ಬಿಜೆಪಿ ಮುಖಂಡರಿಗೆ ತಲೆ ಬಿಸಿಯಾಗಿರುವ ಅಮಿತ್ ಶಾ'ರ 8 ದಿನದ ತಾಕೀತು
ತುರುವೇಕೆರೆಯಿಂದ ಕಾಪುವರೆಗಿನ ಯಾತ್ರೆಯ ರಿಪೋರ್ಟ್ಗಳನ್ನು ದಿನವೂ ತರಿಸಿಕೊಳ್ಳುತ್ತಿದ್ದು, ಜನರ ಪ್ರತಿಕ್ರಿಯೆ ನೋಡಿ ಸ್ವಲ್ಪ ಸಮಾಧಾನ ಆಗಿದ್ದಾರಂತೆ.
ಯಡಿಯೂರಪ್ಪನವರ ಪರಿವರ್ತನಾ ಯಾತ್ರೆಯಲ್ಲಿ ಯಡಿಯೂರಪ್ಪ ಹೊರತಾಗಿ ಜಗದೀಶ್ ಶೆಟ್ಟರ್, ಈಶ್ವರಪ್ಪ, ಆರ್ ಅಶೋಕ್, ಪ್ರಹ್ಲಾದ್ ಜೋಶಿ, ಗೋವಿಂದ ಕಾರಜೋಳ ಮತ್ತು ಸದಾನಂದ ಗೌಡರಿಗೆ ಕನಿಷ್ಠ 8 ದಿನ ಯಾತ್ರೆಗೆ ಹೋಗಲೇಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಾಕೀತು ಮಾಡಿದ್ದಾರಂತೆ. ಅಂದ ಹಾಗೆ ಬೆಂಗಳೂರು ಯಾತ್ರೆಯ ಉದ್ಘಾಟನೆ ನೋಡಿ ವಿಚಲಿತರಾಗಿದ್ದ ಅಮಿತ್ ಶಾ, ತುರುವೇಕೆರೆಯಿಂದ ಕಾಪುವರೆಗಿನ ಯಾತ್ರೆಯ ರಿಪೋ
ರ್ಟ್ಗಳನ್ನು ದಿನವೂ ತರಿಸಿಕೊಳ್ಳುತ್ತಿದ್ದು, ಜನರ ಪ್ರತಿಕ್ರಿಯೆ ನೋಡಿ ಸ್ವಲ್ಪ ಸಮಾಧಾನ ಆಗಿದ್ದಾರಂತೆ. ಆದರೆ ಕರ್ನಾಟಕದ ಪಕ್ಷದ ಸ್ಥಿತಿಗತಿಯ ಅರಿವಿರುವ ಅವರು ಗುಜರಾತ್ ಚುನಾವಣೆ ನಂತರ ವಾರಕ್ಕೆ ಒಮ್ಮೆ ಬಂದು ಕ್ಲಾಸ್ ತೆಗೆದುಕೊಂಡರೂ ಆಶ್ಚರ್ಯವಿಲ್ಲ.
(ಪ್ರಶಾಂತ್ ನಾತೂ ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ- ಕನ್ನಡಪ್ರಭ )