Asianet Suvarna News Asianet Suvarna News

ಬೆಳಕಿನ ಹಬ್ಬದಂದೆ ಕತ್ತಲು ಆವರಿಸಿದೆ: ಪಟಾಕಿ ಹಚ್ಚಲು ಹೋಗಿ ಯಡವಟ್ಟು

ಬೆಳಕಿನ ಹಬ್ಬ ದೀಪಾವಳಿ, ಬಾಳು ಬೆಳಗಬೇಕಾದ ಹಬ್ಬ ಈ ಬಾರಿಯೂ ಕೆಲವರ ಬಾಳಲ್ಲಿ ಕತ್ತಲು ಆವರಿಸುವಂತೆ ಮಾಡಿದೆ. ಬೆಂಗಳೂರಿನಲ್ಲಿ ಮೊದಲ ದಿನವೇ 3, ಬಳ್ಳಾರಿಯಲ್ಲಿ 1 ಪಟಾಕಿ ಅವಘಡ ನಡೆದಿವೆ.

Children condition serious because of crackers

ಬೆಂಗಳೂರು(ಅ.19): ಬೆಳಕಿನ ಹಬ್ಬ ದೀಪಾವಳಿ, ಬಾಳು ಬೆಳಗಬೇಕಾದ ಹಬ್ಬ ಈ ಬಾರಿಯೂ ಕೆಲವರ ಬಾಳಲ್ಲಿ ಕತ್ತಲು ಆವರಿಸುವಂತೆ ಮಾಡಿದೆ. ಬೆಂಗಳೂರಿನಲ್ಲಿ ಮೊದಲ ದಿನವೇ 3, ಬಳ್ಳಾರಿಯಲ್ಲಿ 1 ಪಟಾಕಿ ಅವಘಡ ನಡೆದಿವೆ.

ಕಬ್ಬನ್ ಪೇಟೆಯಲ್ಲಿ 10 ವರ್ಷದ ಬಾಲಕ ಭುವೇಶ್​ ಪಟಾಕಿ ಹಚ್ಚಲು ಹೋಗಿ ಗಾಯಗೊಂಡು ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಹಲಸೂರು ಎಂ.ವಿ.ಗಾರ್ಡನ್ ನಿವಾಸಿ 9 ವರ್ಷದ ವಿಲಿಯಂ ರಾಕೆಟ್ ಹಾರಿಸುವ ವೇಳೆ ಗಾಯಗೊಂಡು ನಾರಾಯಣ ನೇತ್ರಾಲಯ ಸೇರಿದ್ದಾನೆ.

ಆಡುಗೋಡಿಯ ಎಲ್.ಆರ್ ನಗರದ ಬೀದಿಲಿ ಯಾರೋ ಹಚ್ಚಿದ ರಾಕೆಟ್ ಕಣ್ಣಿಗೆ ತಾಕೀ , ಶಾರುಕ್ ಕಣ್ಣು ಕಳೆದುಕೊಂಡಿದ್ದಾನೆ. ಶಾರುಕ್ ಸ್ಥಿತಿ ಗಂಭಿರವಾಗಿದ್ದು,ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಬಳ್ಳಾರಿಯಲ್ಲೂ ಕೂಡ ಓರ್ವ ಬಾಲಕನ  ಮುಖಕ್ಕೆ ಗಾಯವಾಗಿದೆ.