Asianet Suvarna News Asianet Suvarna News

ದಿನ ಭವಿಷ್ಯ: ಧನಸ್ಸು ರಾಶಿಯವರಿಗೆ ಅಂದುಕೊಂಡ ಕಾರ್ಯ ಈಡೇರಲಿದೆ, ಉಳಿದವರ ಭವಿಷ್ಯ ಹೇಗಿರಲಿದೆ ಗೊತ್ತಾ..?

ಇಂದಿನ ರಾಶಿಫಲ ನಿಮ್ಮ ಮುಂದೆ...

Dina Bhavishya in Kannada 20 January 2018

ಶ್ರೀ ಹೇಮಲಂಬಿ ನಾಮ ಸಂವತ್ಸರ

ಉತ್ತರಾಯಣ

ಶಿಶಿರ ಋತು

ಮಾಘ ಮಾಸ

ಶಕ್ಲ ಪಕ್ಷ

ತೃತೀಯ ತಿಥಿ

ಶತಭಿಷ ನಕ್ಷತ್ರ

ಶನಿವಾರ

ಮೇಷ ರಾಶಿ : ಗುರುವಿನ ಅನುಕೂಲ ದೊರೆಯಲಿದೆ, ದೈಹಿಕ ಸಾಮರ್ಥ್ಯ ಹೆಚ್ಚಲಿದೆ, ಸುಬ್ರಹ್ಮಣ್ಯ ಗಾಯತ್ರಿ ಪಠಿಸಿ

ವೃಷಭ : ರಾಶಿಯ ಅಧಿಪತಿಯು  ರವಿ ಕೇತುಗಳ ಜೊತೆ ಇರುವುದರಿಂದ ಸ್ತ್ರೀಯರಿಂದ ತೊಂದರೆ, ದ್ರವ್ಯ ನಾಶ,

ಮಿಥುನ : ರಾಶ್ಯಾಧಿಪತಿ ಬಾಧಾಸ್ಥಾನದಲ್ಲಿರುವುದರಿಂದ ದು:ಖ ವಾರ್ತೆಗಳನ್ನು ಕೇಳಲಿದ್ದೀರಿ. ಸಾಮಾನ್ಯದಿನ, ಹೆಸರುಕಾಳು ದಾನ ಮಾಡಿ

ಕಟಕ : ಅಕ್ಕಪಕ್ಕದವರೊಂದಿಗೆ ಕಲಹ, ಆರೋಗ್ಯ ಹಾನಿ, ಜಲದುರ್ಗೆಯ ದರ್ಶನ ಮಾಡಿ

ಸಿಂಹ : ರಾಶ್ಯಾಧಿಪತಿ ಸಪ್ತಮದಲ್ಲಿರುವುದರಿಂದ ಪ್ರಯಾಣದ ದಿನ, ಅನಾರೋಗ್ಯ, ಆದಿತ್ಯ ಹೃದಯಪಾರಾಯಣ ಮಾಡಿ

ಕನ್ಯಾ : ರಾಶ್ಯಾಧಿಪತಿಯಾದ ಬುಧ ಚತುರ್ಥದಲ್ಲಿ ಶತ್ರು ಮನೆಯಲ್ಲಿದ್ದುದರಿಂದ ಬಂಧು ಕಲಹ, ಮನ:ಕ್ಲೇಶ, ತಾಯಿ ಅನಾರೋಗ್ಯ, ಅನ್ನಪೂರ್ಣೇಶ್ವರಿ ದರ್ಶನ ಮಾಡಿ

ತುಲಾ : ರಾಶ್ಯಾಧಿಪತಿ ಚತುರ್ಥದಲ್ಲಿದ್ದುದರಿಂದ ಬಂಧು ಸೌಖ್ಯ, ಸ್ತ್ರೀ ಸೌಖ್ಯ, ಸ್ತ್ರೀಯರಿಂದ ಪ್ರಶಂಸೆ, ಲಲಿತಾ ಸಹಸ್ರನಾಮ ಪಠಿಸಿ

ವೃಶ್ಚಿಕ : ಆತ್ಮಸ್ಥೈರ್ಯ, ಚೋರರ ಭಯ, ಸಹೋದರರಲ್ಲಿ ಮನಸ್ತಾಪ, ಸುಬ್ರಹ್ಮಣ್ಯನಿಗೆ ಅಭಿಷೇಕ ಮಾಡಿಸಿ

ಧನಸ್ಸು : ರಾಶ್ಯಾಧಿಪತಿ ಲಾಭದಲ್ಲಿರುವುದರಿಂದ ಜಯ, ಅಂದುಕೊಂಡ ಕಾರ್ಯ ಈಡೇರಲಿದೆ, ಧನಸ್ಥನದಲ್ಲಿನ ಕೇತುವಿನಿಂದ ಧನ ವ್ಯಯ

ಮಕರ : ಸಾಮಾನ್ಯದಿನ, ಬೇಸರದ ಸಂಗತಿ, ಹೆಚ್ಚು ಚಿಂತನೆ, ಆಲೋಚನೆ, ಶಿವನಿಗೆ ಅಭಿಷೇಕ ಮಾಡಿಸಿ

ಕುಂಭ : ಧನ ಪ್ರಾಪ್ತಿ, ಗುರುವಿನ ಅನುಗ್ರಹವಿದೆ, ಉತ್ತಮ ಚಿಂತನೆ, ಗುರು ಮಂತ್ರ, ಗುರು ಚರಿತ್ರೆ ಪಾರಾಯಣ ಮಾಡಿ

ಮೀನ : ಸಾಮಾನ್ಯ ದಿನವಾಗಿರಲಿದೆ, ವ್ಯಾಕುಲತೆ ಕಾಡಲಿದೆ,  ವಾಗ್ದೇವಿ ಮಂತ್ರೋಪಾಸನೆ ಮಾಡಿ

-------------------------

ಡಾ.ಗೋಪಾಲಕೃಷ್ಣ ಶರ್ಮ,ಜ್ಯೋತಿಷಿಗಳು

Follow Us:
Download App:
  • android
  • ios