Asianet Suvarna News Asianet Suvarna News

ನಂಬಿದ್ರೆ ನಂಬಿ: ಶೌಚಾಲಯ ಕಟ್ಟಿಸಿಕೊಳ್ಳಿಯೆಂದು ಧರಣಿಗೆ ಕುಳಿತ ಅಧಿಕಾರಿಗಳು..!

ನಿನ್ನೆ ನಡೆದ ಅಧಿಕಾರಿಗಳ ಈ ಧರಣಿಗೆ ಗ್ರಾಮದ ಮಕ್ಕಳು ಸಹ ಸಾಥ್ ಕೊಟ್ಟಿದ್ದರು. ಇಡೀದಿನ ನಡೆದ ಪ್ರತಿಭಟನೆಗೆ ವಿಚಲಿತರಾದ ಗ್ರಾಮಸ್ಥರು ಶೌಚಾಲಯ ನಿರ್ಮಿಸುವ ನಿರ್ಧಾರ ಮಾಡಿದ್ದಾರೆ.

Taluk Officers strike to Convince Villagers to Build Toilet

ತುಮಕೂರು(ಸೆ.17): ಶೌಚಾಲಯ ಕಟ್ಟಿಸೋಕೆ ಗ್ರಾಮಸ್ಥರು ಪ್ರತಿಭಟನೆ ಮಾಡೋದನ್ನ ಕೇಳಿದೀವಿ, ನೋಡಿದೀವಿ. ಆದ್ರೆ ತುಮಕೂರು ಜಿಲ್ಲೆಯ ಗ್ರಾಮ ಒಂದರಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಿ ಅಂತ ಅಧಿಕಾರಿಗಳೇ ಗ್ರಾಮಕ್ಕೆ ಬಂದು ಧರಣಿ ನಡೆಸಿದ ಘಟನೆ ನಡೆದಿದೆ.

ಹೌದು, ತುಮಕೂರು ತಾಲೂಕಿನ ಬೆಳದರ ಗ್ರಾಮ ಪಂಚಾಯ್ತಿಯ ಜಕ್ಕೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ತಾಲೂಕು ಪಂಚಾಯ್ತಿ ಅಧಿಕಾರಿಗಳು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಗ್ರಾಮಸ್ಥರ ಮನವೊಲಿಸಲು ಮುಂದಾಗಿದ್ದರು. ಆದ್ರೆ ಗ್ರಾಮಸ್ಥರು ಶೌಚಾಲಯ ನಿರ್ಮಿಸಿಕೊಳ್ಳಲು ಒಪ್ಪದಿದ್ದಾಗ, ತಾಲೂಕು ಪಂಚಾಯ್ತಿ EO ನಾಗಣ್ಣ ಅವರ ನೇತೃತ್ವದಲ್ಲಿ ಧರಣಿಗೆ ಕೂತಿದ್ದಾರೆ.

ನಿನ್ನೆ ನಡೆದ ಅಧಿಕಾರಿಗಳ ಈ ಧರಣಿಗೆ ಗ್ರಾಮದ ಮಕ್ಕಳು ಸಹ ಸಾಥ್ ಕೊಟ್ಟಿದ್ದರು. ಇಡೀದಿನ ನಡೆದ ಪ್ರತಿಭಟನೆಗೆ ವಿಚಲಿತರಾದ ಗ್ರಾಮಸ್ಥರು ಶೌಚಾಲಯ ನಿರ್ಮಿಸುವ ನಿರ್ಧಾರ ಮಾಡಿದ್ದಾರೆ. ಗ್ರಾಮದ ಎಲ್ಲಾ 85 ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ನಾಳೆ ಗುದ್ದಲಿಪೂಜೆ ನೆರವೇರಲಿದೆ.

Follow Us:
Download App:
  • android
  • ios