Asianet Suvarna News Asianet Suvarna News

56 ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

56 ಸಾಧಕರಿಗೆ ಇಂದು ಮಾ.11ರ ಪದ್ಮ ಪ್ರಶಸ್ತಿ ಪ್ರದಾನ| ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ರವರಿಂದ ಪ್ರಶಸ್ತಿ ಪ್ರದಾನ

President Kovind to confer Padma awards
Author
New Delhi, First Published Mar 11, 2019, 9:22 AM IST

ನವದೆಹಲಿ[ಮಾ.11]: ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿದ 56 ಸಾಧಕರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸೋಮವಾರ ರಾಷ್ಟ್ರಪತಿ ಭವನದಲ್ಲಿ ಹಮ್ಮಿಕೊಳ್ಳಲಾದ ಸಮಾರಂಭದಲ್ಲಿ ಪದ್ಮ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಸಕ್ತ ಸಾಲಿನ ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು 112 ಮಂದಿ ಸಾಧಕರಿಗೆ ಪ್ರಕಟಿಸಲಾಗಿದ್ದು, ಅವರಲ್ಲಿ 56 ಮಂದಿಗೆ ಮೊದಲ ಹಂತದಲ್ಲಿ ಪ್ರಧಾನ ಮಾಡಲಾಗುತ್ತಿದೆ. ಖ್ಯಾತ ನಟ ದಿ. ಖಾದರ್‌ ಖಾನ್‌, ಅಕಾಲಿ ದಳದ ನಾಯಕ ಸುಖದೇವ್‌ ಸಿಂಗ್‌ ಧಿಂಡ್ಸಾ, ಖ್ಯಾತ ಪತ್ರಕರ್ತ ದಿ. ಕುಲದೀಪ್‌ ನಾಯರ್‌ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಅಥವಾ ಅವರ ಕುಟುಂಬ ಸದಸ್ಯರಿಗೆ ಪುರಸ್ಕಾರ ಪ್ರದಾನಮಾಡಲಾಗುವುದು. ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್‌ ಸಿಂಗ್‌ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಉಳಿದ ಸಾಧಕರಿಗೆ ಮಾರ್ಚ್ 16ರಂದು ಪ್ರದಾನ ಮಾಡಲಾಗುವುದು. ಈ ಬಾರಿ ಕರ್ನಾಟಕದ 5 ಮಂದಿಗೆ ಪದ್ಮಶ್ರೀ ಪ್ರಕಟಿಸಲಾಗಿತ್ತು. ಅವರೆಂದರೆ ಸಾಲುಮರದ ತಿಮ್ಮಕ್ಕ, ಖ್ಯಾತ ಸರೋದ್‌ ವಾದಕ ರಾಜೀವ್‌ ತಾರಾನಾಥ್‌, ನಟ ಪ್ರಭುದೇವ, ಪ್ರೊ. ರೋಹಿಣಿ ಗೋಡ್ಬಲೆ ಮತ್ತು ಡಾ. ಶಾರದಾ ಶ್ರೀನಿವಾಸ್‌.

Follow Us:
Download App:
  • android
  • ios