ಕಬ್ಬನ್'ಪಾರ್ಕ್ ಠಾಣೆಗೆ ಶರಣಾದ ನಲಪಾಡ್; ಗೂಂಡಾ ಮಗನನ್ನು ಮನೆಯಲ್ಲೇ ಬಚ್ಚಿಟ್ಟುಕೊಂಡಿದ್ದರಾ ಹ್ಯಾರಿಸ್
ಹಲ್ಲೆ ನಡೆಸಿ 36 ಗಂಟೆಗಳ ಬಳಿಕ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ನಿನ್ನೆಯಿಂದ ತಲೆ ಮರೆಸಿಕೊಂಡಿದ್ದ ನಲಪಾಡ್ ಇಂದು ಶರಣಾಗಿದ್ದಾರೆ.
ಬೆಂಗಳೂರು(ಫೆ.19): ವಿಧ್ವತ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಶಾಂತಿನಗರ ಶಾಸಕ ಎನ್ಎ ಹ್ಯಾರಿಸ್ ಪುತ್ರ, ಮೊಹಮ್ಮದ್ ನಲಪಾಡ್ ಕಬ್ಬನ್'ಪಾರ್ಕ್ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಹಲ್ಲೆ ನಡೆಸಿ 36 ಗಂಟೆಗಳ ಬಳಿಕ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ನಿನ್ನೆಯಿಂದ ತಲೆ ಮರೆಸಿಕೊಂಡಿದ್ದ ನಲಪಾಡ್ ಇಂದು ಶರಣಾಗಿದ್ದಾರೆ.
ಮಗ ಎಲ್ಲಿದ್ದಾನೆ ಎಂದು ಗೊತ್ತಿಲ್ಲ ಎಂದು ಹ್ಯಾರಿಸ್ ನಿನ್ನೆಯಷ್ಟೇ ಹೇಳಿದ್ದರು. ಆದರೆ ಮಗನನ್ನು ಮನೆಯಲ್ಲೇ ಬಚ್ಚಿಟ್ಟುಕೊಂಡಿದ್ದಾರಾ ಎಂಬ ಅನುಮಾನ ಮೂಡತೊಡಗಿದೆ. KA - 51 MF- 9232 ಬೆನ್ಜ್ ಕಾರಿನಲ್ಲಿ ಆಗಮಿಸಿದ ನಲಪಾಡ್ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.