ಶರತ್ ಹತ್ಯೆಯ ಹಿಂದಿನ ಸತ್ಯವನ್ನು ಪೊಲೀಸರ ಮುಂದೆ ಬಿಚ್ಚಿಟ್ಟ ಆರೋಪಿಗಳು
ಐಟಿ ಅಧಿಕಾರಿ ಪುತ್ರ ಶರತ್ ಕೊಲೆಗೈದ ಆರೋಪಿಗಳನ್ನ ಪೊಲೀಸರು ಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸಿದ್ದಾರೆ. ಕಂಬಿ ಎಣಿಸ್ತಿರೋ ಆರೋಪಿಗಳು ಪೊಲೀಸರ ಮುಂದೆ ಶರತ್ ಹತ್ಯೆಯ ಹಿಂದಿನ ಕೆಲವು ಸತ್ಯಗಳನ್ನ ಹೋರಹಾಕಿದ್ದಾರೆ.
ಬೆಂಗಳುರು (ಸೆ.24): ಐಟಿ ಅಧಿಕಾರಿ ಪುತ್ರ ಶರತ್ ಕೊಲೆಗೈದ ಆರೋಪಿಗಳನ್ನ ಪೊಲೀಸರು ಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸಿದ್ದಾರೆ. ಕಂಬಿ ಎಣಿಸ್ತಿರೋ ಆರೋಪಿಗಳು ಪೊಲೀಸರ ಮುಂದೆ ಶರತ್ ಹತ್ಯೆಯ ಹಿಂದಿನ ಕೆಲವು ಸತ್ಯಗಳನ್ನ ಹೋರಹಾಕಿದ್ದಾರೆ.
ಶರತ್’ ನನ್ನ ಕಿಡ್ನಾಪ್ ಮಾಡಲು ವಿಶಾಲ್ ಅಂಡ್ ಟಿಂ ತಿಂಗಳ ಹಿಂದೆಯೇ ಬಾರ್ನಲ್ಲಿ ಎರಡು ಬಾರಿ ಮಿಟಿಂಗ್ ನಡೆಸಿತ್ತಂತೆ. ಶರತ್ ಅಕ್ಕನ ಜೊತೆ ಸಲುಗೆ ಬೆಳಸಿದ್ದ ಪ್ರಕರಣದ ಪ್ರಮುಖ ಆರೋಪಿ ವಿಶಾಲ್ , ಶರತ್ ತಂದೆಯಾಗಿರೋ ಐಟಿ ಅಧಿಕಾರಿ ನಿರಂಜನ್ ಬಳಿ ಹೆಚ್ಚು ಹಣವಿರೋದನ್ನ ಪತ್ತೆ ಹಚ್ಚಿದ್ದನಂತೆ. ಈ ಕಾರಣಕ್ಕೆ ಕಳೆದ ಒಂದು ತಿಂಗಳಿನಿಂದ ಹೆಚ್ಚು ಭಾರಿ ಶರತ್ ಮನೆಗೆ ವಿಶಾಲ್ ಹೋಗಿ ಬರುತ್ತಿದ್ದನಂತೆ.
