ಒಳ್ಳೆಯ ಕೆಲಸ ಮಾಡಲು ಇಂದು ಈ ಘಳಿಗೆ ಸೂಕ್ತ
ನಿತ್ಯ ಪಂಚಾಂಗ ವಿಶೇಷ
ಶ್ರೀ ಗುರುಭ್ಯೋ ನಮಃ
ಓಂ ವಿನಾಯಕ ಶಾರದಾ ದೇವತಾಭ್ಯೋ ನಮಃ
~~~~~~~~~~~~~~~~~~~~~~~~~~~~~~~~
ಶ್ರೀ ನಿತ್ಯ ಪಂಚಾಂಗ
~~~~~~~~~~~~~~~~~~~~~~~~~~~~~~~~~~
ದಿನಾಂಕ : 17/01/2019
ವಾರ : ಗುರುವಾರ
ಶ್ರೀ ವಿಳಂಬಿ ನಾಮ : ಸಂವತ್ಸರೇ
ಉತ್ತರಾಯಣ : ಆಯನೇ
ಹಿಮಂತ ಋತೌ ಪುಷ್ಯ ಮಾಸೇ
ಶುಕ್ಲ : ಪಕ್ಷೇ ಏಕಾದಶ್ಯಾಂ (06-17 pm ರವರೆಗೆ)
ಬೃಹಸ್ಪತಿ ವಾಸರೇ : ವಾಸರಸ್ತು ಕೃತ್ತಿಕಾ ನಕ್ಷತ್ರೇ (09-54 am ರವರೆಗೆ)
ಶುಕ್ಲ ಯೋಗೇ (01-12 am ರವರೆಗೆ)
ವಣಿಜ : ಕರಣೇ (11-24 am ರವರೆಗೆ)
ಸೂರ್ಯ ರಾಶಿ : ಮಕರ* ಚಂದ್ರ
ರಾಶಿ : *ವೃಷಭ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ ಸೂರ್ಯೋದಯ - 06-50 am, ಸೂರ್ಯಾಸ್ತ - 06-10 pm
~~~~~~~~~~~~~~~ ~~~~~~~~~~~~~~~
ದಿನದ ವಿಶೇಷ - ಪುತ್ರದಾ ಏಕಾದಶಿ
~~~~~~~~~~~~~~~~~~~~~~~~~~~~~~~~~~
ಅಶುಭ ಕಾಲಗಳು
ರಾಹುಕಾಲ* *01-55 pm ಇಂದ 03-21 pm
ಯಮಗಂಡಕಾಲ
06-47 am ಇಂದ 08-13 am
ಗುಳಿಕಕಾಲ
09-38 am ಇಂದ 11-04 am
~~~~~~~~~~~~~~~ ~~~~~~~~~~~~~~~
ಅಮೃತ ಕಾಲ : 11-14 am ರಿಂದ 12-47 pm ರವರೆಗೆ
~~~~~~~~~~~~~~~ ~~~~~~~~~~~~~~~~
ಮರುದಿನದ ವಿಶೇಷ : ಪ್ರದೋಷ ಪೂಜೆ
**************************************************
ಆರೋಗ್ಯ ಸಲಹೆ ಮನೆ ಮದ್ದು - ಹಲ್ಲು : ಬೆಳ್ಳುಳ್ಳಿಯನ್ನು ಜಜ್ಜಿ ಉಪ್ಪಿನ ಜೊತೆಗೆ ಮಿಶ್ರಣ ಮಾಡಿ ನೋವಿರುವ ಹಲ್ಲಿನ ಮೇಲೆ ಇಟ್ಟರೆ ಹಲ್ಲು ನೋವು ಕಡಿಮೆಯಾಗುತ್ತದೆ.
*********************************
ಭಗವಾನ್ ಶ್ರೀರಾಮಕೃಷ್ಣರ ವಚನಾಮೃತ : ಎಲ್ಲರೂ ದೇವರನ್ನು ನೋಡಬಲ್ಲರೆ? ಯಾರೂ ದಿನವೆಲ್ಲ ಉಪವಾಸ ಮಾಡಬೇಕಾಗಿಲ್ಲ. ಕೆಲವರಿಗೆ ಬೆಳಗ್ಗೆ ಒಂಬತ್ತು ಗಂಟೆಗೆ ಊಟ ಸಿಕ್ಕುತ್ತದೆ. ಮತ್ತೆ ಕೆಲವರಿಗೆ ಮಧ್ಯಾಹ್ನದಲ್ಲಿ, ಮತ್ತೆ ಕೆಲವರಿಗೆ ಎರಡು ಗಂಟೆ ಹೊತ್ತಿಗೆ, ಉಳಿದವರಿಗೆ ಸಂಜೆಯ ಸೂರ್ಯಾಸ್ತದ ಸಮಯಕ್ಕೆ ಊಟ ಸಿಕ್ಕುತ್ತದೆ. ಇದರಂತೆಯೇ ಎಂದಾದರೊಂದು ದಿನ ಈ ಜೀವನದಲ್ಲಿಯೋ ಅಥವಾ ಯಾವುದಾದರೂ ಮುಂದಿನ ಜೀವನದಲ್ಲಿಯೋ ಎಲ್ಲರೂ ದೇವರನ್ನು ಕಂಡೇ ಕಾಣುತ್ತಾರೆ.
*****************★**************************
ಶುಭಮಸ್ತು...ಶುಭದಿನ