Asianet Suvarna News Asianet Suvarna News

ಯಾವ ಲೆಕ್ಕ ಹುಲು ಮಾನವರು?: ವಾಯುಮಾಲಿನ್ಯದಿಂದ ಮಾಸ್ಕ್ ಧರಿಸಿದ ದೇವರು!

ವಾಯುಮಾಲಿನ್ಯದಿಂದ ಮಾಸ್ಕ್ ಮೊರೆ ಹೋದ ದೇವರು| ವಾರಾಣಸಿಯಲ್ಲಿ ದೇವರ ಮೂರ್ತಿಗಳಿಗೆ ಮಾಸ್ಕ್ ಹಾಕಿದ ಅರ್ಚಕರು|  ಸಿಗ್ರಾ ಪ್ರದೇಶದಲ್ಲಿರುವ ಶಿವ-ಪಾರ್ವತಿ ದೇವಸ್ಥಾನದಲ್ಲಿ ದೇವರ ಮೂರ್ತಿಗಳಿಗೆ ಮಾಸ್ಕ್| ಶಿವ, ದುರ್ಗಾ ಹಾಗೂ ಸಾಯಿಬಾಬಾ ದೇವರ ಮೂರ್ತಿಗಳಿಗೆ ಮಾಸ್ಕ್| ಅಪರಿಶುದ್ಧ ಗಾಳಿ ದೇವರಿಗೆ ತಾಗಬಾರದು ಎಂಬ ಕಾರಣಕ್ಕೆ ಮಾಸ್ಕ್|

Idols In Varanasi Temple Get Masks As Air Pollution Spikes
Author
Bengaluru, First Published Nov 6, 2019, 3:25 PM IST

ವಾರಾಣಸಿ(ನ.06): ರಾಷ್ಟ್ರ ರಾಜಧಾನಿ ನವದೆಹಲಿ ತೀವ್ರತರವಾದ ವಾಯುಮಾಲಿನ್ಯದಿಂದ ಕಂಗಾಲಾಗಿದೆ. ಅಪರಿಶುದ್ಧ ಗಾಳಿ ದೆಹಲಿ ಮಾತ್ರವಲ್ಲದೇ ಹತ್ತಿರದ ಉತ್ತರಪ್ರದೇಶಕ್ಕೂ ಪಸರಿಸಿ ಜನರಲ್ಲಿ ಆತಂಕ ಸೃಷ್ಟಿಸಿದೆ.

ರಾಜಧಾನಿಯಲ್ಲಿ ಮಾಲಿನ್ಯ ವಿಪರೀತಕ್ಕೆ

ಈ ಮಧ್ಯೆ ವಾಯುಮಾಲಿನ್ಯದ ಪರಿಣಾಮವಾಗಿ ಪ್ರಧಾನಿ ಮೋದಿ ಸ್ವಕ್ಷೇತ್ರ ವಾರಾಣಸಿಲ್ಲಿ ದೇವರಿಗೆ ಮಾಸ್ಕ್ ಹಾಕಲಾಗಿದೆ. ಇಲ್ಲಿನ ಸಿಗ್ರಾ ಪ್ರದೇಶದಲ್ಲಿರುವ ಶಿವ-ಪಾರ್ವತಿ ದೇವಸ್ಥಾನದಲ್ಲಿ ದೇವರ ಮೂರ್ತಿಗಳಿಗೆ ಮಾಸ್ಕ್ ಹಾಕಲಾಗಿದೆ.

ರಾಜಧಾನಿ ಮಾಲಿನ್ಯ: ಸರ್ಕಾರದ ವಿರುದ್ಧ ಸುಪ್ರೀಂ

ಶಿವ, ದುರ್ಗಾ ಹಾಗೂ ಸಾಯಿಬಾಬಾ ದೇವರ ಮೂರ್ತಿಗಳಿಗೆ ಮಾಸ್ಕ್ ಹಾಕಲಾಗಿದ್ದು, ಅಪರಿಶುದ್ಧ ಗಾಳಿ ದೇವರಿಗೆ ತಾಗಬಾರದು ಎಂಬ ಕಾರಣಕ್ಕೆ ಮಾಸ್ಕ್ ಹಾಕಲಾಗಿದೆ ಎಂದು ಪೂಜಾರಿಗಳು ತಿಳಿಸಿದ್ದಾರೆ.

ಮಾಲಿನ್ಯ ಕೊಂಚ ಇಳಿಕೆ: ರಾಜಕೀಯ ಕಿತ್ತಾಟ ಏರಿಕೆ

ಈ ಕುರಿತು ಮಾಹಿತಿ ನೀಡಿರುವ ದೇವಸ್ಥಾನದ ಮುಖ್ಯ ಅರ್ಚಕ, ಚಳಿಗಾಲದಲ್ಲಿ ದೇವರಿಗೆ ಚಳಿಯಾಗಬಾರದು ಎಂಬ ಕಾರಣಕ್ಕೆ ಕಂಬಳಿ ಹೊದಿಸಲಾಗುತ್ತದೆ. ಅದರಂತೆ ಅಪರಿಶುದ್ಧ ವಾತಾವರಣದಲ್ಲಿ ದೇವರ ಮೂರ್ತಿಗಳಿಗೆ ಮಾಸ್ಕ್ ಹೊದಿಸಲಾಗಿದೆ ಎಂದು ತಿಳಿಸಿದ್ದಾರೆ.

ದಿಲ್ಲಿಯಲ್ಲಿ ಮತ್ತೆ ಸಮ-ಬೆಸ ಸಂಚಾರ; ಮಾಲಿನ್ಯ ತಡೆಗೆ ದೆಹಲಿ ಸರ್ಕಾರ ಪ್ರಯೋಗ

Follow Us:
Download App:
  • android
  • ios