Asianet Suvarna News Asianet Suvarna News

ಗುಮ್ಮಟ ನಗರಿ ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು: ಕುಡಿದ ಮತ್ತಿನಲ್ಲಿ ಮಹಿಳೆಯ ಮೇಲೆ ಫೈರಿಂಗ್

ಗುಮ್ಮಟ ನಗರಿ ವಿಜಯಪುರದಲ್ಲಿ  ಕೆಲ ದಿನಗಳ ಬಳಿಕ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದೆ. ನಗರದ ಶಾಸ್ತ್ರಿ ಕಾಲೋನಿಯಲ್ಲಿ ಮಹಿಳೆಯನ್ನ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದೆ. ಆದ್ರೆ ಅದೃಷ್ಠವಶಾತ್ ಮುಮ್ತಾಜ್ ಖಾನ್ ಎನ್ನುವ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

Firing In Vijayapura

ವಿಜಯಪುರ(ಸೆ.20): ಗುಮ್ಮಟ ನಗರಿ ವಿಜಯಪುರದಲ್ಲಿ  ಕೆಲ ದಿನಗಳ ಬಳಿಕ ಮತ್ತೆ ಗುಂಡಿನ ಮೊರೆತ ಕೇಳಿ ಬಂದಿದೆ. ನಗರದ ಶಾಸ್ತ್ರಿ ಕಾಲೋನಿಯಲ್ಲಿ ಮಹಿಳೆಯನ್ನ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದೆ. ಆದ್ರೆ ಅದೃಷ್ಠವಶಾತ್ ಮುಮ್ತಾಜ್ ಖಾನ್ ಎನ್ನುವ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಮುಮ್ತಾಜ್ ಖಾನ್ ಮೇಲೆ ರಹಿಂ ನಗರದ ಸಮೀರ್ ಪಠಾಣ ಎಂಬಾತ 2 ಸುತ್ತು ಫೈರಿಂಗ್ ನಡೆಸಿದ್ದಾನೆ.ಮನೆ ಎದುರು ಬಂದ ಸಮೀರ್ ಪಠಾಣ ಇದ್ದಕ್ಕಿಂತೆ ಮುಮ್ತಾಜ್ ಮೇಲೆ ಪೈರಿಂಗ್ ಮಾಡಿದ್ದಾನೆ. ಆದ್ರೆ ಆಕೆ ಮನೆ ಒಳಗೆ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾಳೆ. ಅಷ್ಟಕ್ಕೂ ಈ ಘಟನೆಗೆ ಮುಖ್ಯ ಕಾರಣ ಅಂದ್ರೆ, ಮುಮ್ತಾಜಳ ಪುತ್ರ ಸಲ್ಮಾನ್ ಖಾನ್ ಫೈರಿಂಗ್ ನಡೆಸಿದ ಸಮೀರ್ ಪಠಾಣನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಹೀಗಾಗಿ ಕುಡಿದ ಮತ್ತಲ್ಲಿ ಬಂದ ಸಮೀರ್ ಸಲ್ಮಾನ್ ತಾಯಿ ಮುಮ್ತಾಜ್ ಮೇಲೆ ಫೈರಿಂಗ್ ಮಾಡಿ ರಾರಿಯಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿರುವ ಗಾಂಧಿ ಚೌಕ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನು ಪೈರಿಂಗ್ ನಡೆದ ಸ್ಥಳದಲ್ಲಿ 2 ಗುಂಡಿನ ಕ್ಯಾಪ್ ಗಳು ಮತ್ತೆಯಾಗಿವೆ. 

 

Follow Us:
Download App:
  • android
  • ios