ರದ ನಂತರ ರಕ್ಷಿತ್ ಅವರ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಆದರೆ, ಈ ಸಿನಿಮಾ ಯಾವಾಗ ತೆರೆಗೆ ಬರಲಿದೆ ಎನ್ನುವ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ.
ಉರಿ ಚಿತ್ರದ ‘ಗೃಹಸಚಿವ’ ಹುಂಡಾಲ್ ನಿಧನ
ಆ ಮೂಲಕ ಎರಡುವರೆ ವರ್ಷದ ಅಜ್ಞಾತವಾಸಕ್ಕೆ ರಕ್ಷಿತ್ ಶೆಟ್ಟಿಅವರು ಶುಭಂ ಹೇಳಿದ್ದಾರೆ. ಯುವ ನಿರ್ದೇಶಕ ಸಚಿನ್ ಮೊದಲ ಬಾರಿಗೆ ನಿರ್ದೇಶಿಸಿರುವ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ಆಗಸ್ಟ್ ತಿಂಗಳಲ್ಲಿ ಅದ್ದೂರಿಯಾಗಿ ತೆರೆಗೆ ಬರುತ್ತಿದೆ.
ಐದು ಭಾಷೆಗಳಲ್ಲಿ
ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ಪ್ರಕಾಶ್ ಗೌಡ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರುವ ಪ್ಲಾನ್ ನಡೆಯುತ್ತಿದೆ. ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಈ ಸಿನಿಮಾ ತಯಾರಾಗುತ್ತಿರುವುದು ಎಲ್ಲರಿಗೂ ಗೊತ್ತಿದೆ. ಈಗಾಗಲೇ ಆಯಾ ಭಾಷೆಯಲ್ಲೇ ಡೈಲಾಗ್ಗಳನ್ನು ಬರೆಸಿ ಡಬ್ಬಿಂಗ್ ಕೆಲಸಕ್ಕೆ ನಿರ್ದೇಶಕರು ಚಾಲನೆ ಕೊಟ್ಟಿದ್ದಾರೆ.
ಐದು ಭಾಷೆಗಳ ಡಬ್ಬಿಂಗ್ ಕೆಲಸಗಳು ಸದ್ಯದಲ್ಲೇ ಮುಗಿಯಲಿವೆ. ಅಲ್ಲದೆ ಕನ್ನಡ ಸೇರಿದಂತೆ ಓವರ್ ಸೀಸ್ ಮಾರುಕಟ್ಟೆಹಾಗೂ ಬೇರೆ ಭಾಷೆಗಳಲ್ಲಿ ಏಕ ಕಾಲಕ್ಕೆ ‘ಅವನೇ ಶ್ರೀಮನ್ನಾರಾಯಣ’ ತೆರೆಗೆ ಬರುತ್ತಿದೆ. ಅಂದಹಾಗೆ ಹಿಂದಿಯಲ್ಲಿ ತಮ್ಮ ಪಾತ್ರ ರಕ್ಷಿತ್ ಶೆಟ್ಟಿಅವರೇ ಡಬ್ಬಿಂಗ್ ಮಾಡಲಿದ್ದಾರೆ ಎಂಬುದು ಮತ್ತೊಂದು ವಿಶೇಷ.
ವಿದೇಶಿ ಹುಡುಗನ ಜತೆ ಫಾರಿನ್ ಬೀಚ್ನಲ್ಲಿ ತಲೆಕೆಳಗಾದ ಸಂಯುಕ್ತಾ!
