Asianet Suvarna News Asianet Suvarna News

ಗಾಂಧಿ ಕೊಂದ ಗೂಡ್ಸೆ ಪರ ನಿಂತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ

ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ್ದ ನಾತೂ ರಾಮ್​ ಗೋಡ್ಸೆ ಪರ ಹಿಂದೂ ಮಹಾಸಭಾ ಬ್ಯಾಟಿಂಗ್​ ಮಾಡಿದೆ.

Hindu Mahasabha President Subramanya Made Controversial Statement

ಮಂಗಳೂರು : ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ್ದ ನಾತೂ ರಾಮ್​ ಗೋಡ್ಸೆ ಪರ ಹಿಂದೂ ಮಹಾಸಭಾ ಬ್ಯಾಟಿಂಗ್​ ಮಾಡಿದೆ.

ಮಂಗಳೂರಿನಲ್ಲಿ ಮಾತನಾಡಿದ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯರಾಜು, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಂದು ಗಾಂಧೀಜಿಯ ಹತ್ಯೆ ಅನಿವಾರ್ಯವಾಗಿತ್ತು ಅಂತ ಸುಬ್ರಹ್ಮಣ್ಯರಾಜು ಹೇಳಿದ್ದಾರೆ.

ಗಾಂಧೀಜಿ ಪಾಕ್​ ಮುಸಲ್ಮಾನರಿಗೆ ಪೂರಕವಾದ ನಿಲುವು ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಗಾಂಧಿಯಿಂದ ದೇಶಕ್ಕೆ ಮತ್ತು ಹಿಂದೂ ಸಮಾಜಕ್ಕೆ ಅಪಾಯವಿತ್ತು. ದೇಶಕ್ಕೆ ಕಂಟಕವಾಗುವ ವ್ಯಕ್ತಿಗಳನ್ನು ಮಟ್ಟ ಹಾಕೋದು ನಮ್ಮ ಕಾನೂನು. ಈ ಹಿನ್ನೆಲೆಯಲ್ಲಿ ಗೋಡ್ಸೆ ಗಾಂಧೀಜಿಯನ್ನು ಹತ್ಯೆ ಮಾಡಿದ್ದಾರೆ ಎಂದು ಸರ್ಮರ್ಥನೆ ನೀಡಿದ್ದಾರೆ.

ಇನ್ನು ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ  ಸುಬ್ರಹ್ಮಣ್ಯರಾಜು ಹೇಳಿಕೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.

Follow Us:
Download App:
  • android
  • ios