ಮತ್ತೊಂದು ವಿವಾದದಲ್ಲಿ ಸರ್ಕಾರದ ಇಂದಿರಾ ಕ್ಯಾಂಟೀನ್ ಯೋಜನೆ
ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಕಾವೇರಿಪುರಂ ವಾರ್ಡ್ ನಲ್ಲಿ ಅರಂಭವಾಗಬೇಕಿದ್ದ ಕ್ಯಾಂಟೀನ್ ಈಗ ಕಾಮಾಕ್ಷಿಪಾಳ್ಯ ವಾರ್ಡ್ಗೆ ಶಿಫ್ಟ್ ಆಗಿದೆ.
ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟೀನ್ ಯೋಜನೆ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದೆ. ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಕಾವೇರಿಪುರಂ ವಾರ್ಡ್ ನಲ್ಲಿ ಅರಂಭವಾಗಬೇಕಿದ್ದ ಕ್ಯಾಂಟೀನ್ ಈಗ ಕಾಮಾಕ್ಷಿಪಾಳ್ಯ ವಾರ್ಡ್ಗೆ ಶಿಫ್ಟ್ ಆಗಿದೆ. ಇದು ಕಾಮಾಕ್ಷಿಪಾಳ್ಯ ವಾರ್ಡ್ ಕಾರ್ಪೊರೇಟರ್ ಪ್ರತಿಮಾ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಮನಸೋ ಇಚ್ಛೆ ನಡೆದುಕೊಳ್ಳುತ್ತಿದ್ದಾರೆ ಅಂತಾ ಕಾಮಾಕ್ಷಿಪಾಳ್ಯ ಪೊಲೀಸರಿಗೆ ದೂರು ನೀಡಲಾಗಿದೆ. ವಿವಾದ ಇದ್ರೂ ಅಧಿಕಾರಿಗಳು ಮಾತ್ರ ಪೊಲೀಸ್ ಭದ್ರತೆಯಲ್ಲಿ ಕಾಮಾಕ್ಷಿಪಾಳ್ಯ ವಾರ್ಡ್ನಲ್ಲಿ ಇಂದಿರಾ ಕ್ಯಾಂಟೀನ್ ಕಾಮಗಾರಿ ಮುಂದುವರೆಸಿದ್ದಾರೆ.
198 ಕ್ಯಾಂಟಿನ್ ನಿರ್ಮಾಣಕ್ಕೆ ಸರ್ಕಾರ ಹೇಳಿದ್ದೇನೋ ಸರಿ... ಅಷ್ಟು ಮಾತ್ರಕ್ಕೆ ಎಲ್ಲಿ ಬೇಕೆಂದರಲ್ಲಿ ಕ್ಯಾಂಟಿನ್ ನಿರ್ಮಾಣ ಮಾಡ್ತಿರೋದು ಎಷ್ಟು ಸರಿ..? ಅಷ್ಟಕ್ಕೂ ಕಾವೇರಿ ಪುರಂ ವಾರ್ಡ್ ನಲ್ಲಿ ನಿರ್ಮಾಣವಾಗಬೇಕಿದ್ದ ಕ್ಯಾಂಟಿನ್ ಇದ್ದಕ್ಕಿದ್ದಂತೆ ಸ್ಥಳಾಂತರ ಆಗಿದ್ಯಾಕೆ..?ಇಲ್ಲೂ ರಾಜಕೀಯ ಕೆಸರೆರಚಾಟ ಶುರುವಾಯ್ತಾ ಅನ್ನೊ ಪ್ರಶ್ನೆ ಕೇಳಿಬಂದಿದೆ.