Asianet Suvarna News Asianet Suvarna News

ದೀದಿಗೆ 10 ಲಕ್ಷ ಜೈ ಶ್ರೀರಾಮ್ ಅಂಚೆ ಕಾರ್ಡ್ ರವಾನಿಸಲು ನಿರ್ಧಾರ!

ಪ.ಬಂಗಾಳದಲ್ಲಿ ತಾರಕಕ್ಕೇರಿದ ಜೈ ಶ್ರೀರಾಮ್ ಘೋಷಣೆ| ಜೈ ಶ್ರೀರಾಮ್ ಘೋಷಣೆ ಕೂಗಿದವರಿಗೆ ಲಾಠಿ ಏಟು| ಮಮತಾ ಸರ್ಕಾರದ ವಿರುದ್ಧ ಸಿಡಿದೆದ್ದ ಬಿಜೆಪಿ| ದೀದಿಗೆ 10 ಲಕ್ಷ ಜೈ ಶ್ರೀರಾಮ್ ಅಂಚೆ ಕಾರ್ಡ್ ರವಾನಿಸಲು ನಿರ್ಧಾರ| ಅಂಚೆ ಕಾರ್ಡ್ ರವಾನಿಸಲು ಬಿಜೆಪಿ ಶಾಸಕ ಅರ್ಜುನ್ ಸಿಂಗ್ ನಿರ್ಧಾರ|  

BJP Leader To Send 10 Lakh Jai Shri Ram Post Cards To West Bengal Chief Minister
Author
Bengaluru, First Published Jun 1, 2019, 8:56 PM IST

ಕೊಲ್ಕತ್ತಾ(ಜೂ.01): ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಜೈ ಶ್ರೀರಾಮ್ ಎಂದು ಬರೆದಿರುವ 10 ಲಕ್ಷ  ಅಂಚೆ ಕಾರ್ಡ್ ಗಳನ್ನು ರವಾನಿಸಲು ಬಿಜೆಪಿ ಶಾಸಕ ಅರ್ಜುನ್ ಸಿಂಗ್ ನಿರ್ಧರಿಸಿದ್ದಾರೆ.

ಜೈ ಶ್ರೀರಾಮ್ ಎಂದು ಬರೆದಿರುವ 10 ಲಕ್ಷ ಅಂಚೆ ಕಾರ್ಡ್ ಗಳನ್ನು ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ರವಾನಿಸುವುದಾಗಿ ಅರ್ಜುನ್ ಸಿಂಗ್ ಹೇಳಿದ್ದಾರೆ.

ಟಿಎಂಸಿ ಸಭೆ ಹೊರಗಡೆ ನಡೆಯುತ್ತಿದ್ದ ಪ್ರತಿಭಟನೆ ವೇಳೆಯಲ್ಲಿ, ಜೈ ಶ್ರೀ ರಾಮ್ ಎಂದು ಕೂಗಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಲಾಠಿ ಚಾರ್ಚ್ ನಡೆಸಿದ ನಂತರ ಅರ್ಜುನ್ ಸಿಂಗ್ ಈ ನಿರ್ಧಾರ ಕೈಗೊಂಡಿದ್ದಾರೆ.

ಮಾಜಿ ತೃಣಮೂಲ ಕಾಂಗ್ರೆಸ್ ಶಾಸಕರಾಗಿರುವ ಅರ್ಜುನ್ ಸಿಂಗ್,  ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡೆಯಾಗಿದ್ದರು.

Follow Us:
Download App:
  • android
  • ios