Asianet Suvarna News Asianet Suvarna News

‘ನಾವೇನು ಭಿಕ್ಷುಕರಲ್ಲ’ ಕಾಂಗ್ರೆಸ್‌ಗೆ ‘ಕುಮಾರ’ ತಿವಿತ

ದೋಸ್ತಿಗಳಲ್ಲಿ ಎಲ್ಲವೂ ಸರಿಯಾದ ಹಂತಕ್ಕೆ ಬಂತು ಎಂದು ಅಂದುಕೊಳ್ಳುತ್ತಿರುವಾಲೇ ಸಿಎಂ ಕುಮಾರಸ್ವಾಮಿ ಅವರೇ ಕಾಂಗ್ರೆಸ್ ವಿರುದ್ಧ ಮಾತನನಾಡಿದ್ದಾರೆ. ಈ ಬಾರಿ ಅವರ ಕೋಪಕ್ಕೆ ಕಾರಣ ಆಗಿರುವುದು ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಸೀಟು ಹಂಚಿಕೆ ವಿಚಾರ.

Loksabha Election 2019 Karnataka CM HD Kumaraswamy Slams Congress
Author
Bengaluru, First Published Feb 19, 2019, 6:39 PM IST

ಮೈಸೂರು[ಫೆ.18] ‘ನಾವು ಬೆಗ್ಗರ್ಸ್ ಅಲ್ಲ,  ನಮಗೆ ಏಳೋ ಐದೋ ಮೂರೋ ಸೀಟು ಬಿಟ್ಟು ಕೊಡ್ತಾರೋ ಗೊತ್ತಿಲ್ಲ.  ವೀ ಆರ್ ನಾಟ್ ಬೆಗ್ಗರ್ಸ್’ ಇದು ಸಿಎಂ ಕುಮಾರಸ್ವಾಮಿ ಹೇಳಿದ ಆಕ್ರೋಶದ ಮಾತುಗಳು.

ರಾಷ್ಟ್ರಕ್ಕೆ ಒಂದು ಸಂದೇಶ ರವಾನೆ ಆಗಬೇಕಾದರೆ ಎಲ್ಲರೂ ಕೂತು ಸೀಟು ಹಂಚಿಕೆ ಬಗ್ಗೆ ಚರ್ಚೆ ಮಾಡಬೇಕು. ಆಡಳಿತ ಕಡೆಗೆ ನಾನು ಗಮನ ಹರಿಸಿದ್ದೇನೆ. ನಮ್ಮ ರಾಷ್ಟ್ರಧ್ಯಕ್ಷರು ಕಾಂಗ್ರೆಸ್ ಜೊತೆ ಕೂತು ಮಾತಾಡಿ ಸೀಟು ಹಂಚಿಕೆ ಮಾಡಿಕೊಳ್ತಾರೆ. ನಾನು ಈ ಸ್ಥಾನ ಹಂಚಿಕೆ ಬಗ್ಗೆ ಯೋಚನೆ ಮಾಡಿಲ್ಲ ಎಂದು ಹೇಳಿದ್ದಾರೆ.

ಹಾಸನದಲ್ಲಿ ‘ಮಂಜು’ ಕವಿದ ವಾತಾವರಣ ಮರೆ, ‘ಪ್ರಜ್ವಲಿ’ಸಲು ‘ಕುಮಾರ’ ಕೃಪೆ

ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್‍ಗೆ 7 ಸ್ಥಾನಗಳನ್ನು ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 5,3,7 ಕ್ಷೇತ್ರಗಳು ಎಂಬುದು ಪ್ರಶ್ನೆಯಲ್ಲ. ವಿ ಆರ್ ನಾಟ್ ಎ ಬೆಗ್ಗರ್ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‍ಗೆ ತಿರುಗೇಟು ನೀಡಿದರು.

Follow Us:
Download App:
  • android
  • ios