ಶರತ್ನನ್ನು ಕಿಡ್ನಾಪ್ ಮಾಡಿದ್ದ ದಿನವೇ ಕಿಡ್ನಾಪರ್ಸ್ ಶರತ್ , ತಂದೆ ಮತ್ತು ಅಕ್ಕನ ಮೊಬೈಲ್ ‘ಗೆ ಮೇಸೆಜ್ ಕಳುಹಿಸೋ ಮೂಲಕ 50 ಲಕ್ಷಕ್ಕೆ ಬೇಡಿಕೆಯಿಡುತ್ತಾರೆ. ತಕ್ಷಣ ಗಾಬರಿಗೊಂಡ ಶರತ್ ತಂದೆ ನಿರಂಜನ್ ಮೆಸೆಜ್ ಬಂದ ಕೇಲವೇ ಕ್ಷಣಗಳಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ಹೋಗಿ ಮಗನನ್ನ ಉಳಿಸಿಕೊಡುವಂತೆ ದೂರನ್ನ ಕೊಡುತ್ತಾರೆ. ಇಂಟ್ರಸ್ಟೆಟಿಂಗ್ ಅಂದ್ರೆ ಶರತ್ ತಂದೆ ಜೊತೆಯಲ್ಲೆ ಕಿಡ್ನಾಪ್ನ ಮಾಸ್ಟರ್ ಮೈಂಡ್ ಹಾಗೂ ಪ್ರಕರಣದ ಪ್ರಮುಖ ಆರೋಪಿ ವಿಶಾಲ್ ಕೂಡ ಹೋಗಿ ಪೊಲೀಸ್ ಠಾಣೆಯಲ್ಲಿ ಡ್ರಾಮ ಮಾಡಿರ್ತಾರೆ. ಅದ್ಯಾವಾಗ ನಿರಂಜನ್ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಿದ್ದಂತೆ ಶರತ್’ನನ್ನು ಮುಗಿಸುವಂತೆ ವಿಶಾಲ್ ತನ್ನ ಟಿಂಗೆ ಸಿಗ್ನಲ್ ಕೊಟ್ಟಿರ್ತಾನೆ. ಅದೇ ವೇಳೆಗೆ ಪೊಲೀಸರು ಕೂಡ ನಿರಂಜನ್ ಮೊಬೈಲ್ನಿಂದ ಶರತ್ ಮೊಬೈಲ್ಗೆ 50 ಲಕ್ಷ ಕೋಡೋದಿಕ್ಕೆ ಆಗಲ್ಲ 10 ಲಕ್ಷ ಕೋಡುತ್ತೇವೆ ಶರತ್ನನ್ನ ಬಿಟ್ಟುಬಿಡಿ ಎಂದು ಕೊಲೆಗಡುಕರಿಗೆ ಮೆಸೇಜ್ ಕಳಿಸ್ತಾರೆ. ಆದ್ರೆ ಪೊಲೀಸರ ಮೇಸೆಜ್ ತಲುಪವಷ್ಟರಲ್ಲೇ ಕೋಲೆಗಡುಕರು ಶರತ್ನನ್ನ ಕೊಲೆ ಮಾಡಿರ್ತಾರೆ.
ಶರತ್ ಕಿಡ್ನಾಪ್ ಆದ ದಿನದಿಂದಲೂ ಶರತ್ ಮೊಬೈಲ್ ನೆಟ್ವರ್ಕ್ ಎಲ್ಲಿದೆ ಅನ್ನೋದನ್ನ ಪತ್ತೆ ಹಚ್ಚೋಕೆ ಪೊಲೀಸರು ಹರಸಾಹಸಪಡುತ್ತಿದ್ದರು. ಅಷ್ಟಾರಲ್ಲಾಗಲೇ ಶರತ್ನನ್ನ ಕಿಡ್ನಾಪ್ ಮಾಡಿದ ದಿನವೇ ಶರತ್ನನ್ನು ಕೊಲೆಗೈದು ಶರತ್ ದೇಹದ ಜೊತೆ ಶರತ್ ಮೊಬೈಲ್ನ ಕೆರೆಗೆ ಬಿಸಾಡಿರ್ತಾರೆ. ಇನ್ನು ಪೊಲೀಸರು ಶರತ್ ದೇಹವನ್ನ ಹುಡುಕಲು ತೆಗೆದುಕೊಂಡಿದ್ದು ಮಾತ್ರ ಬರೋಬ್ಬರಿ ಹತ್ತು ದಿನಗಳು ಒಟ್ನಲ್ಲಿ ಕಿಡ್ನಾಪ್ ಹಿಂದಿನ ಅಸಲಿ ಸತ್ಯಗಳನ್ನ ಪೊಲೀಸರ ಮುಂದೆ ಆರೋಪಿಗಳು ಬಾಯ್ಬಿಟ್ಟಿದ್ರೆ, ತಲೆಮರೆಸಿಕೊಂಡಿರೋ ಇನ್ನೊಬ್ಬ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.