ಜಾಹಿರಾತು ಮೂಲಕ ಮೋದಿಗೆ ಸಿಎಂ ಟಾಂಗ್
ಜಾಹೀರಾತು ಮೂಲಕ ಮೋದಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಬೆಂಗಳೂರು (ಫೆ.17): ಜಾಹೀರಾತು ಮೂಲಕ ಮೋದಿಗೆ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಕಳೆದ ಮೋದಿ ಭೇಟಿ ವೇಳೆಯೂ ಜಾಹೀರಾತಿನಲ್ಲೇ ಸಿದ್ದರಾಮಯ್ಯ ಟಾಂಗ್ ನೀಡಿದ್ದರು. ನಂ. 1 ಕರ್ನಾಟಕಕ್ಕೆ ಸ್ವಾಗತ ಎಂದು ಜಾಹೀರಾತು ಮೂಲಕ ಟಾಂಗ್ ಕೊಟ್ಟಿದ್ದರು. ಈಗ, ಸಹಯೋಗದಲ್ಲೂ ಕರ್ನಾಟಕವೇ ಮುಂದು ಎಂಬ ಜಾಹೀರಾತಿನಿಂದ ಕೌಂಟರ್ ಅಟ್ಯಾಕ್ ಮಾಡಿದ್ದಾರೆ.
ಮೈಸೂರು-ಬೆಂಗಳೂರು ರೈಲ್ವೆ ಯೋಜನೆಗೆ ರಾಜ್ಯದ ಪಾಲೆಷ್ಟು ಬಗ್ಗೆ ಜಾಹೀರಾತಿನಲ್ಲಿ ರೈಲ್ವೆ ಯೋಜನಾ ವೆಚ್ಚದಲ್ಲಿ ಪಾಲು ವಹಿಸಿಕೊಂಡ ಮೊದಲ ರಾಜ್ಯ ಕರ್ನಾಟಕ. ಮೈಸೂರು - ಬೆಂಗಳೂರು ಜೋಡಿ ರೈಲು ಮಾರ್ಗದ ಒಟ್ಟು ವೆಚ್ಚ 990 ಕೋಟಿ ರೂ. 581 ಕೋಟಿ ರೂಪಾಯಿಯನ್ನು ಕರ್ನಾಟಕ ಸರ್ಕಾರ ವೆಚ್ಚ ಮಾಡಿದೆ. ರೈಲ್ವೆ ಇಲಾಖೆ ಕೊಟ್ಟಿರೋದು ಕೇವಲ 409 ಕೋಟಿ ರೂ. ಇದರಿಂದ ಈ ಮಾರ್ಗದಲ್ಲಿದ್ದ 24 ರೈಲುಗಳ ಸಂಖ್ಯೆ 76 ಕ್ಕೆ ಏರಲಿದೆ ಎಂದು ಜಾಹಿರಾತಿನಲ್ಲಿ ಹೇಳಿದ್ದರು.