ಆಕಾಶವಾಣಿ ವಾರ್ತಾವಾಚಕ ಬಲದೇವಾನಂದ ಸಾಗರರೊಂದಿಗೆ ಮಾತು-ಕತೆ
ಜನರನ್ನು ಒಗ್ಗೂಡಿಸಿದ ಮಾಧ್ಯಮ ಅಂದರೆ ಅದು ಆಕಾಶವಾಣಿ. ರೇಡಿಯೋ ಕೇಳದ ಜನರೇ ಇಲ್ಲ. ದೇಶದ ಅತಿ ಹೆಚ್ಚಿನ ಜನರನ್ನು ತಲುಪುವ ಮಾಧ್ಯಮ ಇಂದಿಗೂ ತನ್ನ ತಾಕತ್ತು ಉಳಿಸಿಕೊಂಡಿದೆ. ಕೇವಲ ಕಿವಿಯಿಂದಲೇ ಇಡೀ ಪ್ರಪಂಚವನ್ನು ಅರಿಯುವ ನಾವು ಆಕಾಶವಾಣಿಯಲ್ಲಿ ತಮ್ಮ ಧ್ವನಿ ಮೂಲಕ ನಮ್ಮನ್ನು ತಲುಪುವ ವ್ಯಕ್ತಿ ಯಾರೆಂಬುದನ್ನು ಅರಿತಿರಲ್ಲ.
ಬೆಂಗಳೂರು[ನ.02] ಆಕಾಶವಾಣಿಯ ಇಂದಿನ ಕಾರ್ಯಕ್ರಮಗಳ ಪಟ್ಟಿ ಖಂಡಿತ ನಮಗೆ ಯಾರಿಗೂ ನೆನಪಿಲ್ಲ. ಟಿವಿ, ಮೊಬೈಲ್, ಯು ಟ್ಯೂಬ್ ನಲ್ಲಿ ಮುಳುಗಿ ಹೋಗಿದ್ದೇವೆ. ಮುಂಜಾನೆ 6.55ಕ್ಕೆ ಸಂಸ್ಕೃತ ವಾರ್ತೆಯನ್ನು ಒಂದು ತಲೆಮಾರಿನ ಜನ ಮರೆಯಲು ಸಾಧ್ಯವೇ ಇಲ್ಲ.
ಸಂಸ್ಕೃತ ವಾರ್ತಾ ವಾಚಕ ಬಲದೇವಾನಂದ ಸಾಗರ ಅವರು ಆಕಾಶವಾಣಿಯಲ್ಲಿ ತಮ್ಮನಲವತ್ತು ವರ್ಷಗಳ ಸಾರ್ಥಕ ಸೇವೆ ಮುಗಿಸಿದ್ದಾರೆ. ಅವರನ್ನು ಹತ್ತಿರದಿಂದ ನೋಡುವ ಅವಕಾಶ ನಮಗೆ ಈಗ ಲಭ್ಯವಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಬಲದೇವಾನಂದ ಸಾಗರ ಅವರನ್ನು ಸಂಸ್ಥೆಯೊಂದು ಸಂದರ್ಶನ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಸಾವಿರಾರು ಜನರು ಶೇರ್ ಮಾಡುತ್ತ ತಮ್ಮ ಹಳೆಯ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಬನ್ನಿ ನೀವು ಇನ್ನೊಮ್ಮೆ ಅವರ ಧ್ವನಿ ಕೇಳಿಕೊಂಡು ಬನ್ನಿ..