Asianet Suvarna News Asianet Suvarna News

ಉಪಚುನಾವಣೆಗೆ ಸಿದ್ಧತೆ?: 50 ಸಾವಿರ ಜನರಿಗೆ ಬಾಡೂಟ ಹಾಕಿಸಿದ ಬೈರತಿ ಬಸವರಾಜ್‌!

50 ಸಾವಿರ ಜನರಿಗೆ ಬಾಡೂಟ ಹಾಕಿಸಿದ ಬೈರತಿ ಬಸವರಾಜ್‌| ಉಪಚುನಾವಣೆಗೆ ಸಿದ್ಧತೆ?| ರಾಜಕೀಯ ಗಣ್ಯರೂ ಭಾಗಿ| 2 ಟನ್‌ ಮಟನ್‌, ಮೂರೂವರೆ ಟನ್‌ ಚಿಕನ್‌, 500 ಕೇಜಿ ಮೀನು, 2 ಲಕ್ಷ ಮೊಟ್ಟೆಬಳಕೆ

KR Puram Disqualified MLA Byrathi Basavaraj Arranges Non Veg Party For 50 Thousand People
Author
Bangalore, First Published Oct 10, 2019, 7:56 AM IST

ಕೆ.ಆರ್‌.ಪುರ[ಅ.10]: ಬೆಂಗಳೂರಿನ ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಬೈರತಿ ಬಸವರಾಜ್‌ ಅವರು ವಿಜಯ ದಶಮಿ ಹಬ್ಬದ ಪ್ರಯುಕ್ತ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಬುಧವಾರ ಭರ್ಜರಿ ಬಾಡೂಟ ಏರ್ಪಡಿಸಿದ್ದರು.

ಡಿಸೆಂಬರ್‌ನಲ್ಲಿ ಉಪಚುನಾವಣೆ ನಿಗದಿಯಾಗಿದೆ, ಇದೇ ಸಂದರ್ಭಗಳಲ್ಲಿ ಕೆಆರ್‌ ಪುರ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಬೈರತಿ ಗ್ರಾಮ ಸಮೀಪದ ಕನಕಶ್ರೀ ಬಡಾವಣೆಯಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿಗೆ ಮಾಂಸಾಹಾರ ಹಾಗೂ ಸಸ್ಯಹಾರದ ವಿವಿಧ ಬಗೆಯ ಭಕ್ಷ್ಯ ಭೋಜನ ವ್ಯವಸ್ಥೆ ಮಾಡಿದ್ದರು. ಉಪಚುನಾವಣೆ ಸಮೀಸುತ್ತಿರುವುದರಿಂದ ಅನರ್ಹ ಬೈರತಿ ಬಸವರಾಜ್‌ ಈಗಿನಿಂದಲೇ ಚುನಾವಣೆ ತಯಾರಿ ಕೈಗೊಂಡಿದ್ದಾರೆ ಎನ್ನಲಾಗಿದೆ. ಅನರ್ಹ ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಮುನಿರತ್ನ, ಆರ್‌.ಶಂಕರ್‌ ಹಾಗೂ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಪೋಲಿಸ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಶರತ್ ಬಚ್ಚೇಗೌಡ ಸೇರಿ ಟಿಕೆಟ್ ಕೇಳಿದವರಿಗೆಲ್ಲ ದೊಡ್ಡ ದೊಡ್ಡ ಹುದ್ದೆ ಗಿಫ್ಟ್ ಕೊಟ್ಟ BSY

ಬಾಡೂಟ ಕಾರ್ಯಕ್ರಮದಲ್ಲಿ ಬಿರಿಯಾನಿ, ನಾಟಿಕೋಳಿ ಸಾರು, ಮೀನು ಫ್ರೈ, ಕಬಾಬ್‌, ಮೊಟ್ಟೆಸೇರಿದಂತೆ ವಿವಿಧ ಮಾಂಸಹಾರದ ಭಕ್ಷಗಳು ಸಿದ್ಧಪಡಿಸಲಾಗಿತ್ತು. ಇದಕ್ಕಾಗಿ 2 ಟನ್‌ ಮಟನ್‌, ಮೂರೂವರೆ ಟನ್‌ ಚಿಕನ್‌, 500 ಕೇಜಿ ಮೀನು, 2 ಲಕ್ಷ ಮೊಟ್ಟೆಬಳಸಲಾಗಿತ್ತು. ಬಾಡೂಟಕ್ಕೆ ಸಾರ್ವಜನಿಕರನ್ನು ಕರೆತರಲು ಖಾಸಗಿ ಬಸ್‌ಗಳ ವ್ಯವಸ್ಥೆ ಸಹಾ ಮಾಡಲಾಗಿತ್ತು.

ಏಳೆಂಟು ವರ್ಷಗಳಿಂದ ವಿಜಯದಶಮಿ ಪ್ರಯುಕ್ತ ಕ್ಷೇತ್ರದ ಜನತೆಗೆ ಊಟದ ವ್ಯವಸ್ಥೆ ಮಾಡುತ್ತಿದ್ದೇನೆ, ಇದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ, ಒಂದು ಮೆಸೇಜ್‌ ಮೂಲಕ ಎಲ್ಲರಿಗೂ ಆಹ್ವಾನಿಸಿದ್ದೆ, ಪ್ರತಿವರ್ಷಕ್ಕಿಂತ ಈ ವರ್ಷ ಐವತ್ತು ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನರು ಭಾಗಿಯಾಗಿರುವುದು ತುಂಬ ಸಂತೋಷವಾಗುತ್ತಿದೆ. ಅವರಿಗೆ ಎಂದೆಂದಿಗೂ ಅಭಾರಿಯಾಗಿದ್ದೇನೆ.

-ಬೈರತಿ ಬಸವರಾಜ್‌, ಅನರ್ಹ ಶಾಸಕ

ನನ್ನ ಕಾರಣದಿಂದಾಗಿ ಯಡಿಯೂರಪ್ಪ ಸಿಎಂ ಆಗಿದ್ದಾರೆ ಎಂದ ಅನರ್ಹ ಶಾಸಕ

Follow Us:
Download App:
  • android
  • ios