Asianet Suvarna News Asianet Suvarna News

ತೋಬಾ ತೋಬಾ: ದಾಳಿಯಲ್ಲಿ ಯಾರೂ ಸತ್ತಿಲ್ಲ ಅಂತಿದೆ ಪಾಕ್!

ಪುಲ್ವಾಮಾ ದಾಳಿಗೆ ಪ್ರತೀಕರ ತೀರಿಸಿಕೊಂಡ ಭಾರತ| ಪಾಕ್ ನೆಲದಲ್ಲಿ ಉಗ್ರರ ಚೆಂಡಾಡಿದ ವಾಯುಸೇನೆ| ಜೆಇಎಂ ಕ್ಯಾಂಪ್ ಮೇಲೆ ಬಾಂಬ್ ದಾಳಿ| ದಾಳಿ ಕುರಿತು ಪಾಕ್ ಹೇಳುವ ಕತೆಯೇ ಬೇರೆ| ದಾಳಿಯಲ್ಲಿ ಯಾರೂ ಸತ್ತಿಲ್ಲ ಅಂತಿದ್ದಾರೆ ಪಾಕ್ ಸೇನಾ ಡಿಜಿ ಮೇಜರ್‌ ಜನರಲ್‌ ಆಸಿಫ್ ಗಫ‌ೂರ್‌| 

Pakistan Claims No Causalities Occurred in Indian Air Force Attack
Author
Bengaluru, First Published Feb 26, 2019, 4:41 PM IST

ಇಸ್ಲಾಮಾಬಾದ್‌(ಫೆ.26): ಒಂದೆಡೆ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ಪಾಕ್ ನೆಲದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿ ನೂರಾರು ಉಗ್ರರನ್ನು ಚೆಂಡಾಡಿದೆ. ಇನ್ನೊಂದೆಡೆ ಪಾಕಿಸ್ತಾನ ದಾಳಿಯನ್ನು ಒಪ್ಪಿಕೊಂಡಿದ್ದರೂ, ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ವಾದಿಸುತ್ತಿದೆ.

ಭಾರತೀಯ ವಾಯುಪಡೆಯ ವಿಮಾನಗಳು ಗಡಿ ನಿಯಂತ್ರಣ ರೇಖೆ(ಎಲ್ಒಸಿ)ಯನ್ನು ದಾಟಿದ್ದು, ಪಾಕಿಸ್ತಾನ ಕೂಡಲೇ ಎಚ್ಚರಿಕೆ ನೀಡಿದೆ ಎಂದು ಪಾಕಿಸ್ತಾನ ಸೇನೆ ಹೇಳಿದೆ. ಅಲ್ಲದೆ ಭಾರತ ನಡೆಸಿದ ಏರ್ ಸ್ಟ್ರೇಕ್ ನಲ್ಲಿ ಯಾವುದೇ ಸಾವು ಸಂಭವಿಸಿಲ್ಲ ಎಂದು  ಪಾಕ್ ಸೇನಾ ಡಿಜಿ ಮೇಜರ್‌ ಜನರಲ್‌ ಆಸಿಫ್ ಗಫ‌ೂರ್‌ ಹೇಳಿದ್ದಾರೆ.

ಭಾರತೀಯ ವಾಯುಪಡೆಯ ವಿಮಾನಗಳು ಭಾರತ – ಪಾಕ್‌ನ ಗಡಿ ನಿಯಂತ್ರಣ ರೇಖೆಯನ್ನು ದಾಟಿವೆ. ಕೂಡಲೇ ಎಚ್ಚೆತ್ತುಕೊಂಡ ಪಾಕಿಸ್ತಾನ ವಾಯುಪಡೆಯು ಎಚ್ಚರಿಕೆಯನ್ನು ನೀಡಿದೆ. ಇದರಿಂದಾಗಿ ಭಾರತೀಯ ಯುದ್ಧ ವಿಮಾನಗಳು ಕೂಡಲೇ ವಾಪಸ್‌ ಹೋಗಿವೆ ಎಂದು ಗಫೂರ್‌ ಟ್ವೀಟ್‌ ಮಾಡಿದ್ದಾರೆ.

ಇನ್ನು ಭಾರತದ ವಾಯುಸೇನೆಯು ಹಾಕುತ್ತಿದ್ದ ಬಾಂಬ್‌ನ್ನು ತೆರೆದ ಪ್ರದೇಶದಲ್ಲಿ ಬೀಳುವಂತೆ ಮಾಡಿದ್ದರಿಂದಾಗಿ ಸಾವು ನೋವು ಸಂಭವಿಸಿಲ್ಲ ಎಂದು ಪಾಕ್ ಸೇನೆ ಹೇಳಿಕೊಂಡಿದೆ.

Follow Us:
Download App:
  • android
  • ios