Asianet Suvarna News Asianet Suvarna News

ಮತದಾರನಿಂದ ಬಿಜೆಪಿಗೆ ತ್ರಿಬಲ್ ತಲಾಖ್: ತರೂರ್ ಮತ್ತೆ ಬಾಯ್ಬಿಟ್ರು!

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಹಿನ್ನೆಲೆ| ತಮ್ಮದೇ ಶೈಲಿಯಲ್ಲಿ ಪ್ರಧಾನಿ ಮೋದಿ ಕಿಚಾಯಿಸಿದ ಕಾಂಗ್ರೆಸ್ ನಾಯಕ| ಬಿಜೆಪಿಗೆ ಮತದಾರ ತಲಾಖ್ ನೀಡಿದ್ದಾನೆ ಎಂದ ಶಶಿ ತರೂರ್| ಬಿಜೆಪಿಗೆ ಮತದಾರ ಮೂರು ಬಾರಿ ತಲಾಖ್ ನೀಡಿದ್ದಾನೆ ಎಂದ ತರೂರ್

Congress Leader Shashi Tharoor Appreciate Voter Sentiment
Author
Bengaluru, First Published Dec 12, 2018, 8:59 PM IST

ನವದೆಹಲಿ(ಡಿ.12): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಡ್ ರಾಜ್ಯಗಳ ಮತದಾರ ಬಿಜೆಪಿ ಆಡಳಿತದಿಂದ ಬೇಸತ್ತು ಮೋದಿ ಅವರಿಗೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ಈ ಫಲಿತಾಂಶ ನಿರೀಕ್ಷಿತವಾಗಿತ್ತು ಎಂದು ಅಭಿಪ್ರಾಯಪಟ್ಟಿರುವ ತರೂರ್, ಅಭಿವೃದ್ಧಿಯನ್ನು ಮರೆಮಾಚಿ ಮಂದಿರ, ಪ್ರತಿಮೆ, ತಲಾಖ್ ನಂತಹ ವಿಷಯಗಳನ್ನು ಮುಂದೆ ಮಾಡಿದ್ದ ಬಿಜೆಪಿಗೆ ಮತದಾರ ತಕ್ಕ ಪಾಠ ಕಲಿಸಿದ್ದಾನೆ ಎಂದು ಕುಹುಕವಾಡಿದ್ದಾರೆ.

Follow Us:
Download App:
  • android
  • ios