ಎಚ್ಡಿಕೆಗೆ ಯಶಸ್ವಿ ಶಸ್ತ್ರಚಿಕಿತ್ಸೆ :ಒಂದು ವಾರ ಆಸ್ಪತ್ರೆಯಲ್ಲಿ ವಿಶ್ರಾಂತಿ
ಕವಾಟದಲ್ಲಿ ಇನ್ಫೆಕ್ಷನ್ ಆಗಿದ್ದ ಹಿನ್ನೆಲೆ ಕೆಮ್ಮು ಜಾಸ್ತಿಯಾಗಿತ್ತು. ಟಿಶ್ಯೂವಾಲ್ವ್ ಬದಲು ಆಯೋಟಿಕ್ ವಾಲ್ವ್ ಅಳವಡಿಸಲಾಗಿದೆ.
ಬೆಂಗಳೂರು(ಸೆ.23): ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಹೃದಯದ ಕವಾಟ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ನಗರದ ಅಪೋಲೋ ಆಸ್ಪತ್ರೆಯಲ್ಲಿ ಡಾ.ಸತ್ಯಕಿ ನೇತೃತ್ವದಲ್ಲಿ ಯಶಸ್ವಿ ಚಿಕಿತ್ಸೆ ನಡೆಸಲಾಗಿದ್ದು, 5 ರಿಂದ 7 ದಿನ ಕುಮಾರಸ್ವಾಮಿ ಆಸ್ಪತ್ರೆಯಲ್ಲೇ ಇರಬೇಕಾಗುತ್ತೆ. ಡಿಸ್ಚಾರ್ಜ್ ಬಳಿಕ 2 ವಾರ ವಿಶ್ರಾಂತಿ ಅಗತ್ಯವಿದೆ' ಎಂದು ಹೆಚ್'ಡಿಕೆಯವರ ಸಂಬಂಧಿಕರು ಆದ ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥ ಡಾ. ಸಿ. ಮಂಜುನಾಥ್ ತಿಳಿಸಿದರು.
ಸಂಜೆವರೆಗೆ ಎಚ್ಡಿಕೆ ವೆಂಟಿಲೇಟರ್ನಲ್ಲಿ ಇರಲಿದ್ದಾರೆ. ಕವಾಟದಲ್ಲಿ ಇನ್ಫೆಕ್ಷನ್ ಆಗಿದ್ದ ಹಿನ್ನೆಲೆ ಕೆಮ್ಮು ಜಾಸ್ತಿಯಾಗಿತ್ತು. ಟಿಶ್ಯೂವಾಲ್ವ್ ಬದಲು ಆಯೋಟಿಕ್ ವಾಲ್ವ್ ಅಳವಡಿಸಲಾಗಿದೆ. ಆಯೋಟಿಕ್ ವಾಲ್ವ್ 15 ವರ್ಷಗಳ ಕಾಲ ಬಾಳಿಕೆ ಬರಲಿದೆ. ಎಚ್ಡಿಕೆಗೆ ಸಕ್ಕರೆ ಕಾಯಿಲೆ. ತೂಕ ನಿಯಂತ್ರಣದಲ್ಲಿ ಇಡಬೇಕು. ಆಹಾರ ಪಥ್ಯ ತುಂಬಾ ಅಗತ್ಯವಿದೆ' ಎಂದು ಮಂಜುನಾಥ್ ತಿಳಿಸಿದ್ದಾರೆ.