200 ದಿನ, 9 ಸೆಟ್
ರಕ್ಷಿತ್ ಶೆಟ್ಟಿಅವರ ಮತ್ತೊಂದು ದಾಖಲೆ ಎಂದರೆ ಒಂದೇ ಚಿತ್ರಕ್ಕೆ 9 ಸೆಟ್ಗಳನ್ನು ಹಾಕಿರುವುದು. ಜತೆಗೆ 200 ದಿನಗಳ ಕಾಲ ಚಿತ್ರೀಕರಣ ಮಾಡಿರುವುದು. ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗದ ಅಪರೂಪದ ಜಾಗಗಳಲ್ಲಿ ಶೂಟಿಂಗ್ ಮಾಡಿರುವುದು. ‘ಕನ್ನಡದ ಕಮರ್ಷಿಯಲ್ ಚಿತ್ರವೊಂದಕ್ಕೆ 9 ಸೆಟ್ಗಳನ್ನು ಹಾಕಿ 200 ದಿನಗಳ ಕಾಲ ಚಿತ್ರೀಕರಣ ಮಾಡಿರುವುದು ನಮ್ಮ ಚಿತ್ರವೇ ಮೊದಲು.
ಕನ್ನಡದ ಜತೆಗೆ ಬೇರೆ ಭಾಷೆಗಳಲ್ಲೂ ಇದನ್ನು ತೆಗೆದುಕೊಂಡು ಹೋಗಬೇಕು ಎನ್ನುವ ಯೋಚನೆ ಮೊದಲೇ ಇತ್ತು. ಈ ಕಾರಣಕ್ಕೆ ತುಂಬಾ ಸಮಯ ತೆಗೆದುಕೊಂಡು ಶೂಟಿಂಗ್ ಮಾಡಿದ್ದೇವೆ. ಜತೆಗೆ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ. ಚಿತ್ರೀಕರಣ ಈಗಾಗಲೇ ಮುಗಿದಿದೆ. ಸದ್ಯಕ್ಕೆ ಚಿತ್ರಕ್ಕೆ ಬೇರೆ ಭಾಷೆಗಳಲ್ಲಿ ಡಬ್ಬಿಂಗ್ ನಡೆಯುತ್ತಿದೆ’ ಎನ್ನುತ್ತಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. ಶಾನ್ವಿ ಶ್ರೀವಸ್ತ ನಾಯಕಿಯಾಗಿ ನಟಿಸಿರುವ, ಚರಣ್ ರಾಜ್, ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿ, ಕರಮ್ ಚಾವ್ಲಾ ಅವರು ಕ್ಯಾಮೆರಾ ಹಿಡಿದಿದ್ದಾರೆ. ಹೀಗಾಗಿ ತಾಂತ್ರಿಕವಾಗಿಯೂ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆಯಂತೆ.
ಎರಡುವರೆ ವರ್ಷದ ನಂತರ ತೆರೆ ಮೇಲೆ ನನ್ನ ಸಿನಿಮಾ ಬರುತ್ತಿದೆ. ಆಗಸ್ಟ್ನಲ್ಲಿ ಯಾವ ದಿನ ಅನ್ನೋದು ಸದ್ಯದಲ್ಲೇ ಹೇಳುತ್ತೇವೆ. ಒಬ್ಬ ನಟನಾಗಿ ನನಗೂ ಕುತೂಹಲ ಇದೆ. ತಡ ಆಗಿದ್ದು, ಐದು ಭಾಷೆಗಳಲ್ಲಿ ಮಾಡುತ್ತಿರುವ ಸಿನಿಮಾ. ಸಹಜವಾಗಿ ಹೆಚ್ಚು ದಿನ ಚಿತ್ರೀಕರಣ ಮಾಡಿದ್ದೇವೆ. ಕನ್ನಡದಲ್ಲಿ ಒಂದು ಇಂಡಿಯನ್ ಸಿನಿಮಾ ಮಾಡಿದರೆ ಹೇಗಿರುತ್ತದೆ ಎನ್ನುವ ಹೆಮ್ಮೆ ಮೂಡಿಸಿರುವ ಚಿತ್ರ ‘ಅವನೇ ಶ್ರೀಮನ್ನಾರಾಯಣ’.
- ರಕ್ಷಿತ್ ಶೆಟ್ಟಿ, ನಟ