ಚಿಕ್ಕಮ್ಮನ ಮೇಲೆ ದರ್ಪ: ಸ್ಯಾಂಡಲ್ವುಡ್ ನಟನ ವಿರುದ್ಧ ಎಫ್ಐಆರ್
ಈಗ ತಾನೇ ಉದಯೋನ್ಮುಖ ನಟನಾಗಿ ಸ್ಯಾಂಡಲ್ವುಡ್ ನಲ್ಲಿ ಅಂಬೆಗಾಲಿಡುತ್ತಿರುವ ರಿಷಿಗೆ ಸಂಕಷ್ಟ ಎದುರಾಗಿದೆ.
ಬೆಂಗಳೂರು, [ಅ.17]: ಚಿಕ್ಕಮ್ಮನ ಮೇಲೆ ದರ್ಪ ಮೆರೆದಿದ್ದ ಸ್ಯಾಂಡಲ್ವುಡ್ನ ಉದಯೋನ್ಮುಖ ನಟ ಮನಿಷ್ ರಿಷಿ ವಿರುದ್ಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಸ್ಯಾಂಡಲ್ ವುಡ್ ನಟ ರಿಷಿ ವಿಕಲಚೇತನ ಚಿಕ್ಕಮ್ಮನ ಮೇಲೆ ಹಲ್ಲೆ ಮಾಡಿದ್ದರು. ಈ ಕುರಿತು ಸಂತ್ರಸ್ತೆ ದೂರು ದಾಖಲಿಸಿದ್ದರು. ಇದೇ ತಿಂಗಳ 11 ರಂದು ಎನ್ಸಿಆರ್ ದಾಖಲಿಸಿಕೊಂಡಿದ್ದ ಪೊಲೀಸರು, ಇದೀಗ ಎಫ್ಐಆರ್ ದಾಖಲಿಸಿಕೊಂಡಿದ್ದು ರಿಷಿಯನ್ನು ಎ2 ಆರೋಪಿಯನ್ನಾಗಿ ಮಾಡಿದ್ದಾರೆ.
ಸ್ಯಾಂಡಲ್ವುಡ್ ನಟನ ರಾಕ್ಷಸೀ ಕೃತ್ಯ ಬಯಲು; ಈತ ಹೀರೋ ಅಲ್ಲ, ವಿಲನ್!
ಏನಿದು ಘಟನೆ?
ಆಪರೇಷನ್ ಅಲುಮೇಲಮ್ಮ ಚಿತ್ರದ ಮೂಲಕ ಬೆಳ್ಳಿ ತೆರೆಯಲ್ಲಿ ಗುರುತಿಸಿಕೊಂಡಿದ್ದ ನಟ ರಿಷಿ, ಬಸವೇಶ್ವರನಗರದಲ್ಲಿರುವ ಮನೆಗೆ ತಂದೆಯನ್ನು ನೋಡಲು ಚಿಕ್ಕಮ್ಮ ಶಾಲಿನಿ ಗುರುಮೂರ್ತಿ ತೆರಳಿದ್ದಾಗ ಕುತ್ತಿಗೆ ಹಿಸುಕಿ, ಮಚ್ಚು ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ತಾತನ ಮನೆಯಲ್ಲೇ ರಿಷಿ ಮತ್ತು ಆತನ ತಂದೆ ತಾಯಿ ವಾಸವಿದ್ದು, ಶಾಲಿನಿಗೆ ಸ್ಟ್ಯಾಂಪ್ ಪೇಪರ್ಗೆ ಸಹಿ ಮಾಡಿ ಒಳಗೆ ಬರುವಂತೆ ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ರಿಷಿ ಜೊತೆಗೆ ತಾಯಿ ಅನಲಾ ಮತ್ತು ತಂದೆ ನಾಗರಾಜ್ ಸೇರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಾಲಿನಿ ಆರೋಪಿಸಿದ್ದಾರೆ.