Asianet Suvarna News Asianet Suvarna News

ಪ್ರಾಕೃತಿಕ ವಿಕೋಪ ತಡೆಗೆ ಹನುಮಾನ್‌ ಚಾಲೀಸಾ ಪಠಿಸಿ

ಪ್ರಾಕೃತಿಕ ವಿಕೋಪಗಳ ತಡೆಗಾಗಿ ಹನುಮಾನ್‌ ಚಾಲೀಸಾ ಮಂತ್ರ ಪಠಿಸುವಂತೆ ರೈತರಿಗೆ ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ಕರೆ ನೀಡಿದ್ದಾರೆ.

Chant Hanuman Chalisa to Prevent Natural Disasters BJP Leader

ಭೋಪಾಲ್‌: ಪ್ರಾಕೃತಿಕ ವಿಕೋಪಗಳ ತಡೆಗಾಗಿ ಹನುಮಾನ್‌ ಚಾಲೀಸಾ ಮಂತ್ರ ಪಠಿಸುವಂತೆ ರೈತರಿಗೆ ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ಕರೆ ನೀಡಿದ್ದಾರೆ.

ಈ ಬಗ್ಗೆ ಸೋಮವಾರ ಮಾತನಾಡಿದ ಬಿಜೆಪಿಯ ಮಾಜಿ ಶಾಸಕ ರಮೇಶ್‌ ಸಕ್ಸೇನಾ, ‘ಮುಂದಿನ 4-5 ದಿನಗಳಲ್ಲಿ ಭಾರೀ ಕುಂಭದ್ರೋಣ ಮಳೆಯಾಗಲಿದ್ದು, ಪರಿಸರ ವೈಪರಿತ್ಯ ಎದುರಾಗಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಈ ಘಟನೆ ತಡೆಯಲು ಪ್ರಾರ್ಥಿಸಿ, ಎಲ್ಲ ರೈತರು ಮುಂದಿನ ಐದು ದಿನಗಳ ಕಾಲ ಹನುಮಾನ್‌ ಚಾಲೀಸಾ ಮಂತ್ರ ಪಠಿಸಬೇಕು,’ ಎಂದು ಮನವಿ ಮಾಡಿದ್ದಾರೆ. ‘ಪ್ರತಿದಿನ ಹನುಮಾನ್‌ ಚಾಲೀಸಾ ಮಂತ್ರ ಪಠಿಸಿದಲ್ಲಿ, ಇಂಥ ಘಟನೆಯನ್ನು ತಡೆಯಬಹುದು ಎಂಬ ಖಚಿತವಾಗಿ ಹೇಳಬಲ್ಲೆ ’ ಎಂದು ಹೇಳಿದ್ದಾರೆ.

Follow Us:
Download App:
  • android
  • ios