Asianet Suvarna News Asianet Suvarna News

ಆಪರೇಷನ್ ಇಲ್ಲ ಇಲ್ಲ ಎನ್ನುತ್ತಿದ್ದ ಬಿಜೆಪಿಯ ಮುಖವಾಡ ಬಟಾಬಯಲು

ಆಪರೇಷನ್ ಕಮಲ ಇಲ್ಲ ಇಲ್ಲ ಎನ್ನುವ ರಾಜ್ಯ ಬಿಜೆಪಿಯ ಅಸಲಿ ಮುಖವನ್ನು ಜೆಡಿಎಸ್ ಶಾಸಕ ಬಟಾಬಯಲು ಮಾಡಿದ್ದಾರೆ.

Operation Kamala: BJP Leader Jagadish Shettar Woo JDS MLA
Author
Bengaluru, First Published Jan 16, 2019, 4:58 PM IST

ಬೆಂಗಳೂರು,(ಜ.16): ಆಪರೇಷನ್ ಇಲ್ಲ ಇಲ್ಲ ಎನ್ನುತ್ತಲೇ ಬಿಜೆಪಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಕ್ಕೆ ಆಪತ್ತು ತಂದೊಡ್ಡಿದೆ.

ಮೈತ್ರಿ ಸರ್ಕಾರ ರಚನೆ ಆದಗಿನಿಂದಲೇ ಸದ್ದಿಲ್ಲದೇ ಬಿಜೆಪಿ ಆಪರೇಷನ್ ಗೆ ಕೈ ಹಾಕುತ್ತಲೇ ಇದೆ. ಆದ್ರೆ ಅದ್ಯಾವುದಕ್ಕೂ ಸಮಯವಕಾಶಗಳು ಸಿಕ್ಕಿರಲಿಲ್ಲ.

ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮಹತ್ವದ ಆದೇಶ ನೀಡಿದ ಸಿದ್ದರಾಮಯ್ಯ

ಆದ್ರೆ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟ ಬಳಿಕ ಬಿಜೆಪಿ ಸದ್ದಿಲ್ಲದೇ ಕಾಂಗ್ರೆಸ್ ನ ಅತೃಪ್ತ ಶಾಸಕರಿಗೆ ಆಪರೇಷನ್ ಮೂಲಕ ಸೆಳೆಯಲು ಸದ್ದಿಲ್ಲದೆ ಕಾರ್ಯಚಟುವಟಿಕೆ ನಡೆಸಿದೆ. 

ಅಂದಿನ ಗುಪ್ತ್-ಗುಪ್ತ ಆಪರೇಷನ್ ಇದೀಗ ರಾಜ ರಾಜಕಾರಣದಲ್ಲಿ ದೊಡ್ಡ ಹಂತಕ್ಕೆ ತಲುಪಿದೆ. ಆದರೂ ಬಿಜೆಪಿ ನಾಯಕರು ಆಪರೇಷನ್ ಕಮಲವನ್ನು ತಳ್ಳಿಹಾಕುತ್ತಿದ್ದು, ಆಪರೇಷನ್ ಮಾಡುವ ಮಾತೇ ಇಲ್ಲ ಎನ್ನುತ್ತಲೇ ಬಿಜೆಪಿ ಈಗ ಮೈತ್ರಿಗೆ ಕಂಟಕ ತಂದೊಡ್ಡಿದೆ.

ರಾಜ್ಯ ರಾಜಕಾರಣದ ಸಮಗ್ರ ಬೆಳವಣಿಗೆಗಳು

ಆಪರೇಷನ್ ಸಿಕ್ರೇಟ್ ಬಿಚ್ಚಿಟ್ಟ JDS ಶಾಸಕ
ಅರಸೀಕೆರೆ ಕ್ಷೇತ್ರದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಆಪರೇಷನ್ ಕಮಲದ ಮುಖವಾಡವನ್ನು ಬಟಾಬಯಲು ಮಾಡಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ನಿನ್ನೆ (ಮಂಗಳವಾರ) ರಾತ್ರಿ ನಮ್ಮ ಪಕ್ಷದ ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್ ಗೆ ದೂರವಾಣಿ ಕರೆ ಮಾಡಿದ್ದು, 60 ಕೋಟಿ ದುಡ್ಡು, ಸಚಿವ ಸ್ಥಾನದ ಆಮೀಷ ಒಡ್ಡಿದ್ದಾರೆ ಎಂದು ಶಿವಲಿಂಗೇಗೌಡ ಬಾಂಬ್ ಸಿಡಿಸಿದ್ದಾರೆ.

Follow Us:
Download App:
  • android
  • ios