ಮೋದಿಯವರದು ಮನ್ ಕೀ ಬಾತ್, ನಮ್ಮದು ಕಾಮ್ ಕೀ ಬಾತ್ : ಪ್ರಧಾನಿ ಮುಂದೆ ಮಾತನಾಡಲು ಬಿಎಸ್'ವೈ'ಗೆ ಮೀಟರಿಲ್ಲ
ಮೋದಿ ಅವರದ್ದು ಕೇವಲ ಮನ್ ಕೀ ಬಾತ್, ಕಾಂಗ್ರೆಸ್'ನದ್ದು ಕಾಮ್ ಕೀ ಬಾತ್. ವಿಮಾನದಲ್ಲಿ ಸುತ್ತೋದು ಬಿಟ್ರೆ ಮೋದಿ ಇನ್ನೇನು ಮಾಡಿಲ್ಲ
ಬೆಂಗಳೂರು(ಸೆ.23): ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ವಿರುದ್ಧ ಏಕವಚನದಲ್ಲೇ ಸಿಎಂ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ರಾಜ್ಯದ ಢೋಂಗಿ ರಾಜಕಾರಣಿ. ಯಡಿಯೂರಪ್ಪ ನೀನೇ ಜೈಲಿಗೆ ಹೋಗಿ ಬಂದಿದ್ದೀಯಾ, ನೀನೇ ಕಷ್ಟದಲ್ಲಿಯಾ ? ನಮ್ಮ ವಿರುದ್ಧ ಚಾರ್ಜ್ ಸೀಟ್ ಹಾಕೋಕೆ ಆಗುತ್ತಾ ಎಂದು ಸಿಎಂ ಸಾವಾಲೆಸೆದರು. ಇನ್ನೂ ಮೋದಿ- ಬಿಜೆಪಿ ನಾಯಕರನ್ನೂ ಸಿಎಂ ಕೆಣಕಿದರು. ಮೋದಿ ಅವರದ್ದು ಕೇವಲ ಮನ್ ಕೀ ಬಾತ್, ಕಾಂಗ್ರೆಸ್'ನದ್ದು ಕಾಮ್ ಕೀ ಬಾತ್. ವಿಮಾನದಲ್ಲಿ ಸುತ್ತೋದು ಬಿಟ್ರೆ ಮೋದಿ ಇನ್ನೇನು ಮಾಡಿಲ್ಲ. ಸಾಲಮನ್ನಾ ಬಗ್ಗೆ ಮೋದಿ ಎದುರು ಮಾತನಾಡಲು ಯಡಿಯೂರಪ್ಪ, ಸದಾನಂದಗೌಡ, ಅನಂತಕುಮಾರ್, ಶೆಟ್ಟರ್ ಸೇರಿದಂತೆ ಯಾರಿಗೂ ಮೀಟರ್ ಇಲ್ಲ ಎಂದು ಸಿಎಂ ಛೇಡಿಸಿದರು.