Asianet Suvarna News Asianet Suvarna News

ಮಂಡ್ಯ ಸಂಸದರಿಂದ ಅಧಿಕಾರಿಗೆ ಧಮ್ಕಿ..!

ನಿಷೇದಾಜ್ಞೆ ಹೇರಿಕೆಯನ್ನು ತಕ್ಷಣವೇ ಹಿಂಪಡೆಯಲು ಒತ್ತಡ ಹಾಕಿದ್ದಾರೆ. ಒತ್ತಡಕ್ಕೆ ಮಣಿಯದ ಅಧಿಕಾರಿಗೆ ಜಿಲ್ಲಾಧಿಕಾರಿ ಎದುರಲ್ಲೇ ಏಕವಚನದಲ್ಲೇ ಧಮ್ಕಿ ಹಾಕಿದ್ದಾರೆ. ಧಮ್ಕಿ ಹಾಕಿರುವ ಆಡಿಯೋ ಕ್ಲಿಪ್ ಸುವರ್ಣನ್ಯೂಸ್​​ಗೆ ಲಭ್ಯವಾಗಿದೆ.

Mandya MP Raises Voices Against DC

ಮಂಡ್ಯ(ನ.14): ಮಂಡ್ಯ ಸಂಸದ ಪುಟ್ಟರಾಜು ಅಧಿಕಾರಿ ಮೇಲೆ ದರ್ಪ ಮೆರೆದಿದ್ದಾರೆ. ಜಿಲ್ಲಾಧಿಕಾರಿ ಎದುರಿಗೆ ಅಧಿಕಾರಿಗೆ ಏಕವಚನದಲ್ಲೇ ಮಾತನಾಡಿ ಬೆದರಿಕೆ ಹಾಕಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಮಂಜುಶ್ರೀ, ಅಪರ ಡಿಸಿ, ಇಬ್ಬರು ಎಸಿಗಳ ಸಮ್ಮುಖದಲ್ಲೇ ಅಧಿಕಾರಿಗೆ ಧಮ್ಕಿ ಹಾಕಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಗಭೂಷಣ್ ಪಾಂಡವಪುರದಲ್ಲಿರುವ ಬೇಬಿ ಬೆಟ್ಟ, ಚಿನಕುರಳಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಿದ್ದಾರೆ.

ಇದಕ್ಕೆ ಕೋಪಗೊಂಡ ಸಂಸದ ಪುಟ್ಟರಾಜು ‘ಏಯ್ ಏನ್ ಮಾಡ್ತೀಯಾ ಇಲ್ಲಿ, ನಿನ್ನನ್ನ ಸುಲಭವಾಗಿ ಬಿಡ್ತೀವಾ ಎಂದು ಗಣಿ ಮಾಲೀಕರ ಪರವಾಗಿ ಬೆದರಿಕೆ ಹಾಕಿದ್ದಾರೆ. ಎಷ್ಟು ಸಾವಿರ ಜನರನ್ನು ಕರೆಸಬೇಕೋ ಕರಿಸ್ತೀನಿ. ಬೆಂಗಳೂರು ಮೈಸೂರು ಹೆದ್ದಾರಿ ಬಂದ್ ಮಾಡುವ ಬೆದರಿಕೆಯನ್ನೂ ಒಡ್ಡಿದ್ದಾರೆ.

ಅಲ್ಲದೆ ನಿಷೇದಾಜ್ಞೆ ಹೇರಿಕೆಯನ್ನು ತಕ್ಷಣವೇ ಹಿಂಪಡೆಯಲು ಒತ್ತಡ ಹಾಕಿದ್ದಾರೆ. ಒತ್ತಡಕ್ಕೆ ಮಣಿಯದ ಅಧಿಕಾರಿಗೆ ಜಿಲ್ಲಾಧಿಕಾರಿ ಎದುರಲ್ಲೇ ಏಕವಚನದಲ್ಲೇ ಧಮ್ಕಿ ಹಾಕಿದ್ದಾರೆ. ಧಮ್ಕಿ ಹಾಕಿರುವ ಆಡಿಯೋ ಕ್ಲಿಪ್ ಸುವರ್ಣನ್ಯೂಸ್​​ಗೆ ಲಭ್ಯವಾಗಿದೆ.

Follow Us:
Download App:
  • android
  • ios