ಆರ್. ಅಶೋಕ್ ಒತ್ತಡದಿಂದ ಬಿಜೆಪಿಯಿಂದ ಅಮಾನತ್ತಾದರಾ ವೆಂಕಟೇಶ್ ಮೂರ್ತಿ?
ಮಾಜಿ ಮೇಯರ್ ವೆಂಕಟೇಶ ಮೂರ್ತಿ, ರಾಯಣ್ಣ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿಗೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಬ್ರಿಗೇಡ್ ಸಭೆ ನಡೆಸದಂತೆ ಆರ್. ಅಶೋಕ್ ತಾಕೀತು ಮಾಡಿದ್ದರು. ಹೀಗಿದ್ದರೂ ಆರ್. ಅಶೋಕ್ ಮಾತಿಗೆ ಕ್ಯಾರೆ ಎನ್ನದೇ ವೆಂಕಟೇಶ್ ಮೂರ್ತಿ ಸಭೆ ನಡೆಸಲು ಮುಂದಾಗಿದ್ದರು. ಇವರ ಈ ನಿಲುವಿನಿಂದ ಸಿಟ್ಟಿಗೆದ್ದ ಅಶೋಕ್ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರು(ಜ.11): ಮಾಜಿ ಮೇಯರ್ಗೆ ಗೇಟ್'ಪಾಸ್ ಕೊಡಲು ಆರ್. ಅಶೋಕ್ ಕಾರಣನಾ? ಹೀಗೊಂದು ಅನುಮಾನ ಇದೀಗ ಕಾಡಲಾರಂಭಿಸಿದೆ. ಆರ್. ಅಶೋಕ್ ಒತ್ತಡದಿಂದಲೇ ಬಿಜೆಪಿಯಿಂದ ವೆಂಕಟೇಶ್ ಮೂರ್ತಿ ಅಮಾನತ್ತಾದರಾ?
ಮಾಜಿ ಮೇಯರ್ ವೆಂಕಟೇಶ ಮೂರ್ತಿ, ರಾಯಣ್ಣ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿಗೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಬ್ರಿಗೇಡ್ ಸಭೆ ನಡೆಸದಂತೆ ಆರ್. ಅಶೋಕ್ ತಾಕೀತು ಮಾಡಿದ್ದರು. ಹೀಗಿದ್ದರೂ ಆರ್. ಅಶೋಕ್ ಮಾತಿಗೆ ಕ್ಯಾರೆ ಎನ್ನದೇ ವೆಂಕಟೇಶ್ ಮೂರ್ತಿ ಸಭೆ ನಡೆಸಲು ಮುಂದಾಗಿದ್ದರು. ಇವರ ಈ ನಿಲುವಿನಿಂದ ಸಿಟ್ಟಿಗೆದ್ದ ಅಶೋಕ್ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಹಿಂದೆ ಯಡಿಯೂರಪ್ಪ ಸಿಎಂ ಆಗಲು ಬ್ರಿಗೇಡ್ ಬೆಂಬಲ ಇಲ್ಲ ಎಂದು ಈಶ್ವರಪ್ಪ ಹೇಳಿದ್ದರು. ಇವರ ಈ ಮಾತಿಗೆ ತಿರುಗೇಟು ನೀಡಲು ವೆಂಕಟೇಶಮೂರ್ತಿಯನ್ನು ಬಿಜೆಪಿಯಿಂದ ಅಮಾನತುಗೊಳಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.