Asianet Suvarna News Asianet Suvarna News

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಪತ್ತೆಗೆ ರೂ. 5 ಲಕ್ಷ ಬಹುಮಾನ!

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ತಂತ್ರಗಾರಿಕೆಗೆ ಕಾಂಗ್ರೆಸ್ ಪ್ರಶಾಂತ್ ಕಿಶೋರ್ ಅವರನ್ನು ಬಳಸಿಕೊಂಡಿತ್ತು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿರುವ ಬಳಿಕ ಪ್ರಶಾಂತ್ ಕಿಶೋರ್ ಯಾರದೇ ಸಂಪರ್ಕದಲ್ಲಿಲ್ಲವೆಂದು ಹೇಳಲಾಗಿದೆ.

Congress Leader Announces 5 Lakh Reward for Tracing Prashant Kishore

ಲಕ್ನೋ (ಮಾ.20): ಚುನಾವಣಾ ನೀತಿ ತಂತ್ರಗಾರ ಪ್ರಶಾಂತ್ ಕಿಶೋರ್’ರನ್ನು ಪತ್ತೆಹಚ್ಚಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಸಿಗಲಿದೆಯಂತೆ!

ಹೀಗೊಂದು ಪೋಸ್ಟರ್’ವೊಂದು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ಸ್ಥಳೀಯ ಕಾಂಗ್ರೆಸ್ ನಾಯಕರೇ ಹಾಕಿದ್ದಾರೆಂದು ತಿಳಿದುಬಂದಿದೆ.

Congress Leader Announces 5 Lakh Reward for Tracing Prashant Kishore

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಚುನಾವಣಾ ತಂತ್ರಗಾರಿಕೆಗೆ ಕಾಂಗ್ರೆಸ್ ಪ್ರಶಾಂತ್ ಕಿಶೋರ್ ಅವರನ್ನು ಬಳಸಿಕೊಂಡಿತ್ತು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿರುವ ಬಳಿಕ ಪ್ರಶಾಂತ್ ಕಿಶೋರ್ ಯಾರದೇ ಸಂಪರ್ಕದಲ್ಲಿಲ್ಲವೆಂದು ಹೇಳಲಾಗಿದೆ.

ಯಾರು ಪ್ರಶಾಂತ್ ಕಿಶೋರ್ ಅವರನ್ನು ಹುಡುಕಿಕೊಡುತ್ತಾರೋ ಅವರಿಗೆ ಐದು ಲಕ್ಷ ರೂ ಬಹುಮಾನ ನೀಡುವುದಾಗಿ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯನಾಗಿರುವ ರಾಜೇಶ್ ಸಿಂಗ್ ಪ್ರಕಟನೆ ನೀಡಿದ್ದಾರೆ.

 ಆದರೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ರಾಜ್ ಬಬ್ಬರ್ ಆ ಪೋಸ್ಟರನ್ನು ತಕ್ಷಣವೇ ತೆಗೆದು ಹಾಕುವಂತೆ ಪಕ್ಷ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

Follow Us:
Download App:
  • android
  • ios