Asianet Suvarna News Asianet Suvarna News

ಮಂಡ್ಯ ಆಯ್ತು ಈಗ ಹಾಸನದಲ್ಲೂ ಐಟಿ ರೇಡ್: ಎಚ್. ಡಿ. ರೇವಣ್ಣ ಆಪ್ತರಿಗೆ ಶಾಕ್!

ಹಾಸನದಲ್ಲಿ ಎಚ್.ಡಿ.ರೇವಣ್ಣ ಆಪ್ತರಿಗೆ ಐಟಿ ಶಾಕ್| ಹಾಸನದಲ್ಲಿ 10ಕ್ಕೂ ಹೆಚ್ಚು ಕಡೆ ಐಟಿ ಅಧಿಕಾರಿಗಳ ದಾಳಿ| ಸಚಿವ ರೇವಣ್ಣ ಬೆಂಬಲಿತ ಗುತ್ತಿಗೆದಾರರ ಮನೆ ಮೇಲೆ ದಾಳಿ| ಗುತ್ತಿಗೆದಾರ ರಾಯಿಗೌಡ, ಅಶ್ವತ್, ನಾರಾಯಣರೆಡ್ಡಿ ಮನೆ ಮೇಲೆ ದಾಳಿ

IT Raid On Karnataka Minister HD Revanna s Close Aids
Author
Bangalore, First Published Mar 28, 2019, 9:12 AM IST

ಹಾಸನ[ಮಾ.28]: ಸಿಎಂ ಐಟಿ ದಾಳಿ ನಡೆಯುವ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ ರಾಜ್ಯದ ಉದ್ಯಮಿ ಹಾಗೂ ಜೆಡಿಎಸ್ ನಾಯಕರ ಮೇಲೆ ಐಟಿ ರೇಡ್ ಆರಂಭವಾಗಿದೆ. ಬುಧವಾರ ರಾತ್ರಿ ಬೆಂಗಳೂರಿನ ಉದ್ಯಮಿಗಳ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಗುರುವಾರ ಮುಂಜಾನೆ ಸಚಿವ ಸಿ. ಎಚ್ ಪುಟ್ಟರಾಜು ಹಾಗೂ ಅವರ ಕುಟುಂಬ ಸದಸ್ಯರ ನಿವಾಸಗಳ ಮೇಲೆ ಐಟಿ ರೇಡ್ ನಡೆದಿತ್ತು. ಇದಾದ ಬೆನ್ನಲ್ಲೇ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಆಪ್ತರ ಮೇಲೂ ದಾಳಿ ಮಾಡಲಾಗಿದೆ.

"

ಸಿಎಂ ಕುಮರಸ್ವಾಮಿ ಸಹೋದರ ಹಾಗೂ ಲೋಕೋಪಯೋಗಿ ಸಚಿವ ರೇವಣ್ಣ ಆಪ್ತರ ಮೇಲೆ 10 ಕಡೆ ಐಟಿ ಅಧಿಕಾರಿಗಳು ಮಾಡಿದ್ದಾರೆ. ಹೆಚ್ ಡಿ ರೇವಣ್ಣ ಅವರ ಆಪ್ತರಾದ ನಾರಾಯಣ ರೆಡ್ಡಿ, ಅಶ್ವಥ್ ಹಾಗೂ ರಾಯನ ಗೌಡ ಮನೆ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಹಾಗೂ ಆದಾಯ ತೆರಿಗೆ ವಂಚನೆಯ ಕುರಿತು ದಾಖಲೆಗಳನ್ನು ಕಲೆಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸಿಎಂ ಹೇಳಿದ ಕೆಲ ಗಂಟೆಗಳಲ್ಲೇ ಸಚಿವ ಪುಟ್ಟರಾಜುಗೆ ಐಟಿ ಶಾಕ್!

ಬುಧವಾರ ರಾತ್ರಿಯಷ್ಟೇ ಸಿಎಂ ಕುಮಾರಸ್ವಾಮಿ ಅವರು ಐಟಿ ದಾಳಿ ನಡೆಯುವ ನಮಾತುಗಳನ್ನಾಡಿದ್ದರು. ಈ ಕುರಿತಾಗಿ ಬಿಜೆಪಿ ನಾಯಕರೇ ತನಗೆ ಕರೆ ಮಾಡಿ ಮಾಹಿತಿ ನೀಡಿರುವುದಾಗಿಯೂ ತಿಳಿಸಿದ್ದರು. ಇದರ ಬೆನ್ನಲ್ಲೇ ದಾಳಿ ನಡೆದಿರುವುದು ಹಲವಾರು ಅನುಮಾನಗಳನ್ನು ಹುಟ್ಟು ಹಾಕಿದೆ.

Follow Us:
Download App:
  • android
  • ios