Asianet Suvarna News Asianet Suvarna News

‘ದೀಪಾವಳಿ ಬಳಿಕ ಮಂದಿರ ನಿರ್ಮಾಣ ಕಾರ್ಯ ಶುರು’!

‘ದೀಪಾವಳಿ ಬಳಿಕ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭ’! ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರವಸೆ! ಪ್ರಭು ಶ್ರೀರಾಮನ ಹೆಸರಲ್ಲಿ ದೀಪ ಹಚ್ಚುವಂತೆ ಕರೆ ನೀಡಿದ ಸಿಎಂ! ‘ಈ ಬಾರಿ ಪ್ರಭು ಶ್ರೀರಾಮ ನಮಗೆಲ್ಲಾ ಬೆಳಕು ತೋರಲಿದ್ದಾನೆ’
 

UP Chief Minister Yogi Adityanath Says Ram Mandir Work Start Soon
Author
Bengaluru, First Published Nov 4, 2018, 7:13 PM IST

ಬಿಕಾನೇರ್(ನ.4): ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಹಿಂದೂ ಭಕ್ತರ ಆಶಯಗಳು ದೀಪಾವಳಿಯ ಬಳಿಕ ಶೀಘ್ರವೇ ನಿಜವಾಗಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ  ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ರಾಜಸ್ಥಾನದ ಬಿಕಾನೇರ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಆದಿತ್ಯನಾಥ್, ಈ ಬಾರಿ ನಮಗೆಲ್ಲಾ ಶ್ರೀರಾಮ ಬೆಳಕು ತೋರಲಿದ್ದಾನೆ. ದೀಪಾವಳಿ ಹಬ್ಬದ ಬಳಿಕ ಶೀಘ್ರವೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕೆಂಬುದು ಪ್ರತಿಯೊಬ್ಬ ಹಿಂದೂವಿನ ಬಯಕೆಯಾಗಿದ್ದು, ಪ್ರಭು ಶ್ರೀರಾಮನ ಆಶೀರ್ವಾದದಿಂದ ಈ ಕನಸು ಈಡೇರಲಿದೆ ಎಂದು ಆದಿತ್ಯನಾಥ್ ಭರವಸೆ ವ್ಯಕ್ತಪಡಿಸಿದರು.

Follow Us:
Download App:
  • android
  • ios