ಪ್ರಾಕೃತಿಕ ವಿಕೋಪ ತಡೆಗೆ ಹನುಮಾನ್ ಚಾಲೀಸಾ ಪಠಿಸಿ
ಪ್ರಾಕೃತಿಕ ವಿಕೋಪಗಳ ತಡೆಗಾಗಿ ಹನುಮಾನ್ ಚಾಲೀಸಾ ಮಂತ್ರ ಪಠಿಸುವಂತೆ ರೈತರಿಗೆ ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ಕರೆ ನೀಡಿದ್ದಾರೆ.
ಭೋಪಾಲ್: ಪ್ರಾಕೃತಿಕ ವಿಕೋಪಗಳ ತಡೆಗಾಗಿ ಹನುಮಾನ್ ಚಾಲೀಸಾ ಮಂತ್ರ ಪಠಿಸುವಂತೆ ರೈತರಿಗೆ ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ಕರೆ ನೀಡಿದ್ದಾರೆ.
ಈ ಬಗ್ಗೆ ಸೋಮವಾರ ಮಾತನಾಡಿದ ಬಿಜೆಪಿಯ ಮಾಜಿ ಶಾಸಕ ರಮೇಶ್ ಸಕ್ಸೇನಾ, ‘ಮುಂದಿನ 4-5 ದಿನಗಳಲ್ಲಿ ಭಾರೀ ಕುಂಭದ್ರೋಣ ಮಳೆಯಾಗಲಿದ್ದು, ಪರಿಸರ ವೈಪರಿತ್ಯ ಎದುರಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಘಟನೆ ತಡೆಯಲು ಪ್ರಾರ್ಥಿಸಿ, ಎಲ್ಲ ರೈತರು ಮುಂದಿನ ಐದು ದಿನಗಳ ಕಾಲ ಹನುಮಾನ್ ಚಾಲೀಸಾ ಮಂತ್ರ ಪಠಿಸಬೇಕು,’ ಎಂದು ಮನವಿ ಮಾಡಿದ್ದಾರೆ. ‘ಪ್ರತಿದಿನ ಹನುಮಾನ್ ಚಾಲೀಸಾ ಮಂತ್ರ ಪಠಿಸಿದಲ್ಲಿ, ಇಂಥ ಘಟನೆಯನ್ನು ತಡೆಯಬಹುದು ಎಂಬ ಖಚಿತವಾಗಿ ಹೇಳಬಲ್ಲೆ ’ ಎಂದು ಹೇಳಿದ್ದಾರೆ.