Asianet Suvarna News Asianet Suvarna News

ಸಾ ರಾ ಮಹೇಶ್ ರಾಜೀನಾಮೆಗೆ ಕಾರಣ ಹೇಳಿದ ಅನಿತಾ ಕುಮಾರಸ್ವಾಮಿ

ಕೆಲ ದಿನಗಳ ಹಿಂದೆ ರಾಜೀನಾಮೆ ನೀಡಿದ್ದ ಜೆಡಿಎಸ್ ಶಾಸಕ ಸಾ ರಾ ಮಹೇಶ್ ಅವರ ರಾಜೀನಾಮೆಗೆ ನೈಜ ಕಾರಣ ಏನು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. 

No One Quit JDS Says MLA Anitha Kumaraswamy
Author
Bengaluru, First Published Oct 19, 2019, 10:57 AM IST

ರಾಮ​ನ​ಗರ [ಅ.19]:  ಜೆಡಿ​ಎಸ್‌ ಶಾಸ​ಕರು ಕಾಂಗ್ರೆಸ್‌ ಮತ್ತು ಬಿಜೆಪಿ ಸೇರು​ತ್ತಾರೆ ಎಂಬು​ದೆಲ್ಲ ವದಂತಿ. ಯಾರು ಕೂಡ ಬೇರೆ ಪಕ್ಷಕ್ಕೆ ಹೋಗುವ ಮನ​ಸ್ಥಿ​ತಿ​ಯಲ್ಲಿ ಇಲ್ಲ ಎಂದು ಶಾಸಕಿ ಅನಿತಾ ಕುಮಾ​ರ​ಸ್ವಾಮಿ ತಿಳಿ​ಸಿ​ದರು.

ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಸಾ.ರಾ.​ಮ​ಹೇಶ್‌ ಅವರು ತಮ್ಮ ಕ್ಷೇತ್ರದ ಅನು​ದಾ​ನ​ಗ​ಳನ್ನು ಕಡಿತ ಮಾಡ​ಲಾ​ಗಿದೆ ಎಂಬ ಕಾರ​ಣಕ್ಕೆ ಶಾಸಕ ಸ್ಥಾನಕ್ಕೆ ರಾಜಿ​ನಾಮೆ ನೀಡಿ​ದ್ದರು. ಈಗ ರಾಜೀನಾ​ಮೆ​ಯನ್ನು ಹಿಂದಕ್ಕೆ ಪಡೆ​ದು​ಕೊಂಡಿ​ದ್ದಾರೆ. ಪಕ್ಷದ ಯಾವ ಶಾಸ​ಕರು ಬೇರೆ ಪಕ್ಷಕ್ಕೆ ಹೋಗು​ವು​ದಿಲ್ಲ ಎಂದ​ರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಾಜಿ ಸಚಿವ ಎಚ್‌.ವಿಶ್ವನಾಥ್‌ ಹಾಗೂ ಸಾ.ರಾ.ಮಹೇಶ್‌ ಹಿ​ರಿಯ ನಾಯ​ಕರು. ಆದರೆ ಅವರಿಬ್ಬರು ಆ ರೀತಿ ಮಾತನಾಡುವುದು ಬೇಕಾಗಿರಲಿಲ್ಲ. ನಾನು ಸಾ.ರಾ.ಮಹೇಶ್‌ ಜೊತೆ ಈ ಬಗ್ಗೆ ಮಾತನಾಡಿದ್ದೇನೆ

ವಿಶ್ವನಾಥ್‌ ರವರು ಹಿರಿಯರಿದ್ದಾರೆ. ನೀವು ಅವರ ಮಾತಿಗೆ ರಿಯಾಕ್ಟ್ ಮಾಡಬೇಡಿ ಎಂದಿದ್ದೇನೆ ಎಂದು ಅನಿತಾ ಹೇಳಿ​ದರು.

Follow Us:
Download App:
  • android
  • ios