'ವನ್ಯಜೀವಿ ಸಂರಕ್ಷಣ ಮಹಾ ಅಭಿಯಾನ':ಸಾರ್ವಜನಿಕರಿಂದ 'ಘೋಷಣಾ ವಾಕ್ಯ' ರಚನೆಗೆ ಆಹ್ವಾನ
ಉತ್ತಮ ಘೋಷಣಾ ವಾಕ್ಯ ರಚಿಸಿದ ಆಯ್ದ ಕೆಲವರು ಅಭಿಯಾನದ ರಾಯಭಾರಿಯಾದ ಪ್ರಕಾಶ್ ರೈ ಅವರ ಜೊತೆ ವನ್ಯಜೀವಿ ಸಪ್ತಾಹ ಅಭಿಯಾನದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ.
ಬೆಂಗಳೂರು(ಏ.27): ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಆರಂಭಿಸಿರುವ 'ವನ್ಯಜೀವಿ ಸಂರಕ್ಷಣೆ' ಮಹಾ ಅಭಿಯಾನದ ಅಂಗವಾಗಿ ಸಾರ್ವಜನಿಕರಿಂದ 'ಘೋಷಣಾ ವಾಕ್ಯ(Slogan)' ರಚಿಸಲು ಆಹ್ವಾನಿಸಲಾಗಿದೆ. ಉತ್ತಮ ಘೋಷಣಾ ವಾಕ್ಯ ರಚಿಸಿದ ಆಯ್ದ ಕೆಲವರು ಅಭಿಯಾನದ ರಾಯಭಾರಿಯಾದ ಪ್ರಕಾಶ್ ರೈ ಅವರ ಜೊತೆ ವನ್ಯಜೀವಿ ಸಪ್ತಾಹ ಅಭಿಯಾನದಲ್ಲಿ ಪಾಲ್ಗೊಳ್ಳುವ ಅವಕಾಶವಿದೆ.
ಘೋಷಣಾ ವಾಕ್ಯ ಕಳುಹಿಸಬೇಕಾದ ವಿಳಾಸ :
ಸುವರ್ಣ ನ್ಯೂಸ್,#36,ಕ್ರೆಸೆಂಟ್ ರಸ್ತೆ,ಮಲ್ಲಿಗೆ ಆಸ್ಪತ್ರೆ ಎದುರು, ಬೆಂಗಳೂರು-560001, ಇಮೇಲ್ ವಿಳಾಸ:savewildlife@suvarnanews.in,ದೂರವಾಣಿ ಸಂಖ್ಯೆ: 7892181851