Asianet Suvarna News Asianet Suvarna News

ಮೋದಿ ಮುಕ್ತ ಭಾರತಕ್ಕೆ ಠಾಕ್ರೆ ಕರೆ

  • ಮೋದಿ ಮುಕ್ತ ಭಾರತ ನಿರ್ಮಾಣಕ್ಕೆ ರಾಜ್ ಠಾಕ್ರೆ ಕರೆ
  • ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಬೇಕೆಂದು ಕರೆ
Raj Thackeray calls for Modi Mukt Bharat

ಮುಂಬೈ:  ಮೋದಿ ಮುಕ್ತ ಭಾರತ ನಿರ್ಮಾಣಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖಂಡ ರಾಜ್ ಠಾಕ್ರೆ ಕರೆ ನೀಡಿದ್ದಾರೆ.

ಗುಡಿ ಪಾಡ್ವಾ ನಿಮಿತ್ತ ಮುಂಬೈಯ ಶಿವಾಜಿ ಪಾರ್ಕ್’ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ ಠಾಕ್ರೆ, ನಾವಿಂದು ಮೂರನೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಿದ್ಧರಾಗಬೇಕಾಗಿದೆ. ಮೋದಿ-ಮುಕ್ತ ಭಾರತವನ್ನು ನಿರ್ಮಿಸಲು ಎಲ್ಲಾ ರಾಜಕೀಯ ಪಕ್ಷಗಳು ಒಂದಾಗಬೇಕೆಂದು, ಕರೆ ನೀಡಿದ್ದಾರೆ.

ಸುಮಾರು ಒಂದು ಗಂಟೆ ಮಾತನಾಡಿದ ಠಾಕ್ರೆ, ಕೆಲವರು ಮುಂದಿನ ದಿನಗಳಲ್ಲಿ ದೇಶಾದ್ಯಂತ ಗಲಭೆ ನಡೆಸುವ ಪ್ರಯತ್ನದಲ್ಲಿದ್ದಾರೆ ಎಂದು ಕೂಡಾ ಈ ಸಂದರ್ಭದಲ್ಲಿ ಎಚ್ಚರಿಸಿದ್ದಾರೆ.

ಉತ್ತರ ಪ್ರದೇಶದ ಪ್ರಮುಖ 2 ಲೋಕಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಗಳಲ್ಲಿ ಬಿಜೆಪಿಯು ಸೋಲುಂಡ ಬಳಿಕ ಪ್ರತಿಪಕ್ಷಗಳ ಪೈಕಿ ಮೈತ್ರಿಯ ಬಗ್ಗೆ ಚರ್ಚೆಗಳು ಗರಿಗೆದರಿವೆ.

Follow Us:
Download App:
  • android
  • ios