ಮೋದಿ ಸಲಹೆಯಂತೆ ಇಪಿಎಸ್ ಜೊತೆ ವಿಲೀನ: ಒಪಿಎಸ್
ಕಳೆದ ವರ್ಷ ಎಐಎಡಿಎಂಕೆಯಿಂದ ಇಬ್ಭಾಗವಾಗಿದ್ದ ತಮ್ಮ ಬಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಬಣದೊಂದಿಗೆ ವಿಲೀನಗೊಳಿಸಿದ್ದಾಗಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಉಪಪಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಹೇಳಿದ್ದಾರೆ.
ಚೆನ್ನೈ: ಕಳೆದ ವರ್ಷ ಎಐಎಡಿಎಂಕೆಯಿಂದ ಇಬ್ಭಾಗವಾಗಿದ್ದ ತಮ್ಮ ಬಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯ ಮೇರೆಗೆ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ (ಇಪಿಎಸ್) ಬಣದೊಂದಿಗೆ ವಿಲೀನಗೊಳಿಸಿದ್ದಾಗಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಉಪಪಮುಖ್ಯಮಂತ್ರಿ ಒ. ಪನ್ನೀರ್ಸೆಲ್ವಂ ಹೇಳಿದ್ದಾರೆ.
ಥೇಣಿಯಲ್ಲಿ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪನ್ನೀರಸೆಲ್ವಂ, ಕಳೆದ ವರ್ಷ ದೆಹಲಿಯಲ್ಲಿ ಮೋದಿ ಅವರ ಜೊತೆ ನಡೆದ ಸೌಜನ್ಯದ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು. ‘ಪಕ್ಷವನ್ನು ಉಳಿಸುವ ಸಲುವಾಗಿ ನಿಮ್ಮ ಬಣವನ್ನು ವಿಲೀನಗೊಳಿಸಬೇಕು’ ಎಂದು ಮೋದಿ ಸಲಹೆ ನೀಡಿದ್ದರು ಹೇಳಿದರು. 2017ರ ಆಸ್ಟ್ನಲ್ಲಿ ಎಐಎಡಿಎಂಕೆಯ ಪನ್ನೀರ್ಸೆಲ್ವಂ ಬಣ ಹಾಗೂ ಪಳನಿಸ್ವಾಮಿ ಬಣಗಳು ಒಂದಾಗಿದ್ದವು.