ಲೈಂಗಿಕ ಕಿರುಕುಳ ಆರೋಪಿ ಚಿನ್ಮಯಾನಂದ ಸಂತ ಪದವಿಗೆ ಕತ್ತರಿ?
ಲೈಂಗಿಕ ಕಿರುಕುಳ ಆರೋಪಿ ಚಿನ್ಮಯಾನಂದ ಸಂತ ಪದವಿಗೆ ಶೀಘ್ರ ಕತ್ತರಿ?| ಸಮುದಾಯದಿಂದಲೇ ಬಹಿಷ್ಕಾರಕ್ಕೆ ತುತ್ತಾಗುವ ಸಾಧ್ಯತೆ
ಪ್ರಯಾಗ್ರಾಜ್[ಸೆ.23]: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಜೈಲು ಸೇರಿರುವ ಬಿಜೆಪಿ ಮುಖಂಡ, ಕೇಂದ್ರದ ಮಾಜಿ ಸಚಿವ ಚಿನ್ಮಯಾನಂದ ಈಗ ಇನ್ನಷ್ಟುಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ತಮ್ಮ ಮೇಲೆ ಕೇಳಿಬಂದಿರುವ ಗಂಭೀರ ಆರೋಪ ಪರಿಣಾಮ ಸಮುದಾಯದಿಂದಲೇ ಬಹಿಷ್ಕಾರಕ್ಕೆ ತುತ್ತಾಗುವ ಸಾಧ್ಯತೆ ಇದೆ.
ಗುರು-ಶಿಷ್ಯ ಪರಂಪರೆ ಉಳಿಸಿಕೊಂಡು ಬರುವ ಸಮುದಾಯಲ್ಲಿ ಗುರುತಿಸಿಕೊಂಡಿರುವ ಚಿನ್ಮಯಾನಂದ ಅವರು ಇದೀಗ ಅದೇ ಸಮುದಾಯದಿಂದ ಬಹಿಷ್ಕಾರ ಎದುರಿಸುವ ಸ್ಥಿತಿ ನಿರ್ಮಾಣವಾಗಿದೆ.
ಸಮುದಾಯದ ಪ್ರಬಲ ಸಂಘಟನೆಯಾದ ಅಖಿಲ ಭಾರತೀಯ ಅಖಾಡ ಪರಿಷತ್(ಎಬಿಎಪಿ) ಸಭೆ ಸೇರಿ ಚಿನ್ಮಯಾನಂದ ಅವರ ಮೇಲೆ ಕೇಳಿಬಂದಿರುವ ಆರೋಪದ ಬಗ್ಗೆ ಚರ್ಚಿಸಿ, ಸಮುದಾಯದಿಂದಲೇ ದೂರವಿಡುವ ನಿರ್ಧಾರಕ್ಕೆ ಬಂದಿದೆ. ಅಲ್ಲದೆ ಸಭೆಯಲ್ಲಿ ಚಿನ್ಮಯಾನಂದಗೆ ನೀಡಿದ್ದ ಸಂತ ಪದವಿಯನ್ನೂ ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ.