Asianet Suvarna News Asianet Suvarna News

ಕಾಂಗ್ರೆಸ್‌ ಶಾಸಕರಿಗೆ ಎದುರಾಗಿದೆ ಡೌಟು

ಕಾಂಗ್ರೆಸ್ ಶಾಸಕರಿಗೆ ಇದೀಗ ಹೊಸ ಅನುಮಾನ ಶುರುವಾಗಿದೆ. ಈಗಾಗಲೇ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದ್ದು, ಆದರೂ ಕೂಡ ಮುಂದೂಡಲ್ಪಡಬಹುದು ಎನ್ನುವ ಡೌಟ್ ಎದುರಾಗಿದೆ. 

Karnataka Cabinet expansion may be deferred
Author
Bengaluru, First Published Dec 6, 2018, 7:30 AM IST

ಬೆಂಗಳೂರು :  ಸಂಪುಟ ವಿಸ್ತ​ರ​ಣೆಗೆ ಡಿ.22ರ ಮಹೂರ್ತ ನಿಗ​ದಿ​ಯಾಗಿದೆ ಎಂದು ಖುದ್ದು ಸಮ​ನ್ವಯ ಸಮಿತಿ ಅಧ್ಯಕ್ಷ ಸಿದ್ದ​ರಾ​ಮಯ್ಯ ಹೇಳಿ​ದ್ದರೂ, ಅದನ್ನು ನಂಬುವ ಸ್ಥಿತಿ​ಯಲ್ಲಿ ಸಂಪುಟ ಸ್ಥಾನಾಕಾಂಕ್ಷಿ ಕಾಂಗ್ರೆಸ್‌ ಶಾಸ​ಕರು ಇಲ್ಲ. 

ಇದು ಅಧಿ​ವೇ​ಶನ ಸುಗ​ಮ​ವಾಗಿ ನಡೆ​ಸಲು ಹೂಡಿ​ರುವ ತಂತ್ರ ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೆ, ಡಿ.16ರಿಂದ ಧನುರ್ಮಾಸ ಶುರುವಾಗಲಿದೆ. 2019ರ ಜನವರಿ 14ರವರೆಗೆ ಧನುರ್ಮಾಸ ಮುಂದುವರೆಯಲಿದ್ದು, ಧನುರ್ಮಾಸದಲ್ಲಿ ಶುಭ ಕಾರ್ಯ ಮಾಡಬಾರದು ಎಂಬ ನಂಬಿ​ಕೆ​ಯಿದೆ. 

ಹೀಗಾಗಿ ಡಿ.22ರ ವೇಳೆಗೆ ಧನುರ್ಮಾಸದ ನೆಪವೊಡ್ಡಿ ಸಂಪುಟ ವಿಸ್ತರಣೆ ಮತ್ತೆ ಮುಂದಕ್ಕೆ ಹಾಕುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ. ಇದಾದ ನಂತರ ಸ್ಥಳೀಯ ಸಂಸ್ಥೆ​ಗಳ ಚುನಾ​ವಣೆ ಹಾಗೂ ಅನಂತ​ರದ ಬಜೆಟ್‌ ಅಧಿ​ವೇ​ಶ​ನದ ಕಾರ​ಣ​ಗ​ಳನ್ನು ನೀಡಿ ಸಂಪುಟ ವಿಸ್ತ​ರಣೆ ಎಂಬುದನ್ನು ಮರೀ​ಚಿ​ಕೆ​ಯ​ನ್ನಾ​ಗಿ​ಸುವ ಸಾಧ್ಯ​ತೆಯೂ ಇದೆ ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios